ಸಲ್ಮಾನ್ ಖಾನ್ ಬಗ್ಗೆ ಪ್ರಮುಖ ನಿರ್ಧಾರ ತೆಗೆದುಕೊಂಡ ಪಾಪರಾಜಿಗಳು

ಪಾಪರಾಜಿಗಳು ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ಧಿಕಿ ಹತ್ಯೆಯ ಬಳಿಕ ಸಲ್ಮಾನ್ ಖಾನ್ ಬಗ್ಗೆ ಪ್ರಮುಖ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.

ಸಲ್ಮಾನ್‌ಗೆ ಬಂದಿರುವ ಬೆದರಿಕೆಗಳ ಗಂಭೀರತೆಯನ್ನು ಪರಿಗಣಿಸಿ ಪಾಪರಾಜಿಗಳು ಅವರ ಸುರಕ್ಷತೆಗಾಗಿ ಪರಿಸ್ಥಿತಿ ಶಾಂತವಾಗುವವರೆಗೆ ಅಥವಾ ಸಲ್ಮಾನ್ ಮೇಲಿನ ಬಿಕ್ಕಟ್ಟು ಬಗೆಹರಿಯುವವರೆಗೆ ಸಲ್ಮಾನ್ ಅವರ ಯಾವುದೇ ಫೋಟೋ ತೆಗೆದುಕೊಳ್ಳಬಾರದು.  ಅವರ ಯಾವುದೇ ಕ್ಷಣಗಳನ್ನು ಶೂಟ್ ಮಾಡದಿರಲು ನಿರ್ಧರಿಸಿದ್ದಾರೆ. ಅವರ ಬಗ್ಗೆ ಯಾವುದೇ ಮಾಹಿತಿ ಹೊರ ಬರಬಾರದು ಎಂದು ನಿರ್ಧರಿಸಿದ್ದಾರೆ.

ಸಲ್ಮಾನ್ ಖಾನ್ ಫೋಟೋ ತೆಗೆಯಲು, ಮುಂದಿನ ಸಿನಿಮಾಗಳ ಬಗ್ಗೆ ತಿಳಿದುಕೊಳ್ಳಲು ಪಾಪಾರಾಜಿಗಳು ಕಾದು ಕೂತಿರ್ತಾರೆ.  ಸಲ್ಮಾನ್ ಖಾನ್ ಅವರ ಚಲನವಲಗಳ ಬಗ್ಗೆಯೂ ಪಾಪಾರಾಜಿಗಳು ಕಣ್ಣಿಟ್ಟಿರುತ್ತಾರೆ. ಆದರೆ ಸದ್ಯ ಸಲ್ಮಾನ್ ಭದ್ರತೆಯಿಂದಾಗಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಸಲ್ಮಾನ್ ಖಾನ್ ಇತ್ತೀಚೆಗೆ ಮುಂಬೈ ಫಿಲ್ಮ್‌ಸಿಟಿಯಲ್ಲಿರುವ ಹಿಂದಿ ಬಿಗ್ ಬಾಸ್ 18ರ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಶೂಟಿಂಗ್ ಮುಗಿಯುವವರೆಗೂ ಸೆಟ್‌ನಲ್ಲಿದ್ದ ಯಾರಿಗೂ ಹೊರಹೋಗಲು ಅವಕಾಶ  ಮತ್ತು ಅಪರಿಚಿತರನ್ನು ಸೆಟ್‌ಗೆ ಬಿಡಲಿಲ್ಲ. ಮುಂದಿನ ದಿನಗಳಲ್ಲಿ ಸಲ್ಮಾನ್ ಖಾನ್ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆ ಇದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!