ಫುಡ್ ಕಿಟ್ ವಿತರಿಸಿದ ನಟ, ಸಮಾಜಸೇವಕ ಮಹೇಂದ್ರ ಮುನ್ನೋತ್

ಲಾಕ್ ಡೌನ್ ಹಿನ್ನೆಲೆಯಲ್ಲಿ ಇಡೀ ಚಿತ್ರರಂಗವೇ ಸ್ತಬ್ಧವಾಗಿ ಹೋಗಿದೆ. ಸಿನಿಮಾವನ್ನೇ ನoಬಿಕೊoಡು ಬಹಳಷ್ಟು ಕಲಾವಿದರು , ತಂತ್ರಜ್ಞರು ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಚಿತ್ರ ಚಟುವಟಿಕೆ ಇಲ್ಲದೆ ಬದುಕು ನಡೆಸುವುದು ಕಷ್ಟಕರವಾಗಿದೆ.

ಇಂತಹ ಪರಿಸ್ಥಿತಿಯನ್ನು ಅರಿತು ಬಹಳಷ್ಟು ಮಂದಿ ಸಹಾಯ ಮಾಡಲು ಮುಂದೆ ಬಂದಿದ್ದಾರೆ. ಆ ನಿಟ್ಟಿನಲ್ಲಿ ಮಾರುತಿ ಮೆಡಿಕಲ್ಸ್ ನ ಮಾಲೀಕರಾದ ನಟ, ನಿರ್ಮಾಪಕ ಹಾಗೂ ಸಮಾಜ ಸೇವಕ ಮಹೇಂದ್ರ ಮುನ್ನೋತ್ ರವರು ಸರಿಸುಮಾರು ನೂರಕ್ಕೂ ಹೆಚ್ಚು ಅಕ್ಕಿ ಮೂಟೆಗಳನ್ನು ಸಿನಿಮಾ ಸಹಕಲಾವಿದರು, ತಂತ್ರಜ್ಞರಿಗೆ ನೀಡಿದರು.

ವೀರೇಶ್ ಚಿತ್ರಮಂದಿರದ ಆವರಣದಲ್ಲಿ ನಿರ್ಮಾಪಕ , ವಾಣಿಜ್ಯ ಮಂಡಳಿಯ ಮಾಜಿ ಕಾರ್ಯದರ್ಶಿ ಬಾ.ಮಾ.ಹರೀಶ್ ನೇತೃತ್ವದಲ್ಲಿ ಅಕ್ಕಿ ಮೂಟೆ ವಿತರಣೆ ಕೆಲಸ ಮಾಡಲಾಯಿತು. ಇದೇ ಸಂದರ್ಭದಲ್ಲಿ ಕೊರೋನದಿಂದ ನಿಧನರಾದ ಅನಾಥ ಶವಗಳನ್ನು ಅಂತ್ಯಕ್ರಿಯೆ ಮಾಡಿರುವ ನಟ ಅರ್ಜುನ್‌ಗೌಡ ರವರ ಸೇವೆಯನ್ನು ಶ್ಲಾಘಿಸಿ ಸನ್ಮಾನ ಮಾಡಲಾಯಿತು.

ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಔದಾರ್ಯವನ್ನು ಹೊಂದಿರುವ ಸಮಾಜಸೇವಕರು ಹಾಗೂ ನಿರ್ಮಾಪಕ ಮಹೇಂದ್ರ ಮುನ್ನೋತ್ ಹಾಗೂ ಇದಕ್ಕೆ ಪೂರಕವಾಗಿ ನಿಂತ ನಿರ್ಮಾಪಕ ಬಾ .ಮಾ. ಹರೀಶ್ ಹಾಗೂ ಚಿತ್ರ ನಿರ್ದೇಶಕ ಹರಿಹರನ್ , ನಿರ್ಮಾಪಕ ಬಾ. ಮಾ. ಗಿರೀಶ್ ಸೇರಿದಂತೆ ಹಲವು ಪ್ರಮುಖರ ಈ ಸೇವಾ ಮನೋಭಾವವನ್ನು ಮೆಚ್ಚಲೇಬೇಕು.

Be the first to comment

Leave a Reply

Your email address will not be published. Required fields are marked *

Translate »
error: Content is protected !!