ಮಂಸೋರೆ

ಶೈಲಿ ಬದಲಿಸಿದ ಮಂಸೋರೆ

ಸಾಮಾಜಿಕ ಸಮಸ್ಯೆಯ ಕುರಿತಾದ ಚಿತ್ರ ಮಾಡುತ್ತಿದ್ದ ಮಂಸೋರೆ ಶೈಲಿ ಬದಲಿಸಿ ಹೊಸ ಚಿತ್ರ ಮಾಡಲು ಮುಂದಾಗಿದ್ದಾರೆ. ಚಿತ್ರಕ್ಕೆ ‘ದೂರ ತೀರ ಯಾನ’ ಎಂದು ಹೆಸರು ಇಟ್ಟಿದ್ದಾರೆ.

ವರಮಹಾಲಕ್ಷ್ಮೀ ಹಬ್ಬದಂದು ಚಿತ್ರ ಪ್ರಾರಂಭವಾಗಿದೆ. ಚಿತ್ರವನ್ನು ಡಿ ಕ್ರಿಯೇಷನ್ಸ್ ಬ್ಯಾನರ್ ನಲ್ಲಿ ದೇವರಾಜ್‍ ನಿರ್ಮಿಸುತ್ತಿದ್ದಾರೆ. ವಿಜಯ್‍ ಕೃಷ್ಣ ಮತ್ತು ಪ್ರಿಯಾಂಕಾ ಕುಮಾರ್ ನಟಿಸುತ್ತಿದ್ದಾರೆ. ದೇವರಾಜ್‍ ಮತ್ತು ಮಂಸೋರೆ ಅವರ ಮೂರನೆಯ ಚಿತ್ರ ಇದಾಗಿದೆ.

ಮಂಸೋರೆ

ಈ ಬಗ್ಗೆ ಮಾತನಾಡಿರುವ ಮಂಸೋರೆ, ‘ಇದು ನನ್ನ ಐದನೇ ಚಿತ್ರ. ಕಥೆ ಹೇಳುವ ಫಾರ್ಮಾಟ್‍ ಈ ಚಿತ್ರದಲ್ಲಿ ಬದಲಿಸುತ್ತಿದ್ದೇನೆ. ಇಲ್ಲಿ ಕಥೆ ಹೇಳುವ ಶೈಲಿ ಮಾತ್ರ ಬದಲಾಗಿದೆ. ಇದೊಂದು ಪ್ರಯಾಣದ ಚಿತ್ರ. ಇಲ್ಲಿ ನಾಯಕ ಪಿಟೀಲು ನುಡಿಸುತ್ತಾನೆ. ನಾಯಕಿ ಕೊಳಲು ನುಡಿಸುತ್ತಾಳೆ. ವೃತ್ತಿಯಲ್ಲಿ ಇಬ್ಬರೂ ಸಾಫ್ಟ್ವೇರ್ ಇಂಜಿನಿಯರ್ ಗಳು. ಅವರಿಬ್ಬರ ಪ್ರೀತಿಯ ಹುಡುಕಾಟ ಚಿತ್ರ ಆಗಿದೆ’ ಎಂದಿದ್ದಾರೆ.

ಇದೊಂದು ತೀರಾ ಗಂಭೀರವಲ್ಲದ ಮತ್ತು ಲವಲವಿಕೆಯಿಂದ ಕೂಡಿರುವ ಚಿತ್ರವಾಗಿದೆ. ಈಗ ಪ್ರೀತಿಯ ವ್ಯಾಖ್ಯಾನ ಬದಲಾಗಿದೆ. ಅದನ್ನು ಹೇಳುವ ಪ್ರಯತ್ನ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ.

ಮಂಸೋರೆ

‘ದೂರ ತೀರ ಯಾನ’ ಚಿತ್ರದ ಚಿತ್ರೀಕರಣ ಸೆಪ್ಟೆಂಬರ್ 3ರಂದು ಪ್ರಾರಂಭವಾಗಲಿದೆ. 2025ರ ಜುಲೈನಲ್ಲಿ ಚಿತ್ರ ಬಿಡುಗಡೆ ಆಗಲಿದೆ. ಶೇಖರ್ ಚಂದ್ರು ಛಾಯಾಗ್ರಹಣ, ಬಕ್ಕೇಶ್‍ ಸಂಗೀತ ಚಿತ್ರಕ್ಕಿದೆ.

ವಿಜಯ್‍ ಕೃಷ್ಣ ಕನ್ನಡದವರೇ ಆದರೂ ಹೆಚ್ಚಾಗಿ ಕೆಲಸ ಮಾಡಿರುವುದು ಹಿಂದಿ ಚಿತ್ರ ಮತ್ತು ವೆಬ್‍ಸೀರೀಸ್‍ಗಳಲ್ಲಿ. ನಾಯಕಿ ಪ್ರಿಯಾಂಕಾ ಈ ಹಿಂದೆ ‘ಬ್ಯಾಡ್‍ ಮ್ಯಾನರ್ಸ್’ ಮತ್ತು ‘ರುದ್ರು ಗರುಡ ಪುರಾಣ’ ಚಿತ್ರಗಳಲ್ಲಿ ನಟಿಸಿದ್ದಾರೆ.

ಮಂಸೋರೆ

Be the first to comment

Leave a Reply

Your email address will not be published. Required fields are marked *

Translate »
error: Content is protected !!