ರಾಜ್ ಕುಂದ್ರಾ ಬೆಂಬಲಕ್ಕೆ ನಿಂತ ನಟಿ

ಅಶ್ಲೀಲ ಚಿತ್ರ ತಯಾರಿ ಹಾಗೂ ಪ್ರಸಾರ ಸಂಬಂಧ ಉದ್ಯಮಿ ರಾಜ್ ಕುಂದ್ರಾ ಅವರನ್ನು ಪೊಲೀಸರು ಉದ್ದೇಶಪೂರ್ವಕವಾಗಿ ಸಿಕ್ಕಿ ಹಾಕಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ನಟಿ ಗೆಹನಾ ವಸಿಷ್ಠ ಆರೋಪಿಸಿದ್ದಾರೆ.

ರಾಜ್ ಕುಂದ್ರಾ ಬಂಧನ ಮುನ್ನ ಅಶ್ಲೀಲ ಚಿತ್ರ ನಟನೆ ಸಂಬಂಧ ಬಂಧನಕ್ಕೆ ಒಳಪಟ್ಟಿದ್ದ ಗೆಹನಾ ವಸಿಷ್ಠ ಸಂದರ್ಶನವೊಂದರಲ್ಲಿ ”ಮುಂಬೈ ಪೊಲೀಸರು ರಾಜ್ ಕುಂದ್ರಾ ಅವರನ್ನು ಸಿಕ್ಕಿಹಾಕಿಸಲು ಉದ್ದೇಶಪೂರ್ವಕವಾಗಿ ವ್ಯೂಹ ಹೆಣೆದಿದ್ದಾರೆ. ಅಲ್ಲದೇ ಮುಂಬೈ ಪೊಲೀಸರು ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ” ಎಂದು ಆರೋಪಿಸಿದ್ದಾರೆ.

“ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಉದ್ಯಮಿ ರಾಜ್ ಕುಂದ್ರಾ ಹಾಗೂ ನಿರ್ಮಾಪಕಿ ಏಕ್ತಾ ಕಪೂರ್ ಹೆಸರನ್ನು ಹೇಳುವಂತೆ ಮುಂಬೈ ಪೊಲೀಸರು ನನ್ನ ಮೇಲೆ ಒತ್ತಡ ಹೇರಿದ್ದರು. ಆದರೆ ನಾನು ಅವರಿಬ್ಬರ ಹೆಸರನ್ನು ಹೇಳಲಿಲ್ಲ. ನಿಮ್ಮನ್ನು ಬಂಧಿಸಬಾರದು ಎಂದರೆ ನಮಗೆ 15 ಲಕ್ಷ ರೂಪಾಯಿ ಹಣ ನೀಡಬೇಕು ಎಂದು ಪೊಲೀಸರು ಲಂಚಕ್ಕೆ ಒತ್ತಾಯಿಸಿದ್ದರು” ಎಂದು ನಟಿ ಹೇಳಿದ್ದಾರೆ.

ಕಳೆದ ಫೆಬ್ರವರಿ ತಿಂಗಳಲ್ಲಿ ಅಶ್ಲೀಲ ವಿಡಿಯೋ ನಿರ್ಮಾಣ ಹಾಗೂ ಮಾಡೆಲ್‌ಗೆ ವಂಚನೆ ಪ್ರಕರಣದಲ್ಲಿ ಮುಂಬೈ ಪೊಲೀಸರು ಗೆಹನಾ ವಸಿಷ್ಠ ಅವರನ್ನು ಬಂಧಿಸಿದ್ದರು. ಗೆಹನಾ ವಸಿಷ್ಠ ಅವರು ರಾಜ್ ಕುಂದ್ರಾ ಅವರಿಗೆ ಕೆಲವು ಎರೊಟಿಕ್ ವಿಡಿಯೋಗಳನ್ನು ಚಿತ್ರೀಕರಿಸಿ ನೀಡಿದ್ದರು ಎನ್ನಲಾಗಿದೆ.

ಗೆಹನಾ ಹೇಳಿರುವಂತೆ ಅವರು ನೀಲಿ ಚಿತ್ರ ತಯಾರಿ ಮಾಡುತ್ತಿರಲಿಲ್ಲ. ಶೃಂಗಾರ ಮಾದರಿಯ ವಿಡಿಯೋ ತಯಾರಿ ಮಾಡುತ್ತಿದ್ದರು. ಅವುಗಳನ್ನು ಹಾಟ್‌ಶಾಟ್ಸ್‌ ಆಪ್‌ನಲ್ಲಿ ಅಪ್ಲೋಡ್ ಮಾಡಲಾಗುತ್ತಿತ್ತು.

Be the first to comment

Leave a Reply

Your email address will not be published. Required fields are marked *

Translate »
error: Content is protected !!