ದರ್ಶನ್ ವಿರುದ್ಧ ಕಾನೂನು ಹೋರಾಟ: ಲಂಕೇಶ್

ಮೂರು ಬಿಟ್ಟವರ ಬಗ್ಗೆ ನಾನು ಏನು ಮಾತನಾಡಲಿ? ನಾನು ಕೊಚ್ಚೆಗೆ ಕಲ್ಲು ಎಸೆಯುವುದಿಲ್ಲ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರು ನಟ ದರ್ಶನ್ ವಿರುದ್ಧ ಹರಿಹಾಯ್ದಿದ್ದಾರೆ.
ದರ್ಶನ್ ವಿರುದ್ಧ ಸುಮೊಟೊ ಕೇಸ್ ಆಗಿದೆ. ಎಫ್ಐಆರ್ ಕೂಡ ಇದೆ. ಹೀಗಾಗಿ ನಾನು ಲೀಗಲ್ ಆಗಿ ಹೋರಾಟ ಮಾಡುತ್ತೇನೆ ಎಂದು ಅವರು ಹೇಳಿದ್ದಾರೆ.

“ಅಂಬಾಸಿಡರ್ ಕಾರಿನಿಂದ ಇದೀಗ ಐಷಾರಾಮಿ ಕಾರಿನವರೆಗೆ ಬರಲು ನಾನು ಪಟ್ಟ ಶ್ರಮ ನನಗೆ ಗೊತ್ತು. ಇಂದು ಅಪ್ಪು ಬಳಿ ಇರುವ ಕಾರೇ ನನ್ನ ಬಳಿಯೂ ಇದೆ. ಇದೆಲ್ಲಾ ನನ್ನ ಬೆವರಿನ ಶ್ರಮ. ನಾನು 10 ಕ್ಲಾಸ್ ಪಾಸ್. ಸಂಗೊಳ್ಳಿ ರಾಯಣ ಸನಿಮಾ ಮಾಡ್ತೀನಿ, ಮೆಜೆಸ್ಟಿಕ್ ಮಾಡ್ತೀನಿ, ಅವನು ನೆಟ್ಟಗೆ ಒಂದು ಸಿನಿಮಾ ನಿರ್ದೇಶನ ಮಾಡಲಿ” ಎಂದು ಇಂದ್ರಜಿತ್‌ಗೆ ದರ್ಶನ್ ಸವಾಲು ಹಾಕಿದ್ದರು.

ಇದೇ ವೇಳೆ ದರ್ಶನ್ ಅವರು “ಗಂಡಸುತನ ಇದ್ದರೆ ಇಂದ್ರಜಿತ್ ಆಡಿಯೋ ರಿಲೀಸ್ ಮಾಡಲಿ ” ಎಂದು ಸವಾಲು ಹಾಕಿದ್ದರು. ಈ ಹಿನ್ನೆಲೆಯಲ್ಲಿ ಇಂದ್ರಜಿತ್ ಲಂಕೇಶ್ ಹೇಳಿ ಮಹತ್ವ ಪಡೆದಿದೆ.

ದರ್ಶನ್ ವಿರುದ್ಧ ಕಾನೂನು ಮೂಲಕ ಹೋರಾಟ ಮಾಡುತ್ತೇನೆ ಎಂದು ಇಂದ್ರಜಿತ್ ಲಂಕೇಶ್ ಹೇಳಿರುವ ಹಿನ್ನೆಲೆ ಇಬ್ಬರ ನಡುವಣ ವಾಕ್ಸಮರ ಸದ್ಯ ತಣ್ಣಗೆ ಆಗುವ ಲಕ್ಷಣ ಕಾಣಿಸಿದೆ.
ದರ್ಶನ್ ಅವರು ಖಾಸಗಿ ಹೋಟೆಲ್ ನಲ್ಲಿ ವೈಟರ್ ಮೇಲೆ ಹಲ್ಲೆ ನಡೆಸಿದ್ದರು ಎಂದು ಇಂದ್ರಜಿತ್ ಆರೋಪಿಸಿ ಕ್ಷಮೆಗೆ ಒತ್ತಾಯಿಸಿದ್ದರು. ಇದನ್ನು ದರ್ಶನ್ ನಿರಾಕರಿಸಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!