ಆರ್.ಎಸ್.ಪಿ ಫಿಲಂ ಪ್ರೊಡಕ್ಷನ್ಸ್ ಮತ್ತು ‘ಲೋಕೂರ್ ಫಿಲಂಸ್’ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ‘ರತ್ನಾಪುರ’ ಚಿತ್ರದ ಟ್ರೈಲರ್ ಮತ್ತು ಹಾಡುಗಳು ಇತ್ತೀಚೆಗೆ ಬಿಡುಗಡೆಯಾಗಿವೆ.

ಬೆಂಗಳೂರಿನ ರೇಣುಕಾಂಬ ಸ್ಟುಡಿಯೋದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ, ನಿರ್ದೇಶಕರಾದ ಹಾಲೇಶ್ ಅವರು ಮಾತನಾಡಿ, ಈ ಚಿತ್ರವು ಉತ್ತರ ಕರ್ನಾಟಕದ ಜನಪದ ಆಚರಣೆಯಾದ ‘ಭಂಡಾರ ಉತ್ಸವ’ದ ಕಥಾವಸ್ತುವನ್ನು ಆಧರಿಸಿದೆ. ಸಿನಿಮಾದ ಬಹುತೇಕ ಭಾಗವನ್ನು ಲಾಟೀನು ಮತ್ತು ದೊಂದಿ ಬೆಳಕಿನಲ್ಲಿ ಚಿತ್ರೀಕರಿಸಲಾಗಿದ್ದು, ಚಿತ್ರವು ಶೀಘ್ರದಲ್ಲೇ ತೆರೆಗೆ ಬರಲಿದೆ ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ನಿರ್ಮಾಪಕ ರವಿ ಅಣ್ಣ ಪೂಜಾರಿ, ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಪ್ರವೀಣ ಶೆಟ್ಟರ್ ಮತ್ತು ನಿರ್ದೇಶಕ ಹಾಲೇಶ್ ಲೋಕೂರ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.






Be the first to comment