ರಕ್ಷಿತ್ ಶೆಟ್ಟಿ ಮಧ್ಯೆ ಹೇಟ್ ರಿಲೇಶನ್ ಶಿಪ್ ಇಲ್ಲ: ಪುಷ್ಕರ್

ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾ ನೀಡಿದ್ದ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ, ”ನನ್ನ ಹಾಗೂ ರಕ್ಷಿತ್ ಶೆಟ್ಟಿ ಮಧ್ಯೆ ಯಾವುದೇ ಹೇಟ್​ ರಿಲೇಶನ್​ಶಿಪ್​ ಇಲ್ಲ” ಎಂದಿದ್ದಾರೆ.

ಪುಷ್ಕರ್, ರಕ್ಷಿತ್ ಜೊತೆ ಸಿನಿಮಾ ಮಾಡ್ತಾರೆ ಎಂದು ಹೇಳಲಾಗಿತ್ತು. ರಕ್ಷಿತ್ ಶೆಟ್ಟಿ ಜೊತೆ ಸಿನಿಮಾ ಮಾಡುವ ಕುರಿತು ಪುಷ್ಕರ್ ಮಲ್ಲಿಕಾರ್ಜುನಯ್ಯ ಪ್ರತಿಕ್ರಿಯಿಸಿದ್ದಾರೆ. 

”ಇಬ್ಬರೂ ಗೌರವಯುತವಾಗಿ ನಮ್ಮದೇ ಸ್ಪೇಸ್​ನಲ್ಲಿ ಇದ್ದೇವೆ. ರಕ್ಷಿತ್ ಶೆಟ್ಟಿ ಸಿನಿಮಾ ಮಾಡಲು 10-20 ನಿರ್ಮಾಪಕರು ರೆಡಿ ಇದ್ದಾರೆ. ನಾನು ಹಣ ಹಾಕ್ತೀನಿ ಡೇಟ್ ಕೊಡಿ ಎಂದು ಅವರು ಕೇಳುತ್ತಾ ಇರುತ್ತಾರೆ. ಹೀಗಾಗಿ, ತಕ್ಷಣಕ್ಕಂತೂ ಅವರಿಗೆ ಪುಷ್ಕರ್ ಜೊತೆ ಸಿನಿಮಾ ಮಾಡಬೇಕು ಎನ್ನುವ ಅನಿವಾರ್ಯತೆ ಇಲ್ಲ” ಎಂದಿದ್ದಾರೆ ಪುಷ್ಕರ್.

”ನಾನು ಒಳ್ಳೆಯ ಕಥೆ  ನನ್ನ ಪ್ರೊಡಕ್ಷನ್​ನಿಂದ ಅವರಿಗೆ ಹೇಳಿ ಅದು ರಕ್ಷಿತ್​ಗೆ ಇಷ್ಟವಾದರೆ ಬನ್ನಿ ಸಿನಿಮಾ ಮಾಡೋಣ ಎಂದರೆ ಅದು ವಿನ್ ವಿನ್ ಸಿಚ್ಯುವೇಷನ್ ಆಗುತ್ತದೆ. ಆದರೆ ಅಂಥ ಕಥೆಯನ್ನು ಅವರಿಗೆ ಹೇಳಬೇಕು ಎನ್ನುವ ಪರಿಸ್ಥಿತಿ ನನಗೂ ಬಂದಿಲ್ಲ. ಬಹುಶಃ ಮುಂದಿನ ದಿನಗಳಲ್ಲಿ ಅಂಥ ಸಮಯ ಬಂದರೆ ಇಬ್ಬರೂ ಒಂದಾಗಬಹುದು’ ಎಂದಿದ್ದಾರೆ.

‘ಕಿರಿಕ್ ಪಾರ್ಟಿ’ ಸೂಪರ್ ಹಿಟ್ ಸಿನಿಮಾವನ್ನು ನೀಡಿದ್ದ ರಕ್ಷಿತ್ ಶೆಟ್ಟಿ ಹಾಗೂ ಪುಷ್ಕರ್ ಮಧ್ಯೆ ‘ಅವನೇ ಶ್ರೀಮನ್ನಾರಾಯಣ ‘ಚಿತ್ರದಲ್ಲಿ ಕೆಲವು ವಿಚಾರಕ್ಕೆ ಮನಸ್ತಾಪ ಉಂಟಾಗಿತ್ತು. ಬಳಿಕ ಇಬ್ಬರು ಬೇರೆಯಾಗಿದ್ದರು.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!