ಫೆ.25ಕ್ಕೆ ಬರುತ್ತಿದೆ ‘ ಮನಸಾಗಿದೆ ‘

ಅಭಯ್, ಮೇಘಶ್ರೀ, ಅಧೀರ ನಟನೆಯ ‘ಮನಸಾಗಿದೆ’ ಸಿನಿಮಾ ಫೆಬ್ರವರಿ 25ರಂದು ಬಿಡುಗಡೆ ಆಗಲಿದೆ.

ಪ್ರೀತಿಯನ್ನು ಕೆಲವರು ಪಡೆಯಬೇಕು ಎಂದು ಹುಡುಕಿಕೊಂಡು ಹೋಗ್ತಾರೆ. ಮತ್ತೆ ಕೆಲವರಿಗೆ ಪ್ರೀತಿನೇ ಹುಡ್ಕೊಂಡು ಬರುತ್ತೆ. ಈ ಚಿತ್ರದಲ್ಲಿ ಕಥಾನಾಯಕ ತಾನು ಇಷ್ಟಪಟ್ಟು ಹುಡ್ಕೊಂಡು ಬಂದ ಪ್ರೀತಿಯನ್ನು ಪಡಿತಾನಾ? ಅಥವಾ ತಾನು ಬಯಸದೇ ಬಳಿ ಬಂದ ಪ್ರೀತಿ ಪಡಿತಾನಾ? ಎನ್ನುವ ಪ್ರಶ್ನೆಗೆ ಉತ್ತರವೇ ‘ಮನಸಾಗಿದೆ’ ಎನ್ನುವುದು ಚಿತ್ರತಂಡದ ವಿವರಣೆ.

ಚಿತ್ರದಲ್ಲಿ ಸುರೇಶ್ ರೈ, ಭವ್ಯಶ್ರೀ ರೈ, ಕಾಮಿಡಿ ಕಿಲಾಡಿಗಳು ಸೂರಜ್, ಅನೀಶ್, ಚಿದ, ದೀರು, ಪ್ರವೀಣ, ದೀಪಿಕಾ ಮುಂತಾದವರು ನಟಿಸಿದ್ದಾರೆ.

“ನಾಯಕ ನಟ ಅಭಯ್ ಸಿನಿಮಾಕ್ಕಾಗಿ ಎಲ್ಲ ವಿಭಾಗದಲ್ಲಿ ತರಬೇತಿ ತಗೊಂಡಿದ್ದಾರೆ” ಎಂದು ನಿರ್ದೇಶಕ ಶ್ರೀನಿವಾಸ್ ಶಿಡ್ಲಘಟ್ಟ ಹೇಳಿದ್ದಾರೆ.

ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು, ಟಿಕ್‌ಟಾಕ್‌ ಸ್ಟಾರ್‌ ಅಥಿರ ಹಾಗೂ ಮೇಘಶ್ರೀ ಕ್ರಮವಾಗಿ ‘ಸಿಂಚನ’ ಮತ್ತು ‘ಅಂಕಿತ’ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

” ಕನ್ನಡದಲ್ಲಿ ಅದೆಷ್ಟೋ ಪ್ರೇಮಕಥೆಗಳು ಬಂದಿವೆ. ಇದೊಂದು ವಿಭಿನ್ನ ಚಿತ್ರ. ಪ್ರೀತಿ ಮತ್ತು ಮನುಷ್ಯತ್ವದ ನಡುವೆ ನಡೆಯುವ ಸಂಘರ್ಷದ ವಿಷಯ ಇಟ್ಟುಕೊಂಡು ಚಿತ್ರ ಮಾಡಿದ್ದೇವೆ. ಇದೊಂದು ಮಾಸ್‌ ಸಿನಿಮಾ ಆಗಿದ್ದು ಚಿತ್ರದಲ್ಲಿ ಮನರಂಜನೆಗೆ ಕೊರತೆ ಇಲ್ಲ. ಕಾಮಿಡಿ ಕಿಲಾಡಿಗಳು ಇಲ್ಲಿದ್ದಾರೆ” ಎಂದು ನಿರ್ದೇಶಕ ಶ್ರೀನಿವಾಸ್‌ ಶಿಡ್ಲಘಟ್ಟ ಹೇಳಿದ್ದಾರೆ.

ಎಸ್ ಚಂದ್ರಶೇಖರ್ ಚಿತ್ರದ ನಿಮಾ೯ಪಕ. ಶ್ರೀನಿವಾಸ ಶಿಡ್ಲಘಟ್ಟ ಚಿತ್ರಕಥೆ, ನಿರ್ದೇಶನ, ಶಂಕರ್ ಛಾಯಾಗ್ರಹಣ, ಮಾನಸಾ ಹೊಳ್ಳ ಸಂಗೀತ ಸಿನಿಮಾಕ್ಕಿದೆ. ಚಿತ್ರದಲ್ಲಿ ಒಟ್ಟು ಐದು ಹಾಡುಗಳಿವೆ.‌

ಥ್ರಿಲ್ಲರ್‌ ಮಂಜು ಅವರು ಚಿತ್ರಕ್ಕೆ ಸಾಹಸ ನಿರ್ದೇಶನ ಮಾಡಿದ್ದಾರೆ. ರಘು ನಿಡುವಳ್ಳಿ ಸಂಭಾಷಣೆ, ಡಾ.ವಿ.ನಾಗೇಂದ್ರ ಪ್ರಸಾದ್‌, ಕವಿರಾಜ್‌, ಅರಸು ಅಂತಾರೆ, ರೆಮೋ, ಸಂತೋಷ್‌ ನಾಯಕ್‌ ಅವರು ಸಾಹಿತ್ಯ ಬರೆದಿದ್ದಾರೆ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!