ಧ್ರುವ ಸರ್ಜಾ ಮ್ಯಾನೇಜರ್ ಅರೆಸ್ಟ್

ದರ್ಶನ್ ಪ್ರಕರಣದ ಬೆನ್ನಲ್ಲೇ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮ್ಯಾನೇಜರ್ ಅಶ್ವಿನ್ ನನ್ನು ಬನಶಂಕರಿ ಪೊಲೀಸರು ಬಂಧಿಸಿದ್ದಾರೆ.

ಜಿಮ್ ಟ್ರೈನರ್ ಪ್ರಶಾಂತ್ ಪೂಜಾರಿ ಎಂಬವರ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಧ್ರುವ ಸರ್ಜಾ ಮ್ಯಾನೇಜರ್ ಅಶ್ವಿನ್ ಬಂಧನಕ್ಕೊಳಗಾಗಿದ್ದಾನೆ.

ಈ ಪ್ರಕರಣ ನಡೆದಿದ್ದು ಮೇ ಕೊನೆಯ ವಾರ. ಜಿಮ್ ಟ್ರೈನರ್ ಪ್ರಶಾಂತ್ ಪೂಜಾರಿ, ಧ್ರುವ ಸರ್ಜಾಗೆ ಆಪ್ತರಾಗಿದ್ದರು.  ಧ್ರುವ ಜೊತೆ ಪ್ರಶಾಂತ್ ಆಪ್ತರಾಗಿರುವುದನ್ನು ನಾಗೇಂದ್ರ, ಅಶ್ವಿನ್‌ ಇಬ್ಬರಿಗೂ ಸಹಿಸಿಕೊಳ್ಳಲು ಆಗಲಿಲ್ಲ. ಇದೇ ಕಾರಣಕ್ಕೆ ಇಬ್ಬರೂ ಸೇರಿ ಪ್ರಶಾಂತ್‌ ಮೇಲೆ ಹಲ್ಲೆ ಮಾಡಲು ನಿರ್ಧರಿಸಿದ್ದರು. ತಾವೇ ಹಲ್ಲೆ ಮಾಡಿದರೆ ಸಿಕ್ಕಿಬೀಳಬಹುದು ಎಂಬ ಕಾರಣಕ್ಕೆ ಹಣ ನೀಡಿ ಬೇರೆಯವರು ಮುಖಾಂತರ ಹಲ್ಲೆ ಮಾಡಿಸಿದ್ದರು.

ಪೊಲೀಸ್‌ ತನಿಖೆಯಲ್ಲಿ ಹಲ್ಲೆ ಹಿಂದೆ ನಾಗೇಂದ್ರ ಹಾಗೂ ಅಶ್ವಿನ್‌ ಪಾತ್ರವಿದೆ ಎಂದು ತಿಳಿದು  ಅರೆಸ್ಟ್‌ ಮಾಡಿ ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ. ಸುಭಾಷ್‌ ಹಾಗೂ ಆತನ ಸಹಚರ ಹರ್ಷ ಎನ್ನುವವರು ಪ್ರಶಾಂತ್‌ ಮೇಲೆ ಹಲ್ಲೆ ನಡೆಸಿದ್ದರು. ಇವರಿಗೆ ಧ್ರುವ ಸರ್ಜಾ ಮ್ಯಾನೇಜರ್‌ ಅಶ್ವಿನ್‌ ಕೂಡಾ ಸಹಾಯ ಮಾಡಿದ್ದ ಎಂಬ ಕಾರಣಕ್ಕೆ ಎಲ್ಲರ ವಿರುದ್ಧ ದೂರು ದಾಖಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಅಶ್ವಿನ್‌ ಹಾಗೂ ಇನ್ನಿತರರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.

ಘಟನೆ ಬಗ್ಗೆ ಧ್ರುವ ಸರ್ಜಾ ಏನು ಪ್ರತಿಕ್ರಿಯಿಸಲಿದ್ದಾರೆ ಕಾದು ನೋಡಬೇಕಿದೆ. ಧ್ರುವ ಸರ್ಜಾ  ಸದ್ಯಕ್ಕೆ ಅವರು ಮೂರು ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಮಾರ್ಟಿನ್‌ ಸಿನಿಮಾ ಪೋಸ್ಟ್‌ ಪ್ರೊಡಕ್ಷನ್‌ ಕೆಲಸವಷ್ಟೇ ಬಾಕಿ ಉಳಿದಿದೆ.  ಇದರ ಜೊತೆಗೆ ಪ್ರೇಮ್‌ ನಿರ್ದೇಶನದ ಕೆಡಿ-ದಿ ಡೆವಿಲ್‌ ಸಿನಿಮಾದಲ್ಲಿ ಧ್ರುವ ನಟಿಸುತ್ತಿದ್ದಾರೆ.  ಹೊಸ ಚಿತ್ರದಲ್ಲಿ ಧ್ರುವ ನಟಿಸುತ್ತಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!