ರಗಡ್ ಲುಕ್ ಲ್ಲಿ ‘ಚೌಕಿದಾರ್’ ಪೃಥ್ವಿ ಅಂಬಾರ್

ಪೃಥ್ವಿ ಅಂಬಾರ್ ಹಾಗೂ ಧನ್ಯ ರಾಮ್ ಕುಮಾರ್ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿರುವ ‘ಚೌಕಿದಾರ್’ ಚಿತ್ರದ ಮುಹೂರ್ತ  ಬಂಡೆ ಮಹಾಕಾಳಿ ದೇವಾಲಯದಲ್ಲಿ ನೆರವೇರಿದೆ.

ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ಸೇರಿದಂತೆ ಪೃಥ್ವಿ ಅಂಬಾರ್, ಧನ್ಯ ರಾಮ್ ಕುಮಾರ್ ಹಾಗೂ ಸಾಯಿ ಕುಮಾರ್  ಮುಹೂರ್ತ ಸಮಾರಂಭದಲ್ಲಿ ಭಾಗಿಯಾಗಿದ್ದರು.

ಚೌಕಿದಾರ್ ಸಿನಿಮಾದಲ್ಲಿ ಪೃಥ್ವಿ ಅಂಬಾರ್ ರಗಡ್ ಲುಕ್ ಲ್ಲಿ ವಿಭಿನ್ನವಾಗಿ ಕಾಣಿಸುತ್ತಿದ್ದಾರೆ. ಸಿನಿಮಾದ ಮೊದಲ ಪೋಸ್ಟರ್  ಲುಕ್ ರಿವೀಲ್ ಮಾಡಿದೆ.  ಖಡಕ್ ಅನಿಸೋ ಈ ಲುಕ್‌ನ ಪೋಸ್ಟರ್ ಹೊಸ  ಸೆಳೆತ ಕ್ರಿಯೇಟ್ ಮಾಡಿದೆ.

ಡೈಲಾಗ್ ಕಿಂಗ್ ಸಾಯಿ ಕುಮಾರ್ ಈ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ”ಚೌಕಿದಾರ್‌ ಚಿತ್ರದಲ್ಲಿ ಪೃಥ್ವಿಗೆ ನಾನು ಚೌಕಿದಾರ್.  ನನಗೆ ಡೈರೆಕ್ಟರ್ ಚಂದ್ರಶೇಖರ್ ಬಂಡಿಯಪ್ಪ ಚೌಕಿದಾರ್ ಆಗಿದ್ದಾರೆ. ಚಿತ್ರದ ಕಥೆ ಚೆನ್ನಾಗಿದೆ. ಇದೊಂದು ಎಮೋಷನಲ್ ಡ್ರಾಮಾ ಆಗಿದೆ” ಎಂದು ಸಾಯಿ ಕುಮಾರ್ ಹೇಳಿದ್ದಾರೆ.

ಚಂದ್ರಶೇಖರ್ ಬಂಡಿಯಪ್ಪ ಕಥೆ ಬರೆದು ನಿರ್ದೇಶಿಸಿರುವ ‘ಚೌಕಿದಾರ್’ ಚಿತ್ರವನ್ನು ವಿದ್ಯಾಶೇಖರ್ ಎಂಟರ್‌ಟೈನ್ಮೆಂಟ್‌ ಬ್ಯಾನರ್ ನಲ್ಲಿ ಡಾಕ್ಟರ್ ಕಲ್ಲಹಳ್ಳಿ ಚಂದ್ರಶೇಖರ ನಿರ್ಮಾಣ ಮಾಡಿದ್ದಾರೆ. ಸಚಿನ್ ಬಸ್ರೂರು ಸಂಗೀತ ಸಂಯೋಜನೆ ನೀಡಿದ್ದಾರೆ. ಪೃಥ್ವಿರಾಜ್ ಸಹ ನಿರ್ದೇಶಕರಾಗಿದ್ದು, ಸಿದ್ದು ಕಂಚನಹಳ್ಳಿ ಛಾಯಾಗ್ರಹಣವಿದೆ. ಪೃಥ್ವಿ ಅಂಬಾರ್, ಧನ್ಯ ರಾಮ್ ಕುಮಾರ್ ಹಾಗೂ ಸಾಯಿ ಕುಮಾರ್ ಸೇರಿದಂತೆ ಮೊದಲಾದ ಕಲಾವಿದರು ತೆರೆ ಹಂಚಿಕೊಂಡಿದ್ದಾರೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!