ಫ್ಯಾನ್ಸ್ ಹೃದಯ ಗೆದ್ದ ಅಲ್ಲು

ತಂಬಾಕು ಹಾಗೂ ಮದ್ಯ ಕಂಪನಿಯೊಂದರ ಅಡ್ವಟೈಸ್​ಮೆಂಟ್​ನಲ್ಲಿ ನಟಿಸಲು ಸ್ಟೈಲಿಶ್​ ಸ್ಟಾರ್​​ ಅಲ್ಲು ಅರ್ಜುನ್ ನಿರಾಕರಿಸುವ ಮೂಲಕ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ಹಣದ ಆಸೆಗೆ ಬೀಳದೆ ಅಲ್ಲು ಅರ್ಜುನ್ ಅವರು ಈ ಆಫರ್ ತಿರಸ್ಕರಿಸಿದ್ದಾರೆ. ಅಲ್ಲು ಅರ್ಜುನ್ ಪ್ರತಿ ಜಾಹೀರಾತಿಗೆ 7.5 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆಎನ್ನಲಾಗಿದೆ. ತಂಬಾಕು ಹಾಗೂ ಮದ್ಯದ ಕಂಪನಿ ಈ ಸಂಭಾವನೆಯ ಜತೆಗೆ 2.5 ಕೋಟಿ ರೂಪಾಯಿ ಹೆಚ್ಚುವರಿಯಾಗಿ ಕೊಡುವ ಆಫರ್ ನೀಡಿತ್ತು. ಆದರೆ ಇದಕ್ಕೆ ಅಲ್ಲು ಅರ್ಜುನ್ ನಟಿಸಲಾರೆ ಎಂದಿದ್ದಾರೆ.

ತಂಬಾಕು, ಮದ್ಯ ಸೇವನೆ ಆರೋಗ್ಯಕ್ಕೆ ಹಾನಿಕಾರಕ ಆಗಿದ್ದು ಸೆಲೆಬ್ರಿಟಿಗಳನ್ನು ಹಿಂಬಾಲಿಸುವವರು ಅನೇಕರು ಇರುತ್ತಾರೆ. ಸ್ಟಾರ್​ಗಳು ಈ ರೀತಿ ಜಾಹೀರಾತು ಮಾಡದಿರಲಿ ಎಂದು ಫ್ಯಾನ್ಸ್ ಬಯಸುತ್ತಾರೆ. ಆದರೂ ಈ ರೀತಿಯ ಜಾಹೀರಾತಿನಲ್ಲಿ ನಟ/ನಟಿಯರು ಕಾಣಿಸಿ ಆಕ್ರೋಶಕ್ಕೆ ಒಳಗಾಗಿದ್ದಾರೆ. ಗುಟ್ಕಾದ ಜಾಹೀರಾತಿನಲ್ಲಿ ಅಜಯ್ ದೇವಗನ್, ಅಕ್ಷಯ್ ಕುಮಾರ್ ಕಾಣಿಸಿಕೊಂಡು ಕೋಪಕ್ಕೆ ತುತ್ತಾಗಿದ್ದರು. ಈಗ ಅಲ್ಲು ಅರ್ಜುನ್ ಅವರು ಈ ಜಾಹೀರಾತನ್ನು ರಿಜೆಕ್ಟ್ ಮಾಡುವ ಮೂಲಕ ಭೇಷ್ ಎನಿಸಿಕೊಂಡಿದ್ದಾರೆ.

‘ಪುಷ್ಪ’ ಚಿತ್ರ ತೆರೆಕಂಡ ಬಳಿಕ ಬಾಲಿವುಡ್​​ನಲ್ಲಿ ಅಲ್ಲು ಅವರ ಡಿಮಾಂಡ್ ಹೆಚ್ಚಿದೆ. ಈ ಕಾರಣಕ್ಕೆ ಅವರಿಗೆ ಹಲವು ಆಫರ್​ಗಳು ಬರುತ್ತಿವೆ. ಆದರೆ ಅಲ್ಲು ಜಾಹೀರಾತು ಆಯ್ಕೆಯಲ್ಲಿ ಜಾಣತನ ಮೆರೆಯುತ್ತಿದ್ದಾರೆ.
____

 

Be the first to comment

Leave a Reply

Your email address will not be published. Required fields are marked *

Translate »
error: Content is protected !!