ನಿಶ್ಚಿತಾರ್ಥ ಮಾಡಿಕೊಂಡ ದಾವಣಗೆರೆ ಚೆಲುವೆ

ಕನ್ನಡ ಚಿತ್ರರಂಗದ ಜನಪ್ರಿಯ ನಾಯಕ ನಟಿ, ದಾವಣಗೆರೆ ಚೆಲುವೆ ಅದಿತಿ ಪ್ರಭುದೇವ ಅವರು ವೈವಾಹಿಕ ಜೀವನದ ಕಡೆಗೆ ಹೆಜ್ಜೆ ಹಾಕಲು ಮುಂದಡಿ ಇಟ್ಟಿದ್ದು, ಅದರ ಭಾಗವಾಗಿ ಭಾನುವಾರ ಮದುವೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಈ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಅದಿತಿ ಪ್ರಭುದೇವ ಅವರು ಹಂಚಿಕೊಂಡಿದ್ದಾರೆ. ಈ ವೇಳೆ ಅದಿತಿ ಅವರಿಗೆ ಅಭಿಮಾನಿಗಳು ಶುಭ ಹಾರೈಸಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ನಿಶ್ಚಿತಾರ್ಥದ ವಿಷಯವನ್ನು ಖಚಿತಪಡಿಸಿರುವ ಅದಿತಿ ಪ್ರಭುದೇವ ಅವರು ಹುಡುಗನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿರುವ ಫೋಟೊವನ್ನು ಹಂಚಿಕೊಂಡಿದ್ದಾರೆ. ‘ಒಂದು ಕನಸಿನಂತೆ ಈ ಕನಸು ನಿಜವಾಗಿದೆ’ ಎಂದು ಬರೆದಿದ್ದಾರೆ. ಜೊತೆಗೆ ಹ್ಯಾಶ್‌ಟ್ಯಾಗ್‌ ಹಾಕಿ ಎಂಗೆಜ್ಡ್‌ ಎಂದು ಬರೆದುಕೊಂಡಿದ್ದಾರೆ.

ಡಿಸೆಂಬರ್​ 26ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದು, ಹುಡುಗ ಚಿಕ್ಕಮಗಳೂರು ಮೂಲದ ರೈತ ಎನ್ನಲಾಗಿದೆ. ಅದಿತಿ ಮದುವೆಯಾಗುತ್ತಿರುವ ಹುಡುಗನ ಹೆಸರು ಯಶಸ್ ಎನ್ನುವ ಮಾಹಿತಿ ಲಭಿಸಿದೆ. ಯಶಸ್ ಮತ್ತು ಅದಿತಿ ಹಲವು ವರ್ಷಗಳಿಂದ ಪ್ತೀತಿಯಲ್ಲಿದ್ದರು. ಚಿಕ್ಕಮಗಳೂರಿನ ಕಾಫಿ ತೋಟದ ಮಾಲೀಕರಾಗಿರುವ ಯಶಸ್ ಅವರನ್ನು ನಟಿ ಮದುವೆಯಾಗುತ್ತಿದ್ದಾರೆ ಎನ್ನಲಾಗಿದ್ದು ಹೆಚ್ಚಿನ ವಿವರ ಇನ್ನಷ್ಟೇ ಲಭಿಸಬೇಕಿದೆ.

ಸೋಮವಾರ ಅದಿತಿ ಪ್ರಭುದೇವ ಅವರು ನಿಶ್ಚಿತಾರ್ಥ ಮಾಡಿಕೊಂಡಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಗಳು ಹರಿದಾಡಿದ್ದವು. ಇದೀಗ ಸ್ವತಃ ನಟಿಯೇ ಸ್ಪಷ್ಟನೆ ನೀಡಿ ಊಹಾಪೋಹಗಳಿಗೆ ಅಂತ್ಯ ಹಾಡಿದ್ದಾರೆ. ಗುಟ್ಟಾಗಿ  ಅದಿತಿ ಅವರ ನಿಶ್ಚಿತಾರ್ಥ ನಡೆದಿದ್ದು, ಅಭಿಮಾನಿಗಳು ಮದುವೆ ದಿನಾಂಕ, ಹುಡುಗನ ಬಗ್ಗೆ ಆಸಕ್ತಿಯಿಂದ ಪ್ರಶ್ನೆ ಕೇಳುತ್ತಿದ್ದಾರೆ.

ಕೆಲ ದಿನಗಳ ಹಿಂದೆ ಅದಿತಿ ಪ್ರಭುದೇವ ಅಭಿನಯದ ಆನ ಸಿನಿಮಾ ರಿಲೀಸ್ ಆಗಿತ್ತು. ಆದರೆ ಈ ಸಿನಿಮಾಕ್ಕೆ ಥಿಯೇಟರ್ ಸಮಸ್ಯೆ ಉಂಟಾಗಿತ್ತು. ಅದಿತಿ ಪ್ರಭುದೇವ ಕನ್ನಡ ಚಿತ್ರಗಳನ್ನು ಬೆಂಬಲಿಸಿಕೊಂಡು ಬಂದಿದ್ದು, ಬೆಳಗಾವಿಯಲ್ಲಿ ಎಂಇಎಸ್ ಪುಂಟಾಟಕ್ಕೆವಿರೋಧ ವ್ಯಕ್ತಪಡಿಸಿದ್ದರು.

ಕಿರುತೆರೆ ಮೂಲಕ ಬಣ್ಣ ಹಚ್ಚಿದ ಅದಿತಿ ಪ್ರಭುದೇವ, ಸ್ಯಾಂಡಲ್‌ವುಡ್‌ನಲ್ಲಿ ಬಹುಬೇಡಿಕೆಯ ನಟಿ ಆಗಿದ್ದಾರೆ. 2017ರಲ್ಲಿ ಧೈರ್ಯಂ ಚಿತ್ರದ ಮೂಲಕ ಅದಿತಿ ಸಿನಿಮಾ ಬದುಕು ಆರಂಭಿಸಿದರು. 10ಕ್ಕೂ ಹೆಚ್ಚು ಚಿತ್ರಗಳು ಅದಿತಿ ಅವರ ಬಳಿ ಇವೆ.
__

 

 

Be the first to comment

Leave a Reply

Your email address will not be published. Required fields are marked *

Translate »
error: Content is protected !!