ಬಾಲಿವುಡ್‌ ನತ್ತ ಧರ್ಮಕೀರ್ತಿರಾಜ್

’ನವಗ್ರಹ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ಧರ್ಮಕೀರ್ತಿರಾಜ್, ಅದರಲ್ಲಿ ಬರುವ ’ಕಣ್ ಕಣ್ಣ ಸಲಿಗೆ’ ಹಾಡು ಇವರಿಗೆ ಹೆಸರು ತಂದುಕೊಟ್ಟಿತ್ತು. ನಂತರ ನಾಯಕನಾಗಿ ಹಲವು ಚಿತ್ರಗಳಲ್ಲಿ ನಟಿಸಿ ತಮ್ಮದೆ ಛಾಪು ಮೂಡಿಸಿಕೊಂಡಿದ್ದಾರೆ. ಈಗ ಬಾಲಿವುಡ್‌ಗೆ ಎಂಟ್ರಿ ಕೊಡುವುದರೊಂದಿಗೆ ಮತ್ತೋಂದು ಹೆಜ್ಜೆಯನ್ನು ಇಟ್ಟಿದ್ದಾರೆ.

ಹಾಗಂತ ಸಿನಿಮಾದಲ್ಲಿ ಅಲ್ಲ. ’ಕಿತ್ನಾ ಮಜಾ ಹೈ’ ಎನ್ನುವ ನಾಲ್ಕು ನಿಮಿಷದ ಹಿಂದಿ ವಿಡಿಯೋ ಆಲ್ಬಂದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರೀತಿಯಲ್ಲಿ ಮೋಸಹೋಗಿ ಆತ್ನಹತ್ಯೆಗೆ ಶರಣಾಗುವ ಹುಡುಗಿಯನ್ನು ಕಾಪಾಡಿ, ಅವಳಲ್ಲಿ ಅನುರಕ್ತಳಾಗಿ ಒಂದಾಗುವ ಕತೆ ಹೊಂದಿದೆ.

ನಿರ್ದೇಶನ ರವಿಶರ್ಮ. ಅಜಯ್‌ದೇವಗನ್ ಮತ್ತು ರಣ್‌ಭೀರ್‌ಕಪೂರ್ ಚಿತ್ರಗಳಿಗೆ ಕೆಲಸ ಮಾಡಿರುವ ಪಪ್ಪುಮಲ ಕ್ರಿಯೇಟೀವ್ ನಿರ್ದೇಶಕರಾಗಿದ್ದಾರೆ.

ಯುನೈಟೆಡ್ ಫಿಲಿಂಸ್ ಎಂಟರ್‌ಟೈನ್‌ಮೆಂಟ್ ಸಂಸ್ಥೆಯೊಂದಿಗೆ ಸೇರಿಕೊಂಡು ನಿರ್ಮಾಣ ಮಾಡಿರುವುದು ಅಶೋಕ್‌ಜೈನ್. ಹೊಸ ಪ್ರತಿಭೆ ನಗ್ಮಅಕ್ತರ್ ನಾಯಕಿ. ಸಾಹಿತ್ಯ,ಸಂಗೀತ ಹಾಗೂ ಗೀತೆಗೆ ಧ್ವನಿಯಾಗಿರುವ ಅಲ್ತಾಫ್‌ಸಯ್ಯೀದ್ ಹಾಡಿನಲ್ಲಿ ಬಂದು ಹೋಗುತ್ತಾರೆ.

ಛಾಯಾಗ್ರಹಣ ಶ್ರೀಕಾಂತ್‌ಅಸತಿ, ಸಂಕಲನ ರಾಕೇಶ್‌ಮೆಹತಾ ಅವರದಾಗಿದೆ. ಯೂಟ್ಯೂಬ್‌ದಲ್ಲಿ ಬಿಡಲಾಗಿರುವ ಗೀತೆಯು ವೈರಲ್ ಆಗಿ ವೀಕ್ಷಕರಿಂದ ಪ್ರಶಂಸೆಗೆ ವ್ಯಕ್ತವಾಗುತ್ತಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!