ಸೆಟ್ಟೇರಿತು ಹೊಸಬರ ‘ಎಣ್ಣೆ ಪಾರ್ಟಿ’

ಕುಡಿತದ ಕುರಿತಾದ ಹೊಸಬರ ಕಾಮಿಡಿ ಸಿನಿಮಾ  ‘ಎಣ್ಣೆ ಪಾರ್ಟಿ’  ಸೆಟ್ಟೇರಿದೆ.

ಬೆಂಗಳೂರಿನ ಪಂಚಮುಖಿ ಗಣಪತಿ ದೇವಸ್ಥಾನದಲ್ಲಿ ಸಿನಿಮಾಗೆ ಅದ್ದೂರಿ ಮುಹೂರ್ತ ಮಾಡಲಾಗಿದೆ.  ಸಿನಿಮಾಗೆ ಭರತ್ ಎಲ್. ಹಾಗೂ ಧನಂಜಯ್‌ ನಾಗರಾಜು ನಿರ್ದೇಶನ ಮಾಡುತ್ತಿದ್ದಾರೆ. ಬಹುತೇಕ ಹೊಸ ಕಲಾವಿದರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ.

‘ಕಾಮನ್ ಮ್ಯಾನ್ ಪ್ರೊಡಕ್ಷನ್’ ಬ್ಯಾನರ್​ ಮೂಲಕ ಪ್ರದೀಪ್ ಕುಮಾರ್ ಕೆ. ಅವರು ‘ಎಣ್ಣೆ ಪಾರ್ಟಿ’ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಸಹಾಯಕ ನಿರ್ದೇಶಕರಾಗಿ ಗುರುತಿಸಿಕೊಂಡ ಧನಂಜಯ್‌ ನಾಗರಾಜು ಅವರ ಕೆಲಸವನ್ನು ಮೆಚ್ಚಿದ ನಿರ್ದೇಶಕ ಭರತ್ ಎಲ್. ಅವರು ಈ ಬಾರಿ ತಮ್ಮ ಜೊತೆ ಆಕ್ಷನ್-ಕಟ್ ಹೇಳಲು ಧನಂಜಯ್‌ ನಾಗರಾಜು ಅವರನ್ನು ಸೇರಿಸಿಕೊಂಡಿದ್ದಾರೆ.

‘ಪ್ರೀತಿ ಎಂಬುದು ವಿಶ್ವದಾದ್ಯಂತ ಇದೆ. ಹಾಗೆಯೇ ಎಣ್ಣೆ ಕೂಡ ಯೂನಿವರ್ಸಲ್. 4 ಯುವ ಜೋಡಿಗಳ ಸುತ್ತ ಈ ಸಿನಿಮಾದ ಕಥೆ ಸಾಗುತ್ತದೆ. ಶ್ರೀಮಂತರು, ಬಡವರು ಎಲ್ಲರೂ ಕುಡಿಯುತ್ತಾರೆ. ಕುಡಿತ ಮಿತಿ ಮೀರಿದರೆ ಏನಾಗುತ್ತದೆ ಎಂಬುದನ್ನು ಹಾಸ್ಯ ಮತ್ತು ಥ್ರಿಲ್ಲರ್ ಶೈಲಿಯಲ್ಲಿ ಮನರಂಜನಾತ್ಮಕವಾಗಿ ತೋರಿಸುವ ಪ್ರಯತ್ನ ಮಾಡುತ್ತೇವೆ’ ಎಂದು ನಿರ್ದೇಶಕರು ಹೇಳಿದ್ದಾರೆ.

ಹೊಸ ಕಲಾವಿದರಾದ ಸಂತೋಷ್, ಶೋಭನ್, ಪ್ರೀತಿ, ವರುಣ್, ಮಂಜುಳಾ, ಮಂಜು ಸುವರ್ಣ, ಅಪ್ಪು ರಾಜ್, ರಾಮು ಕೊನ್ನಾರ್, ರಶ್ಮಿ, ಗ್ರೀಷ್ಮಾ, ದಿವ್ಯಾ, ವೈಶಾಖ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಚಿತ್ರದ ಶೀರ್ಷಿಕೆ ಮತ್ತು ಥೀಮ್​ಗೆ ತಕ್ಕಂತೆ 4 ಎಣ್ಣೆ ಸಾಂಗ್​ ಇರಲಿವೆ. ಇವುಗಳಿಗೆ ಆಕಾಶ್ ಪರ್ವ ಸಂಗೀತ ನಿರ್ದೇಶನ ಮಾಡಲಿದ್ದಾರೆ.

ಬೆಂಗಳೂರು ಸುತ್ತಮುತ್ತ 2 ಹಂತದಲ್ಲಿ  ಸಿನಿಮಾ ಚಿತ್ರೀಕರಣ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ರಾಜ್‌ಕಾಂತ್ ಕೆ. ಛಾಯಾಗ್ರಹಣ ಮಾಡಲಿದ್ದಾರೆ.

——–

Be the first to comment

Leave a Reply

Your email address will not be published. Required fields are marked *

Translate »
error: Content is protected !!