Chetanchandra: ಚುನಾವಣಾ ತಯಾರಿಯಲ್ಲಿ ನಟ ಚೇತನ್ ಚಂದ್ರ

ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಿಂದ ಸಿನಿಮಾ ನಟ ಚೇತನ್ ಚಂದ್ರ ಸ್ಪರ್ಧೆ ಮಾಡಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

ಸಿನಿಮಾ ಕ್ಷೇತ್ರದಲ್ಲಿ ಸಸುಮಾರು 15 ವರ್ಷಗಳ ಕಾಲ ಉತ್ತಮ ನೆಲೆಯನ್ನು ಕಂಡುಕೊಂಡು ನಾಯಕ ನಟನಾಗಿರುವ ಚೇತನ್ ಚಂದ್ರ ಪಿಯುಸಿ, ಪ್ರೇಮಿಸಂ, ರಾಜಧಾನಿ, ಕುಂಬರಾಶಿ, ಜಾತ್ರೆ, ಹುಚ್ಚುಡುಗ್ರು, ಸಂಯುಕ್ತ2, ಪ್ಲಸ್ ಸೇರಿದಂತೆ ಹಲವು ಚಿತ್ರದಲ್ಲಿ ಅಭಿನಯಿಸಿದ್ದಾರೆ. ರಾಜಕೀಯ ಕಥಾಹಂದರವನ್ನು ಒಳಗೊಂಡಿರುವಂತಹ “ಪ್ರಭುತ್ವ” ಚಿತ್ರ ಬಿಡುಗಡೆಗೆ ಸಜ್ಜಾಗಿದೆ.

ಮೊದಲ ಬಾರಿಗೆ ಚೇತನ್ ಚಂದ್ರ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಇದೊಂದು ರೀತಿಯ ಸಿನಿಮಾಮಂದಿಯ ಗುದ್ದಾಟ ಆಗಲಿದೆ.

ಹಾಲಿ ಶಾಸಕ ಮುನಿರತ್ನ ವಿರುದ್ಧ ಸ್ಪರ್ಧೆಗೆ ಇಳಿದಿದ್ದು, ನಿರ್ಮಾಪಕ v/s ನಾಯಕ ನಟ ನಡುವಣ ಸ್ಪರ್ಧೆ ಎನಿಸಿದೆ.

ಚೇತನ್ ಚಂದ್ರ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುವರೇ? ಇವರ ಹಿಂದೆ ರಾಜಕೀಯ ಜನ ಇದ್ದಾರೆಯೇ ಈ ಎಲ್ಲದಕ್ಕೂ ಉತ್ತರ ಶೀಘ್ರ ಸಿಗಲಿದೆ.

ಚೇತನ್ ಚಂದ್ರ ಅಭಿನಯದ “ಪ್ರಭುತ್ವ” ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದು, ಈ ಚಿತ್ರವು ಇಂದಿನ ರಾಜಕೀಯ ಸ್ಥಿತಿ , ಸರ್ಕಾರದ ವ್ಯವಸ್ಥೆ ಬಗ್ಗೆ ಕಥೆ ಇರುವ ಸಿನಿಮಾ ಆಗಿದೆ.ಇತ್ತೀಚೆಗಷ್ಟೆ ಟ್ರೈಲರ್ ಬಿಡುಗಡೆ ಮಾಡಲಾಗಿತ್ತು. ಚೇತನ್ ಕ್ರಾಂತಿಕಾರಿ ಯುವ ನಾಯಕನಾಗಿ ಕಾಣಿಸಿಕೊಂಡಿದ್ದು , ಚಿತ್ರ ಚುನಾವಣೆ ಮುನ್ನ ತೆರೆಗೆ ಬರಲಿದೆ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!