gowrishankara ಕ್ರೇಜಿಸ್ಟಾರ್ ಜತೆಗೂಡಿದ ಅಪೂರ್ವ

ರವಿಚಂದ್ರನ್ ಅವರ ಮುಂಬರುವ ಚಿತ್ರಕ್ಕೆ ಗೌರಿ ಶಂಕರ ಎಂದು ಮರುಹೆಸರಿಡಲಾಗಿದ್ದು, ರೂಪದರ್ಶಿ-ನಟಿ ಬರ್ಖಾ ಸೇನ್ಗುಪ್ತಾ ಅವರ ಬದಲಿಗೆ ನಟಿ ಅಪೂರ್ವ ಅವರು ನಟಿಸುತ್ತಿದ್ದಾರೆ.

ನಟ ಅನೀಸ್ ಅವರ ಚೊಚ್ಚಲ ನಿರ್ದೇಶನದ ಚಿತ್ರಕ್ಕೆ ಕೆಲವೊಂದು ನಿರ್ಣಾಯಕ ಬದಲಾವಣೆ ಮಾಡಲಾಗಿದ್ದು, ಈ ಹಿಂದೆ ಗೌರಿ ಎಂದು ಹೆಸರಿಸಲಾಗಿದ್ದ ಫ್ಯಾಮಿಲಿ ಎಂಟರ್ಟೈನರ್ ಚಿತ್ರಕ್ಕೆ ಗೌರಿ ಶಂಕರ ಎಂದು ಹೆಸರಿಡಲಾಗಿದೆ. ಜೊತೆಗೆ ಅಪೂರ್ವ ಚಿತ್ರತಂಡ ಸೇರಿದ್ದಾರೆ.

ಈ ಹಿಂದೆ ಅಪೂರ್ವ ಅವರು ಕ್ರೇಜಿಸ್ಟಾರ್ ರವಿಚಂದ್ರ ಅವರ ಅಪೂರ್ವ ಚಿತ್ರದಲ್ಲಿ ನಟಿಸಿದ್ದರು.ಈ ಚಿತ್ರ ಅವರಿಗೆ ಹೆಸರನ್ನು ತಂದುಕೊಟ್ಟಿತ್ತು. ಇದೀಗ ಅವರು ಮತ್ತೆ ಕ್ರೇಜಿಸ್ಟಾರ್ ಅವರ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಇತ್ತೀಚೆಗಷ್ಟೇ ವಿಕ್ಟರಿ 2 ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಅಪೂರ್ವ ಅವರು, ಚಿತ್ರೀಕರಣದ ಹಂತದಲ್ಲಿರುವ ಸೂತ್ರಧಾರಿ ಚಿತ್ರದಲ್ಲಿಯೂ ನಟಿಸುತ್ತಿದ್ದಾರೆ. ಗೌರಿ ಶಂಕರ ಚಿತ್ರದ ಚಿತ್ರೀಕರಣವು ಜನವರಿ 22 ರಂದು ದಾಂಡೇಲಿಯಲ್ಲಿ ಪ್ರಾರಂಭವಾಗಲಿದೆ.

ಚಿತ್ರದಲ್ಲಿ ಶೆಫರ್ಡ್ ನಾಯಿ ಕೂಡ ಪ್ರಮುಖ ಪಾತ್ರದಲ್ಲಿ ಕಾಣಸಿಕೊಳ್ಳುತ್ತಿದ್ದು, ಕ್ಯಾಡಬೊಮ್ ಹೇಡರ್ ಎಂಬ ಹೆಸರಿನಲ್ಲಿ ನಾಯಿ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದೆ.

ಗೌರಿ ಶಂಕರ ಚಿತ್ರಕ್ಕೆ ಕಾರ್ತಿಕೇಯನ್ ಅವರ ಸಂಗೀತ, ಸತೀಶ್ ಅವರ ಛಾಯಾಗ್ರಹಣವಿದೆ.

ರವಿಚಂದ್ರನ್ ಅವರು ದರ್ಶನ್ ಅವರ ಕ್ರಾಂತಿ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರ ಗಣರಾಜ್ಯೋತ್ಸವ ದಿನದಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ರವಿಚಂದ್ರನ್ ಅವರು ಧ್ರುವ ಸ ರ್ಜಾ ನಟನೆಯ ಕೆಡಿಯಲ್ಲಿಯೂ ಕಾಣಿಸಿಕೊಳ್ಳುತ್ತಿದ್ದಾರೆ.
___

Be the first to comment

Leave a Reply

Your email address will not be published. Required fields are marked *

Translate »
error: Content is protected !!