ಸಿನಿಮಾ ನಿರ್ದೇಶನ ಮಾಡುವೆ ಎಂದ ಶಿವರಾಜ್ ಕುಮಾರ್

ಘೋಸ್ಟ್ ಚಿತ್ರದ ಬಿಡುಗಡೆಯ ಖುಷಿಯಲ್ಲಿ ಇರುವ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ತಾವು ಸಿನಿಮಾ ನಿರ್ದೇಶನ ಮಾಡಲು ಇಚ್ಛೆ ಹೊಂದಿರುವುದಾಗಿ ತಿಳಿಸಿದ್ದಾರೆ.

ಈಗಾಗಲೇ ಕಥೆಯನ್ನು ಮಾಡಿಕೊಂಡಿದ್ದು, ಮುಂದಿನ ದಿನಗಳಲ್ಲಿ ನಿರ್ದೇಶನ ಮಾಡುವುದಾಗಿ ಶಿವಣ್ಣ ಹೇಳಿದ್ದಾರೆ.

ಶಿವಣ್ಣ ಅವರು ತಮ್ಮ ಸಿನಿಮಾದ ಕಥೆಗೆ ಧನುಷ್ ಅವರಂತ ಕಲಾವಿದರು ಒಪ್ಪಿಗೆ ಆಗುತ್ತಾರೆ ಎಂದು ಹೇಳಿದ್ದಾರೆ.

ಈ ಹಿಂದೆ ಶಿವಣ್ಣ ಅವರು ಅಪ್ಪು ಹಾಗೂ ಅನಂತನಾಗ್ ಅವರಿಗಾಗಿ ಸಿನಿಮಾ ಮಾಡಬೇಕು ಎಂದು ಹೇಳಿದ್ದರು. ಅಲ್ಲದೇ ಅಪ್ಪು, ರಾಘವೇಂದ್ರ ರಾಜಕುಮಾರ್ ಮತ್ತು ತಾವು ಒಟ್ಟಾಗಿ ನಡೆಸಬೇಕು ಎಂದು ಆಸೆಯನ್ನು ವ್ಯಕ್ತಪಡಿಸಿದ್ದರು. ಪುನೀತ್ ರಾಜಕುಮಾರ್ ಅವರಿಗೆ ಸಿನಿಮಾ ಮಾಡಬೇಕು ಎಂದು ಹೇಳಿದ್ದರು. ಆದರೆ ಪುನೀತ್ ಹಠಾತ್ ನಿಧನದಿಂದ ಈ ಆಸೆ ಈಡೇರಲಿಲ್ಲ.

ಶಿವಣ್ಣ ಆದಷ್ಟು ಬೇಗ ಚಿತ್ರ ನಿರ್ದೇಶನ ಮಾಡಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ.

ಶಿವಣ್ಣ ನಟನೆಯ ಘೋಸ್ಟ್ ಚಿತ್ರ ಈ ವಾರ ಬಿಡುಗಡೆಯಾಗಿದ್ದು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದಿದೆ. ರಕ್ತಪಾತ ನಡೆಸದ ಘೋಸ್ಟ್ ಪಾತ್ರದಲ್ಲಿ ಶಿವಣ್ಣ ಭಿನ್ನವಾಗಿ ಕಾಣಿಸಿಕೊಂಡಿದ್ದಾರೆ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!