ಮೆಚ್ಚುಗೆ ಪಡೆದ ಕಡಲ ತೀರದ ಭಾರ್ಗವ ಟೀಸರ್

ಪನ್ನಗ ಸೋಮಶೇಖರ್ ಕಥೆ ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಕಡಲ ತೀರದ ಭಾರ್ಗವ ಚಿತ್ರದ ಟೀಸರ್ ಪ್ರೇಕ್ಷಕರಿಂದ ಮೆಚ್ಚುಗೆಯ ಮಹಾಪೂರವನ್ನೇ ಪಡೆಯುತ್ತಿದೆ.

ಹೊಸ ಚಿತ್ರದ ಟೀಸರ್ ಪ್ರಾಮಿಸಿಂಗ್ ಆಗಿ ಮೂಡಿಬಂದಿದ್ದು ಬಿಡುಗಡೆಯಾದ ಒಂದು ದಿನದ ಒಳಗಡೆ 80 ಸಾವಿರಕ್ಕೂ ಹೆಚ್ಚು ಜನರು ಟೀಸರ್ ವೀಕ್ಷಣೆ ಮಾಡಿದ್ದಾರೆ. ಚಿತ್ರದಲ್ಲೇನೋ ಇದೆ ಎನ್ನುವ ಕೌತುಕತೆಯನ್ನು ಪ್ರೇಕ್ಷಕರಲ್ಲಿ ಹುಟ್ಟು ಹಾಕುವಲ್ಲಿ ಟೀಸರ್ ಯಶಸ್ವಿಯಾಗಿದೆ.

“ನಾನು ನೋವಿನ ಕಡಲಿಂದ ಎದ್ದು ಬಂದವನು. ನಾನು ಪ್ರೀತಿನೇ ನಂಬಲ್ಲ” ಎನ್ನುವ ನಾಯಕನ ಪಾತ್ರ ಕುತೂಹಲ ಮೂಡಿಸಿದೆ. ಟೀಸರ್ ನಲ್ಲಿ ಪ್ರೀತಿಯ ಸನ್ನಿವೇಶಗಳ ಜೊತೆಗೆ ಹೊಡೆದಾಟಗಳು ಕಂಡು ಬಂದಿವೆ.

ಚಿತ್ರ ತೆರೆಗೆ ಬರೋದಕ್ಕೆ ಸಿದ್ಧ ಆಗಿದ್ದು, ಚಿತ್ರಕ್ಕೆ ವರುಣ್ ರಾಜು ಹಾಗೂ ಭರತ್ ಗೌಡ ಬಂಡವಾಳ ಹೂಡಿದ್ದಾರೆ. ನಿರ್ಮಾಣದ ಜೊತೆಗೆ ಇವರು ನಾಯಕರಾಗಿಯೂ ನಟಿಸಿದ್ದಾರೆ. ಕಡಲ ತೀರದಲ್ಲಿ ವಾಸಿಸುವ ನಾಯಕರಿಬ್ಬರ ಬದುಕು ಬವಣೆಯ ಕಥೆ -ವ್ಯಥೆ ಸಿನಿಮಾದಲ್ಲಿ ಅಡಗಿದ್ದು, ಶೃತಿ ಪ್ರಕಾಶ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

ಬೆಂಗಳೂರು, ಉಡುಪಿ, ಮುರುಡೇಶ್ವರ ಕಡಲತೀರಗಳಲ್ಲಿ ಸಿನಿಮಾದ ಚಿತ್ರೀಕರಣ ನಡೆದಿದೆ. ಚಿತ್ರದಲ್ಲಿ ಈಟಿವಿ ಶ್ರೀಧರ್, ರಾಘವ್ ನಾಗ್, ಅಶ್ವಿನ್ ಹಾಸನ್ ನಟಿಸಿದ್ದಾರೆ. ಅನಿಲ್ ಸಿ.ಜೆ. ಸಂಗೀತ ನಿರ್ದೇಶನ, ಕೀರ್ತನ್ ಪೂಜಾರ್ ಛಾಯಾಗ್ರಹಣ, ಆಶಿಕ್ ಕುಸುಗೊಳ್ಳಿ, ಉಮೇಶ್ ಸಂಕಲನ ಚಿತ್ರಕ್ಕಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!