”ರೇಣುಕಾಸ್ವಾಮಿ ಕೊಲೆ ಪ್ರಕರಣ ಸಮಾಜದ ಮೇಲೆ ಪರಿಣಾಮ ಬಿರುತ್ತದೆ”

”ರೇಣುಕಾಸ್ವಾಮಿ ಕೊಲೆ ಪ್ರಕರಣ ಸಮಾಜದ ಮೇಲೆ ಪರಿಣಾಮ ಬೀರುತ್ತದೆ” ಎಂದು ಬಹುಭಾಷಾ ನಟ ಕಿಶೋರ್ ಹೇಳಿದ್ದಾರೆ.

ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ನಟ ದರ್ಶನ್ ಜೈಲು ಸೇರಿ ತಿಂಗಳು ಕಳೆದಿದೆ. ಘಟನೆಯ ಕುರಿತು ಈಗಾಗಲೇ ಸಾಕಷ್ಟು ಮಂದಿ ಪ್ರತಿಕ್ರಿಯೆ ನೀಡಿದ್ದಾರೆ. ಇದೀಗ ಬಹುಭಾಷಾ ನಟ ಕಿಶೋರ್ ಮಾತನಾಡಿದ್ದಾರೆ. 

”ರೇಣುಕಾಸ್ವಾಮಿ ಕೊಲೆ ಪ್ರಕರಣ ಸಮಾಜದ ಮೇಲೆ ಖಂಡಿತ ಪರಿಣಾಮ ಬಿರುತ್ತದೆ. ಇನ್ನು ಈ ಕೇಸ್ ತನಿಖೆ ಹಂತದಲ್ಲಿದೆ. ಕೋರ್ಟ್‌ನಲ್ಲಿದೆ. ಹಾಗಾಗಿ ಜವಾಬ್ದಾರಿಯುತ ವ್ಯಕ್ತಿಯಾಗಿ ಈ ಬಗ್ಗೆ ಮಾತಾಡೋದು ಸೂಕ್ತವಲ್ಲ. ರೇಣುಕಾಸ್ವಾಮಿ ದುಡಿಯುವ ವ್ಯಕ್ತಿಯಾಗಿದ್ದರು. ಅವರು ಇಲ್ಲ ಅಂದ್ಮೇಲೆ ಆ ಕುಟುಂಬ ಬೀದಿಗೆ ಬಂದ ಹಾಗೆ” ಎಂದು ಕಿಶೋರ್ ಹೇಳಿದ್ದಾರೆ. 

”ತನಿಖೆ ನಡೆಯುತ್ತಿದೆ. ಹೈಪ್ರೊಫೈಲ್ ಕೇಸ್ ಆಗಿರೋದ್ರಿಂದ ಗಮನ ಕೊಟ್ಟು ತನಿಖೆ ಮಾಡುತ್ತಾರೆ. ಆಗಬಾರದ ಕೆಲಸ ಆಗೋಗಿದೆ ಬಗೆಹರಿಸಬೇಕು” ಎಂದಿದ್ದಾರೆ ಕಿಶೋರ್.

ಬೇರೆ ನಟರ ಸಿನಿಮಾ ನೋಡಲ್ಲ ಎನ್ನುವ ದರ್ಶನ್ ಫ್ಯಾನ್ಸ್‌ಗೆ ಬಗ್ಗೆ ಮಾತನಾಡಿದಕಿಶೋರ್, ”ಸಿನಿಮಾವನ್ನ ಸಿನಿಮಾವಾಗಿ ನೋಡುವ ಅಭ್ಯಾಸವನ್ನ ಪ್ರೇಕ್ಷಕರು ನಾವು ಬೆಳೆಸಿಕೊಳ್ಳಬೇಕು. ಅಭಿಮಾನಿಗಳನ್ನು ಕೇವಲ ಮನರಂಜನೆಗಾಗಿ ಬಳಸಿಕೊಳ್ಳದೇ ಪ್ರಜ್ಞಾವಂತರನ್ನಾಗಿ ಬೆಳೆಸುವುದು ನಮ್ಮ ಜವಾಬ್ದಾರಿಯಾಗುತ್ತದೆ. ಸಿನಿಮಾನೇ ಬೇರೆ, ನಿಜ ಜೀವನವೇ ಬೇರೆಯಾಗಿರುತ್ತದೆ” ಎಂದಿದ್ದಾರೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!