ಕುಶಾಲನಗರದಲ್ಲಿ ಕ್ರೇಜಿಸ್ಟಾರ್ ಅಭಿನಯದ ಹೊಸ ಚಿತ್ರ ಆರಂಭ

ಬೆಂಗಳೂರು ಮೂವೀಸ್ ಲಾಂಛನದಲ್ಲಿ ಮ್ಯಾಥ್ಯೂ ಅವರು ನಿರ್ಮಿಸುತ್ತಿರುವ, ಕ್ರೇಜಿಸ್ಟಾರ್ ರವಿಚಂದ್ರನ್ ನಾಯಕರಾಗಿ ನಟಿಸುತ್ತಿರುವ ನೂತನ ಚಿತ್ರದ ಮುಹೂರ್ತ ಸಮಾರಂಭ ಕುಶಾಲನಗರದ ಶುಂಠಿಕೊಪ್ಪ ಬಳಿಯ ನಾಕೂರ್‍ನಲ್ಲಿ ನಡೆಯಿತು. ಉದ್ಯಮಿ ರಾಜಶೇಖರ ರೆಡ್ಡಿ ಅವರು ಚಿತ್ರದ ಮೊದಲ ಸನ್ನಿವೇಶಕ್ಕೆ ಆರಂಭ ಫಲಕ ತೋರಿದರು. ರವಿಕುಮಾರ್(ಪ್ರಜಾ ಟಿವಿ ಎಂ.ಡಿ) ಅವರು ಕ್ಯಾಮೆರಾ ಚಾಲನೆ ಮಾಡಿದರು.

ಅಜಿತ್ ಅವರು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಕುಶಾಲನಗರದ ಸುತ್ತಮುತ್ತ ಮೊದಲ ಹಂತದ ಚಿತ್ರೀಕರಣ ನಡೆಯಲಿದೆ. ಪಿ.ಕೆ.ಎಚ್ ದಾಸ್ ಛಾಯಾಗ್ರಹಣ ಹಾಗೂ ಕೆ.ಡಿ.ವೆಂಕಟೇಶ್ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ಕ್ರೇಜಿಸ್ಟಾರ್ ರವಿಚಂದ್ರನ್, ಲಿಖಿತ್, ಶ್ರೀನಿವಾಸಪ್ರಭು, ಡಾ||ನಾಗೇಶ್, ಕೃಷ್ಣಮೋಹನ್, ಯತಿರಾಜ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

This Article Has 1 Comment
  1. Pingback: Holden Beach Triad Tree Removal Tree Service

Leave a Reply

Your email address will not be published. Required fields are marked *

Translate »
error: Content is protected !!