Samharam: ಯುವಕರ ‘ಸಂಹಾರಂ’ ಶೀಫ್ರ ತೆರೆಗೆ

ಯುವಕರೇ ಸೇರಿಕೊಂಡು ನಿರ್ಮಿಸಿದ ಚಿತ್ರ ‘ಸಂಹಾರಂ’ ಶೀಘ್ರ ತೆರೆಗೆ ಬರಲಿದೆ.

ಒಂದು ಗಂಟೆ ಅವಧಿಯ ಚಿತ್ರ ಇದಾಗಿದೆ. ಇತ್ತೀಚೆಗೆ ಟ್ರೈಲರ್‌ ಬಿಡುಗಡೆಯಾಗಿದೆ.

ನಟ ಶ್ರೇಯಸ್‌ ಮಂಜು ಟ್ರೈಲರ್‌ ಬಿಡುಗಡೆ ಮಾಡಿದ್ದಾರೆ. ಚಿತ್ರಕ್ಕೆ ‘ನೋವು, ಅಧಿಕಾರ, ಆಶ್ವಾಸನೆ’ ಎಂಬ ಅಡಿಬರಹವಿದೆ.

ತಮಿಳುನಾಡು, ಮಹಾರಾಷ್ಟ್ರ, ಅಮೇರಿಕದಲ್ಲಿ ನಡೆದ ನೈಜ ಘಟನೆಗಳನ್ನು ಆಧರಿಸಿ ಚಿತ್ರ ತೆರೆಗೆ ತರಲಾಗಿದೆ. ಜನ ಪ್ರತಿನಿಧಿಯಾದವನು ಅಧಿಕಾರವನ್ನು ದುರುಪಯೋಗಪಡಿಸಿಕೊಂಡರೆ ಜನರು ಯಾರ ಮೇಲೆ ನಂಬಿಕೆ ಇಡಬೇಕು ಎಂಬುದು ಚಿತ್ರದ ಕಥೆ. ಚಿತ್ರ ಸೇಡಿನ ಕಥೆಯನ್ನು ಹೊಂದಿದೆ.

ತಂದೆಯಾಗಿ ಹಿರಿಯ ನಟ ಸಂದೀಪ್‌ ಮಲಾನಿ ನಟಿಸಿದ್ದಾರೆ. ಉಳಿದಂತೆ ಸಿರಿಶಾ, ನಾಗರಾಜ ಭಂಡಾರಿ, ವಿನಯ್, ಸುಪ್ರಿತ್‌ ಕೃಷ್ಣಮೂರ್ತಿ, ಅನುಪಮಾ ಬಸವರಾಜು, ನಾಗಭೂಷಣ್, ಪ್ರಭು ಮುಂತಾದವರು ನಟಿಸಿದ್ದಾರೆ.

ಚಂದನ್‌ ಕೇಶವ್ ರಚನೆ, ಸಂಕಲನ, ನಿರ್ದೇಶನ, ನಟನೆ ಜತೆಗೆ ಬಂಡವಾಳ ಹೂಡಿದ್ದಾರೆ. ಎಸ್.ಮನೋಜ್‌ಕುಮಾರ್ ಪಾಲುದಾರಿಕೆ ಇದೆ.

ಸಂಗೀತ ರಿಯೋ ಆಂಟೋನಿ, ಛಾಯಾಗ್ರಹಣ ಚೇತನ್‌ ಕೇಶವ್, ಸಂಭಾಷಣೆ-ಸಾಹಿತ್ಯ ನಿಹಾರಿಕಾ ರಾಘವೇಂದ್ರ ಅವರದ್ದು.

ಹೆಸರಘಟ್ಟ, ಆನೇಕಲ್, ಅತ್ತಿಬೆಲೆ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.
___

Be the first to comment

Leave a Reply

Your email address will not be published. Required fields are marked *

Translate »
error: Content is protected !!