‘ಪಾರು’ ಧಾರಾವಾಹಿಯಲ್ಲಿ ನಿರ್ದೇಶಕ ಎಸ್​​​. ನಾರಾಯಣ್​​​​..!

ಕನ್ನಡದ ಲೆಜೆಂಡರಿ ತಾರೆಯರಿಗೆ ಆಕ್ಷನ್​ ಕಟ್​​ ಹೇಳಿರುವ ನಿರ್ದೇಶಕ ಎಸ್​​. ನಾರಾಯಣ್​​​ ಇದೀಗ ಸೀರಿಯಲ್​ ಕಡೆ ಮುಖ ಮಾಡಿದ್ದಾರೆ. ಅರೆ.. ಏನಪ್ಪ ಇದು ಇವರು ಸೀರಿಯಲ್​ ಮಾಡ್ತಿದ್ದಾರಾ ಅಂದುಕೊಂಡ್ರಾ?. ಇಲ್ಲಿ ಎಸ್​​ ನಾರಾಯಣ್​​​​ ನಿರ್ದೇಶಕನಾಗಿ ಬರುತ್ತಿಲ್ಲ, ಬದಲಾಗಿ ಕಿರುತೆರೆ ನಟನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಕನ್ನಡದಲ್ಲಿ ಡಾ. ಅಂಬರೀಶ್, ವಿಷ್ಣುವರ್ಧನ್​​ ವಿ.ರವಿಚಂದ್ರನ್, ಸುದೀಪ್, ದರ್ಶನ್, ಪುನೀತ್, ಶಿವಣ್ಣನಂತಹ ಹೆಸರಾಂತ ನಾಯಕರ ಸಿನಿಮಾಗಳಿಗೆ ನಿರ್ದೇಶನ ಮಾಡಿರುವ ಇವರು, ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಪಾರು’ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಪಾರು’ ಈಗಾಗಲೇ ಒಳ್ಳೆಯ ವೀಕ್ಷಕರನ್ನು ಪಡೆದುಕೊಂಡಿದೆ. ಪಕ್ಕ ಸಿನಿಮಾ ಶೈಲಿಯ ಮೇಕಿಂಗ್ ಸಹ ಇದರಲ್ಲಿದೆ. ಪಾರು ಧಾರಾವಾಹಿಗೆ ಎಸ್ ನಾರಾಯಣ್​​ನಂತಹ ಜನಪ್ರಿಯ ವ್ಯಕ್ತಿ ಆಗಮನ ಕುತೂಹಲವನ್ನು ಹೆಚ್ಚು ಮಾಡಿದೆ.

This Article Has 1 Comment
  1. Pingback: คาสิโน

Leave a Reply

Your email address will not be published. Required fields are marked *

Translate »
error: Content is protected !!