ಇಂದು ಸೆಟ್ಟೇರಲಿದೆ ಬಂಧನ2

ಆದಿತ್ಯ ನಟನೆಯ ಬಂಧನ2 ಚಿತ್ರದ ಮುಹೂರ್ತ ಡಿಸೆಂಬರ್ 10 ರಂದು ನೆರವೇರಲಿದೆ.

ನಿರ್ದೇಶಕ ರಾಜೇಂದ್ರ ಸಿಂಗ್‌ ಬಾಬು ನಿರ್ದೇಶನದ ಈ ಚಿತ್ರ ಸಾಕಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿದೆ. ತಮ್ಮ ಮಗನಿಗಾಗಿ ರಾಜೇಂದ್ರಸಿಂಗ್ ಬಾಬು ಅವರು ಯಾವ ರೀತಿ ಕಥೆ ಹೆಣೆದಿದ್ದಾರೆ ಎನ್ನುವ ಕುತೂಹಲ ಸಿನಿಪ್ರಿಯರಲ್ಲಿ ಉಂಟಾಗಿದೆ.

1984ರಲ್ಲಿ ಬಂದ ‘ಬಂಧನ’ ಚಿತ್ರ ಕನ್ನಡದ ಕ್ಲಾಸಿಕ್ ಚಿತ್ರಗಳಲ್ಲಿ ಒಂದಾಗಿದೆ. ವಿಷ್ಣು ವರ್ಧನ್ ಮತ್ತು ಸುಹಾಸಿನಿ ಜೊತೆಯಾಗಿ ಅಭಿನಯಿಸಿದ ‘ಬಂಧನ’ ಚಿತ್ರ ರಾಷ್ಟ್ರೀಯ ಪ್ರಶಸ್ತಿ ಪಡೆದಿತ್ತು. ಆ ಚಿತ್ರ ಪ್ರೇಕ್ಷಕರ ಮನಸಲ್ಲಿ ಇಂದಿಗೂ ಹಸಿರಾಗಿ ಉಳಿದಿದೆ.

ಬಂಧನ ಚಿತ್ರವನ್ನು 1984ರಲ್ಲಿ ರಾಜೇಂದ್ರ ಸಿಂಗ್ ಬಾಬು ಸಿನಿಮಾ ನಿರ್ದೇಶನ ಮಾಡಿದ್ದರು. 2007 ರಲ್ಲಿ ರಾಜೇಂದ್ರ ಸಿಂಗ್‌ ಬಾಬು ಸಹೋದರಿ ವಿಜಯಲಕ್ಷ್ಮಿ ಸಿಂಗ್ ಅವರು ‘ಈ ಬಂಧನ’ಸಿನಿಮಾ ಮಾಡಿದ್ದರು. ಈ ಚಿತ್ರದಲ್ಲಿವಿಷ್ಣುವರ್ಧನ್, ಜಯಪ್ರದಾ, ದರ್ಶನ್, ಶರ್ಮಿಳಾ ಮಾಂಡ್ರೆ ಅಭಿನಯಿಸಿದ್ದರು. ಈಗ ರಾಜೇಂದ್ರ ಸಿಂಗ್‌ ಬಾಬು ಮತ್ತೆ ಬಂಧನ 2 ಚಿತ್ರ ಮಾಡಲು ಮುಂದಾಗಿರುವುದು ನಿರೀಕ್ಷೆ ಹುಟ್ಟು ಹಾಕಿದೆ.

‘ಬಂಧನ2’ ಚಿತ್ರದಲ್ಲಿ ನಟಿ ಸುಹಾಸಿನಿ ಅಭಿನಯಿಸುತ್ತಲಿದ್ದಾರೆ. ಇದು ಚಿತ್ರದ ಬಗ್ಗೆ ಮತ್ತಷ್ಟು ಕುತೂಹಲ ಹುಟ್ಟಿ ಹಾಕಿದೆ. ಸಿನಿಮಾದ ಪಾತ್ರವರ್ಗದಲ್ಲಿ ಸುಧಾರಾಣಿ, ಜೈ ಜಗದೀಶ್, ಸಾಧು ಕೋಕಿಲ ನಟಿಸಲಿದ್ದಾರೆ. ಆದರೆ ಚಿತ್ರದ ನಾಯಕಿ ಯಾರು ಎನ್ನುವ ವಿಚಾರವನ್ನು ಚಿತ್ರತಂಡ ಬಹಿರಂಗ ಮಾಡಿಲ್ಲ.

ರಾಜೇಂದ್ರ ಸಿಂಗ್ ಬಾಬು ಅವರು ದರ್ಶನ್‌ ನಾಯಕ ನಟನಾಗಿ ಅಭಿನಯಿಸಿದ ‘ರಾಜವೀರ ಮದಕರಿ ನಾಯಕ’ ಸಿನಿಮಾ ತಾತ್ಕಾಲಿಕವಾಗಿ ಸ್ಥಗಿತ ಆಗಿದೆ. ಈ ಚಿತ್ರ ವೀರ ಮದಕರಿ ನಾಯಕ ಅವರ ಜೀವನ ಚರಿತ್ರೆ ಆಗಿದೆ. ಆದರೆ ಇದ್ದಕ್ಕಿದ್ದ ಹಾಗೆ ಈ ಚಿತ್ರ ನಿಂತು ಹೋಗಿದ್ದು, ದರ್ಶನ್ ‘ಕ್ರಾಂತಿ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಬಂಧನ2 ಸಿನಿಮಾದ ತಯಾರಿಯಲ್ಲಿ ನಿರತರಾಗಿದ್ದಾರೆ.
____

Be the first to comment

Leave a Reply

Your email address will not be published. Required fields are marked *

Translate »
error: Content is protected !!