ರಂಗಾಯಣ ರಘು ಪ್ರಮುಖ ಪಾತ್ರದಲ್ಲಿ ನಟಿಸಿರುವ ಅಜ್ಞಾತವಾಸಿ ಚಿತ್ರ ಭಿನ್ನ ಚಿತ್ರ ಕಥೆಯೊಂದಿಗೆ ಏಪ್ರಿಲ್ 11ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ.
ಮರ್ಡರ್ ಮಿಸ್ಟರಿ ಜಾನರ್ ನಲ್ಲಿ ಈಗಾಗಲೇ ಹಲವು ಸಿನಿಮಾಗಳು ಬಂದಿವೆ. ಆದರೆ ಅಜ್ಞಾತವಾಸಿ ಚಿತ್ರಕಥೆ ಭಿನ್ನವಾಗಿದ್ದು ಪ್ರೇಕ್ಷಕರಿಗೆ ಹೊಸ ಅನುಭವವನ್ನು ನೀಡಲು ಚಿತ್ರತಂಡ ಮುಂದಾಗಿದೆ.
ಚಿತ್ರಕ್ಕೆ ಕೃಷ್ಣರಾಜ್ ಅವರು ಕಥೆ ಬರೆದಿದ್ದಾರೆ. ಮಲೆನಾಡಿನ ಸಣ್ಣ ಹಳ್ಳಿಯೊಂದರಲ್ಲಿ ನಡೆಯುವ ಕಾಲ್ಪನಿಕ ಕಥೆಯನ್ನು ಚಿತ್ರ ಹೊಂದಿದೆ. ಹಳ್ಳಿಯಲ್ಲಿ ಪೊಲೀಸ್ ಸ್ಟೇಷನ್ ಸ್ಥಾಪನೆಯಾಗಿ 25 ವರ್ಷ ಆದರೂ ಯಾವುದೇ ಕೇಸ್ ದಾಖಲಾಗಿರುವುದಿಲ್ಲ. ಒಂದು ದಿನ ಕೊಲೆ ಪ್ರಕರಣ ದಾಖಲಾಗುತ್ತದೆ. ಅನುಭವ ಇಲ್ಲದ ಪೊಲೀಸ್ ಅದನ್ನು ಹೇಗೆ ಬಗೆಹರಿಸುತ್ತಾರೆ ಎನ್ನುವುದು ಕಥೆ ಎಂದು ನಿರ್ದೇಶಕ ಜನಾರ್ಧನ ಚಿಕ್ಕಣ್ಣ ಹೇಳಿದ್ದಾರೆ.
ಜನಾರ್ಧನ್ ಕತೆ ಹೇಳಿದಾಗ ಎಲ್ಲಾ ಪಾತ್ರಗಳ ಮೇಲೆ ಹೊಟ್ಟೆಕಿಚ್ಚು ಆಗುವ ಅನುಭವ ಆಯಿತು. ಎಲ್ಲಾ ಪಾತ್ರಗಳು ಅಷ್ಟೊಂದು ಚೆನ್ನಾಗಿವೆ ಎಂದು ರಂಗಣ್ಣ ರಘು ಹೇಳಿದ್ದಾರೆ.
ಚಿತ್ರವನ್ನು ಹೇಮಂತ್ ಎಂ ರಾವ್ ನಿರ್ಮಾಣ ಮಾಡಿದ್ದಾರೆ. ಪಾವನ ಗೌಡ, ಸಿದ್ದು ಮೂಲಿಮನೆ, ಶರತ್ ಲೋಹಿತಾಶ್ವ, ರವಿಶಂಕರ್ ಗೌಡ ಮೊದಲಾದವರು ತಾರಾ ಬಳಗದಲ್ಲಿದ್ದಾರೆ. ಅದ್ವೈತ್ ಛಾಯಾಗ್ರಹಣ, ಭರತ್ ಸಂಕಲನ, ಚರಣ್ ರಾಜ್ ಸಂಗೀತ ಚಿತ್ರಕ್ಕಿದೆ.
___

Be the first to comment