ನಿಂತಿತು ‘ರಾಮಾಯಣ’ ಸಿನಿಮಾದ ಶೂಟಿಂಗ್

ರಾಮಾಯಣ ಸಿನಿಮಾದ ನಿರ್ಮಾಪಕರು ಕಾಪಿರೈಟ್​ ನಿಯಮವನ್ನು ಉಲ್ಲಂಘನೆ ಮಾಡಿರುವ ಕಾರಣಕ್ಕಾಗಿ ಸಿನಿಮಾವನ್ನು ನಿಲ್ಲಿಸಲಾಗಿದೆ.

ಕೆಲ ದಿನಗಳ ಹಿಂದೆ ಈ ಸಿನಿಮಾ ತಂಡಕ್ಕೆ ‘ಅಲ್ಲು ಮಂಟೇನಾ ಮೀಡಿಯಾ ವೆಂಚರ್ಸ್​ ಎಲ್​ಎಲ್​ಪಿ’ ಕಂಪನಿಯು ನೋಟಿಸ್​ ಕಳಿಸಿತ್ತು. ಅದರ ಅನ್ವಯ ‘ರಾಮಾಯಣ’ ಸಿನಿಮಾದ ನಿರ್ಮಾಪಕರು ಈ ಕಂಪನಿಯ ಜೊತೆ ಮಾಡಿಕೊಂಡ ಒಪ್ಪಂದದ ಪ್ರಕಾರ ಸ್ಕ್ರಿಪ್ಟ್​ಗೆ ಸಂಬಂಧಿಸಿದ ಕೆಲವು ಹಕ್ಕುಗಳನ್ನು ಖರೀದಿಸಬೇಕಿತ್ತು. ಆ ಪ್ರಕ್ರಿಯೆ ಪೂರ್ಣಗೊಳ್ಳದ ಕಾರಣ ನೋಟಿಸ್​ ಕಳಿಸಲಾಗಿತ್ತು. ಕಾನೂನಿನ ತೊಡಕುಗಳು ಬಗೆಹರಿದ ನಂತರವೇ ಶೂಟಿಂಗ್​ ಮುಂದುವರಿಸಲು ತೀರ್ಮಾನಿಸಲಾಗಿದೆ ಎಂದು ಮೂಲಗಳು ತಿಳಿಸಿದೆ.

‘ರಾಮಾಯಣ’ ಚಿತ್ರತಂಡಕ್ಕೆ ನೋಟಿಸ್ ಬಂದ ನಂತರವೂ ಕೆಲವು ದಿನಗಳ ಕಾಲ ಶೂಟಿಂಗ್​ ಮುಂದುವರಿಸಲಾಯಿತು. ಆದರೆ ಕಳೆದ ವಾರದಿಂದ ಶೂಟಿಂಗ್​ ನಿಲ್ಲಿಸಲಾಗಿದೆ.

ನಿತೇಶ್​ ತಿವಾರಿ ಅವರು ‘ರಾಮಾಯಣ’ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಬಾಲಿವುಡ್​ನಲ್ಲಿ ತಯಾರಾಗುತ್ತಿರುವ ಬಿಗ್ ಬಜೆಟ್ ನ ರಾಮಾಯಣ ಸಿನಿಮಾದಲ್ಲಿ ರಾಮನಾಗಿ ರಣಬೀರ್​ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ. ರಾವಣನಾಗಿ ರಾಕಿಂಗ್ ಸ್ಟಾರ್ ಯಶ್ ಹೀಗೆ ಘಟಾನುಘಟಿ ಕಲಾವಿದರು ಬಣ್ಣ ಹಚ್ಚುತ್ತಿದ್ದಾರೆ. 

‘ರಾಮಾಯಣ’  ಸಿನಿಮಾದ ಶೂಟಿಂಗ್ ನಿಂತಿದ್ದು ಸುದ್ದಿ ಕೇಳಿ ಅಭಿಮಾನಿಗಳು ದಂಗಾಗಿದ್ದಾರೆ.

——

Be the first to comment

Leave a Reply

Your email address will not be published. Required fields are marked *

Translate »
error: Content is protected !!