ರಾಜ್ ಬಿ ಶೆಟ್ಟಿ ಅವರ ಕ್ರೈಮ್ ಥ್ರಿಲ್ಲರ್ ‘ರಕ್ಕಸಪುರದೊಳ್’ ಚಿತ್ರದಲ್ಲಿ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
‘ರಕ್ಕಸಪುರದೊಳ್’ ಚಿತ್ರದ ಹಾಡು ಟ್ರ್ಯಾಕ್ ‘ಸಿದ್ದಯ್ಯ ಸ್ವಾಮಿ ಬನ್ನಿ…..’ ಇಂದು ಸಂಜೆ 5 ಗಂಟೆಗೆ ಬಿಡುಗಡೆಯಾಗಲಿದೆ. ನಿರ್ದೇಶಕ ಜೋಗಿ ಪ್ರೇಮ್ ಇದನ್ನು ಹಾಡಿದ್ದಾರೆ. ಅರ್ಜುನ್ ಜನ್ಯ ಈ ಹಾಡಿನಲ್ಲಿ ತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ. ತೆರೆಮರೆಯಲ್ಲಿ ಚಿರಪರಿಚಿತರಾದ ಅರ್ಜುನ್ ಜನ್ಯ ಅವರು ಈ ಹಾಡಿನಲ್ಲಿ ಕಾಣಿಸಿಕೊಂಡಿರುವುದು ವಿಶೇಷವಾಗಿದೆ.
ಗ್ರಾಮಸ್ಥರು ತಮ್ಮ ತೊಂದರೆಗಳ ಪರಿಹಾರಕ್ಕಾಗಿ ಸಿದ್ದಯ್ಯ ಸ್ವಾಮಿಗೆ ಮೊರೆ ಇಡುತ್ತಾರೆ. ಈ ದೃಶ್ಯದಲ್ಲಿ ರಾಜ್ ಬಿ ಶೆಟ್ಟಿ, ಗೌರವ್ ಶೆಟ್ಟಿ ಮತ್ತು ಗ್ರಾಮಸ್ಥರ ದೊಡ್ಡ ಗುಂಪೇ ಕಾಣಿಸಿಕೊಂಡಿದೆ.
ನಿರ್ದೇಶಕ ಪ್ರೇಮ್ ಅವರೊಂದಿಗೆ ಕೆಲಸ ಮಾಡಿರುವ ರವಿ ಸಾರಂಗ ‘ರಕ್ಕಸಪುರದೊಳ್’ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಕೊಳ್ಳೇಗಾಲ ಸುತ್ತಮುತ್ತ ನಡೆಯುವ ಕಥೆಯನ್ನು ಈ ಚಿತ್ರ ಒಳಗೊಂಡಿದೆ.
‘ರಕ್ಕಸಪುರದೊಳ್’ ಚಿತ್ರದ ಫಸ್ಟ್ ಲುಕ್ ಪೋಸ್ಟರ್, ಟೀಸರ್, ‘ನೀನಾ ನೀನಾ…’ ಹಾಡು ಈಗಾಗಲೇ ಸಂಚಲನ ಮೂಡಿಸಿದೆ.
—–





Be the first to comment