ತಮಿಳಿನಲ್ಲಿ ಭರತ್ ಬೋಪಣ್ಣಗೆ ಚಾನ್ಸ್

ರಾಧಾ ಕಲ್ಯಾಣ, ಬ್ರಹ್ಮಗಂಟು ಧಾರಾವಾಹಿಗಳಲ್ಲಿ ನಟಿಸಿ ಪ್ರೇಕ್ಷಕರ ಮನಗೆದ್ದ ಭರತ್ ಬೋಪಣ್ಣ ಅವರು ತಮಿಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲು ಸಜ್ಜಾಗಿದ್ದಾರೆ.

ಡೆಮೊ ಪೀಸ್ ಮೂಲಕ ಸ್ಯಾಂಡಲ್ ವುಡ್’ಗೆ ಎಂಟ್ರಿ ಕೊಟ್ಟಿದ್ದ ಭರತ್ ಬೋಪಣ್ಣ, ಉದ್ಯಮಿ ವಿಜಯ ಸಂಕೇಶ್ವರ ಅವರ ಜೀವನವನ್ನು ಆಧರಿಸಿ ಸಿದ್ಧಗೊಂಡಿರುವ ಪ್ಯಾನ್ ಇಂಡಿಯಾ ‘ವಿಜಯಾನಂದ’ ಚಿತ್ರದಲ್ಲಿ ನಟಿಸಿದ್ದಾರೆ.

ತಲೈವಿ ನಿರ್ದೇಶಕ ವಿಜಯ್ ಅವರೊಂದಿಗೆ ಸಿನಿಮಾ ಮಾಡುವ ಮೂಲಕ ಭರತ್ ಬೋಪಣ್ಣ, ತಮಿಳು ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಅಚ್ಚಂ ಎಂಬತ್ತು ಇಲ್ಲಯೇ ಎಂಬ ಚಿತ್ರದಲ್ಲಿ ಭರತ್ ಬೋಪಣ್ಣ ಅವರು ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಅರುಣ್ ವಿಜಯ್, ನಿಮಿಷಾ ಸಜಯನ್, ಮತ್ತು ಆಮಿ ಜಾಕ್ಸನ್ ಮುಖ್ಯಭೂಮಿಕೆಯಲ್ಲಿದ್ದಾರೆ.

ಈಗಾಗಲೇ ಚಿತ್ರವೊಂದಕ್ಕೆ ಲಂಡನ್ ನಲ್ಲಿ ಚಿತ್ರೀಕರಣ ಮುಗಿಸಿದ್ದು, ತಮಿಳಿನಲ್ಲಿ ದೊಡ್ಡ ಬ್ರೇಕ್ ಸಿಕ್ಕಿರುವುದಕ್ಕೆ ಭರತ್ ಸಂತಸ ವ್ಯಕ್ತಪಡಿಸಿದ್ದಾರೆ.

“ಇದೊಂದು ಔಟ್ ಅಂಡ್ ಔಟ್ ಆಕ್ಷನ್ ಚಿತ್ರವಾಗಿದೆ. ನಾನು ಈ ಹಿಂದೆ ನಿರ್ದೇಶಕ ವಿಜಯ್ ಅವರ ಚಿತ್ರವೊಂದಕ್ಕೆ ಆಡಿಷನ್ ಪಾಲ್ಗೊಂಡಿದ್ದೆ, ಆದರೆ ಆ ಚಿತ್ರದಲ್ಲಿ ನಟಿಸಲು ಸಾಧ್ಯವಾಗಲಿಲ್ಲ. 3 ವರ್ಷಗಳ ನಂತರ ನಿರ್ದೇಶಕರಿಂದ ಕರೆ ಬಂತು. ಕರೆ ಮಾಡಿದ ಅವರು ನೆಗೆಟಿವ್ ಪಾತ್ರದಲ್ಲಿ ನಟಿಸಲು ಆಸಕ್ತಿ ಇದೆಯೇ ಎಂದು ಕೇಳಿದರು. ಆಯಕ್ಷನ್ ಪಾತ್ರಗಳ ಮಾಡಬೇಕೆಂಬುದು ನನ್ನ ಆಸೆಯಾಗಿತ್ತು. ಚಿತ್ರದಲ್ಲಿ ಆಯಂಗ್ರಿ ಎಂಗ್ ಮ್ಯಾನ್ ಪಾತ್ರ ನನ್ನದಾಗಿದೆ. ಈ ಚಿತ್ರ ನನ್ನ ಕನಸನ್ನು ನನಸು ಮಾಡುವ ವಿಶ್ವಾಸವಿದೆ ಎಂದಿದ್ದಾರೆ.

ಚಿತ್ರದ ಚಿತ್ರೀಕರಣ ಚೆನ್ನೈನಲ್ಲಿ ಶೀಘ್ರದಲ್ಲೇ ನಡೆಯಲಿದ್ದು, ಚಿತ್ರೀಕರಣದಲ್ಲಿ ಭರತ್ ಭಾಗಿಯಾಗಲಿದ್ದಾರೆ.
___

Be the first to comment

Leave a Reply

Your email address will not be published. Required fields are marked *

Translate »
error: Content is protected !!