ಡೈರೆಕ್ಟರ್ ಚಂದ್ರುಗೆ ಸಲಹೆ ಕೊಟ್ಟ ಶಿವಣ್ಣ

” ಕನ್ನಡ ಚಿತ್ರರಂಗದ ಹೆಣ್ಣುಮಕ್ಕಳನ್ನು ತಾತ್ಸಾರ ಮಾಡುವುದು ಬೇಡ” ಎಂದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ನಿರ್ದೇಶಕ ಆರ್.ಚಂದ್ರು ಅವರಿಗೆ ಸಲಹೆ ನೀಡಿದ್ದಾರೆ.

‘ಸಲಗ’ ಚಿತ್ರದ ಸಕ್ಸಸ್ ಮೀಟ್ ನಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಶಿವರಾಜ್ ಕುಮಾರ್ ಅವರು ಚಂದ್ರು ಅವರಿಗೆ ಒಂದಷ್ಟು ಕಿವಿಮಾತು ಹೇಳಿದರು.

“ಕನ್ನಡದಲ್ಲಿ ಸಾಕಷ್ಟು ಒಳ್ಳೆಯ ನಟಿಯರಿದ್ದಾರೆ. ಆದರೆ ಆರ್.ಚಂದ್ರು ಅಂಥವರು ಹೊರಗಡೆಯಿಂದ ನಟಿಯರನ್ನು ಕರೆದುಕೊಂಡು ಬರುತ್ತಾರೆ. ನಮ್ಮಲ್ಲಿ ಟ್ಯಾಲೆಂಟ್ ಇರುವ ಹೆಣ್ಣು ಮಕ್ಕಳು ಇದ್ದಾರೆ. ನೀವು ಅದನ್ನು ಗಮನಿಸಬೇಕು ಎಂದು ಮನವಿ ಮಾಡುತ್ತೇನೆ” ಎಂದು ಚಂದ್ರು ಅವರಿಗೆ ಹೇಳಿದರು.

” ನಿಮ್ಮ ‘ಕಬ್ಜ’ ಸಿನಿಮಾಕ್ಕೆ ಎಲ್ಲರೂ ಕಾಯುತ್ತಿದ್ದಾರೆ. ನೀವು ಒಳ್ಳೆಯ ಡೈರೆಕ್ಟರ್. ಆದ್ರೆ ಒಂದೇ ಸಿನಿಮಾದಲ್ಲಿ ಸಿಕ್ಕಿ ಹಾಕಿಕೊಳ್ಳಬೇಡಿ. ಒಂದೇ ಸಿನಿಮಾವನ್ನು ಎಷ್ಟು ವರ್ಷ ಮಾಡ್ತೀರ. ಬೇಗ ರಿಲೀಸ್ ಮಾಡಿ. ನಿರ್ದೇಶಕರಾಗಿ ನೀವು ಹೆಚ್ಚು ಸಿನಿಮಾಗಳನ್ನು ಮಾಡಬೇಕು” ಎಂದರು.

“ಜಗತ್ತು ವೇಗವಾಗಿ ಚಲಿಸುತ್ತಿದೆ. ನೀವು ಅದಕ್ಕೆ ತಕ್ಕಂತೆ ಇರಬೇಕು. ಪಟ ಪಟ ಸಿನಿಮಾಗಳನ್ನು ಬಿಡುಗಡೆ ಮಾಡಬೇಕು. ಯಾವಾಗ ಏನಾಗುತ್ತೊ ಗೊತ್ತಿಲ್ಲ. ಬೇಗ ಸಿನಿಮಾಗಳನ್ನು ಮುಗಿಸಬೇಕು” ಎಂದರು ಶಿವಣ್ಣ.

ಆರ್.ಚಂದ್ರು ನಿರ್ದೇಶನದ ‘ಮೈಲಾರಿ’ ಸಿನಿಮಾದಲ್ಲಿ ಶಿವರಾಜ್ ಕುಮಾರ್ ನಟಿಸಿದ್ದರು. ಈ ಸಿನಿಮಾ 2010ರಲ್ಲಿ ಬಿಡುಗಡೆ ಆಗಿತ್ತು. ಶಿವಣ್ಣ ಅವರು ಚಂದ್ರು ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ.

ಕಾರ್ಯಕ್ರಮದಲ್ಲಿ ದುನಿಯಾ ವಿಜಯ್, ಗಣೇಶ್, ಧನಂಜಯ್ ಇತರರು ಇದ್ದರು.
___

Be the first to comment

Leave a Reply

Your email address will not be published. Required fields are marked *

Translate »
error: Content is protected !!