ವೀಕೆಂಡ್ ವಿಥ್ ರಮೇಶ್ ಸೀಸನ್ -4 ಶುರು

‘ವೀಕೆಂಡ್ ವಿಥ್ ರಮೇಶ್ ಸೀಸನ್ -4 ಶುರು

ವಿಭಿನ್ನ ಕಾರ್ಯಕ್ರಮಗಳ ಮೂಲಕ ವೀಕ್ಷಕರನ್ನು ಪ್ರತಿದಿನ ರಂಜಿಸುತ್ತಿರುವ ಜೀ಼ಕನ್ನಡ ವಾಹಿನಿ, ತನ್ನ ವಿಶೇಷ ಕಾರ್ಯಕ್ರಮವನ್ನು ಎರೆಡೂವರೆ ವರ್ಷಗಳ ನಂತರ ಮತ್ತೆ ನಿಮ್ಮ ಮುಂದೆ ತರಲು ಪೂರ್ಣ ತಯಾರಿಯನ್ನು ನಡೆಸಿದೆ.

ಹೌದು, ವೀಕೆಂಡ್ ವಿಥ್ ರಮೇಶ್ ಸೀಸನ್ -4 ಕಾರ್ಯಕ್ರಮದ ಮೂಲಕ ಇಡೀ ಕಿರುತೆರೆಯಲ್ಲಿಯೇ ದೊಡ್ಡ ಛಾಪು ಮೂಡಿಸಿದ್ದ ಜೀ಼ವಾಹಿನಿ ವೀಕೆಂಡ್ ವಿಥ್ ರಮೇಶ್ ಸೀಸನ್ -4 ಕಾರ್ಯಕ್ರಮವನ್ನುಇದೇ ತಿಂಗಳು ಅಂದ್ರೆ ಏಪ್ರಿಲ್ 20ರಿಂದ ಪ್ರತಿ ಶನಿವಾರ ಹಾಗೂ ಭಾನುವಾರ ರಾತ್ರಿ9:30ಕ್ಕೆನಿಮ್ಮ ಮುಂದೆ ಇಡಲಿದೆ.

ವೀಕೆಂಡ್ ವಿಥ್ ರಮೇಶ್ ಸೀಸನ್ -4 ಕಾರ್ಯಕ್ರಮದ ಮೂರೂ ಸೀಸನ್‌ಗೂ ಅತ್ಯದ್ಭುತ ಪ್ರತಿಕ್ರಿಯೆ ಸಿಕ್ಕಿದೆ. ಮೂರು ಸೀಸನ್‌ಗಳಲ್ಲಿ ಸಾಧಕರ ಸೀಟ್ಮೇಲೆ ಕೂತಿದ್ದ ಅತಿಥಿಗಳ ಸಾಧನೆಯ ಹಾದಿಯನ್ನು ಕೇವಲ ಜನರ ಮುಂದೆ ಇಡುವುದಲ್ಲದೇ ಮತ್ತೊಮ್ಮೆ ಅತಿಥಿಗಳಿಗೆ ಅವರು ನಡೆದು ಬಂದ ಹಾದಿಯನ್ನು ತೋರಿಸಿ ಸಾಕಷ್ಟು ಅತ್ಯಮೂಲ್ಯ ಭಾವನೆಗಳನ್ನು ಕಲೆಹಾಕಿರುವ ಕಾರ್ಯಕ್ರಮ ವೀಕೆಂಡ್ ವಿಥ್ ರಮೇಶ್ ಸೀಸನ್ -ಬಾಲ್ಯದಿಂದ ಅವರು ಅನುಭವಿಸಿದ ಕಷ್ಟ-ಸುಖಗಳು, ಕಲಿತಪಾಠಗಳು, ಕಲೆಹಾಕಿದ ಸ್ನೇಹ ಸಂಬಂಧಗಳು, ಖುಷಿಯಕ್ಷಣಗಳು, ಅವರ ಸಾಧನೆಗಳು ಹೀಗೆ ಅವರು ಸವಿಸಿದ ಹಾದಿಯಲ್ಲಿ ಅನುಭವಿಸಿದ ಪ್ರತಿಯೊಂದು ಅಮೂಲ್ಯವಾದ ಕ್ಷಣಗಳನ್ನು ಮತ್ತೊಮ್ಮೆಅವರ ಮುಂದೆ ತೆರೆದಿಟ್ಟು ಅತಿಥಿಗಳಿಗೆ, ವೀಕ್ಷಕರಿಗೆ ರಸದೌತಣವನ್ನು ನೀಡಿದೆ ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮ.
ಇನ್ನು ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ಸಿಗಲು ಕಾರಣ ಸಾಧಕರು ನಡೆದು ಬಂದ ಹಾದಿ ವೀಕ್ಷಕರಿಗೆ ಒಂದು ರೀತಿ ಸ್ಪೂರ್ತಿಯಾಗಿರುವುದು. ತಮ್ಮ ನೆಚ್ಚಿನ ನಟ-ನಟಿ ಅಥವ ಅವರವರ ಕ್ಷೇತ್ರಗಳಲ್ಲಿ ಅದ್ಭುತ ಸಾಧನೆ ಮಾಡಿರುವ ಈ ಅತಿಥಿಗಳು ಹೇಗೆಬೆಳೆದು ಬಂದಿದ್ದರು, ಅವರ ಜೀವನ ಹೇಗೆ ಕಷ್ಟ-ಸುಖ ಎರಡರಿಂದಲೂ ತುಂಬಿರುತ್ತದೆ.

ಸಾಧನೆ ಮಾಡಬೇಕು ಅಂದ್ರೆ ಹೇಗೆ ಛಲಬಿಡದೆ, ಧೃತಿಗೆಡದೆ ಕೆಲಸ ಮಾಡಬೇಕು ಎನ್ನುವುದಕ್ಕೆ ಸಾಧಕರ ಸೀಟ್ಮೇಲೆ ಕುಳಿತುಕೊಳ್ಳುವ ಅತಿಥಿಗಳು ಅತ್ಯುತ್ತಮ ನಿದರ್ಶನ. ಈ ಕಾರ್ಯಕ್ರಮದ ಮೂಲಕ ಸಾಧಕರು ವೀಕ್ಷಕರ ಮನಸ್ಸಿಗೆ ಹತ್ತಿರವಾಗಲು ಕಾರಣವಾಗಿದೆ.

ವೀಕೆಂಡ್ ವಿಥ್ ರಮೇಶ್ ಸೀಸನ್ -4 ಕಾರ್ಯಕ್ರಮದಮುಖ್ಯಆಕರ್ಷಣೆ, ಅದರ ಪ್ರೋಮೋ. ಸಾಕಷ್ಟು ವಿಭಿನ್ನತೆ ಮತ್ತು ವೈಶಿಷ್ಟತೆಯನ್ನು ಈ ಪ್ರೋಮೋ ಒಳಗೊಂಡಿದೆ.

ಪ್ರೋಮೋ ತಯಾರಿಸಲು ಜೀ಼ಕನ್ನಡ ವಾಹಿನಿಯ ತಂಡ ತಲುಪಿದ್ದು ಬೆಂಗಳೂರಿನಿಂದ 258ಕಿ.ಮಿದೂರದಲ್ಲಿರುವ ಮಡಿಕೇರಿಯ ಮಂದಾಲಪಟ್ಟಿಯ ತುತ್ತತುದಿಯನ್ನು.

ಜೀ಼ಕನ್ನಡ ವಾಹಿನಿಯ ಬ್ಯುಸಿನೆಸ್ ಹೆಡ್ ರಾವೇಂದ್ರ ಹುಣಸೂರು ಅವರ ಸಾರಥ್ಯದಲ್ಲಿ ವಾಹಿನಿಯ ತಂತ್ರಜ್ಞರ ತಂಡ ಹಾಗೂ ಪ್ರೊಡಕ್ಷನ್ ತಂಡ ಸಾಕಷ್ಟು ಕಷ್ಟಪಟ್ಟು ಮಂದಾಲಪಟ್ಟಿಯ ತುತ್ತತುದಿಗೆ ಸೆಟ್ಪ್ರಾಪರ್ಟಿಗಳನ್ನು ಸಾಗಿಸಿ ಅಲ್ಲಿ ಒಂದು ಸುಂದರ ಪ್ರೋಮೋ ಸೆಟ್‌ನ್ನು ನಿರ್ಮಿಸಿದ್ದು ಪ್ರೋಮೋ ಅದ್ಭುತವಾಗಿ ಮೂಡಿಬಂದಿದೆ. ಈಗಾಗಲೇ ಪ್ರೋಮೋಗೆ ವೀಕ್ಷಕರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ.

ವೀಕೆಂಡ್ ವಿಥ್ ರಮೇಶ್ ಸೀಸನ್ -4 ಕಾರ್ಯಕ್ರಮದ ಬಗ್ಗೆ ಮಾತನಾಡಿದ ರಾಘವೇಂದ್ರ ಹುಣಸೂರು ” ಪ್ರತಿ ಸೀಸನ್‌ನ ಹಾಗೇ ಈ ಸೀಸನ್‌ನಲ್ಲೂ ವಿಶೇಷ ಸಾಧಕರನ್ನು ಸಾಧಕರ ಸೀಟ್ಮೇಲೆ ಕೂರಿಸಲಿದ್ದೇವೆ. ಸಾಧಕರಿಗೆ ಗೌರವಸಲ್ಲಿಸುವುದರ ಜೊತೆಗೆ ಅವರ ಸಾಧನೆಯ ಹಾದಿ ಪ್ರೇಕ್ಷಕರಿಗೆ ಒಂದು ರೀತಿ ಸ್ಪೂರ್ತಿ ನೀಡಬೇಕು ಎನ್ನುವುದು ಕಾರ್ಯಕ್ರಮದ ಉದ್ದೇಶ.

ಕಳೆದ ಮೂರು ಸೀಸನ್‌ಗೆ ಕೊಟ್ಟ ಪ್ರೀತಿ ಈಸೀಸನ್‌ಗೂ ನೀಡಿ. ಇನ್ನು ನಾಲ್ಕನೆ ಸೀಸನ್ಮುಗಿದ ನಂತರ ನಾಲ್ಕು ಸೀಸನ್‌ನಲ್ಲಿ ಸಾಧಕರ ಸೀಟ್ಮೇಲೆ ಆಸೀನರಾಗಿದ್ದ ಅತಿಥಿಗಳನ್ನು ಕರೆಸಿ ಮತ್ತೊಂದು ಅದ್ಭುತ ಕಾರ್ಯಕ್ರಮ ಮಾಡಿ ನಾಲ್ಕು ಸೀಸನ್‌ನ ಸಿ.ಡಿ ಹಾಗೂ ವೀಕೆಂಡ್ ವಿಥ್ ರಮೇಶ್ ಪುಸ್ತಕ ಬಿಡುಗಡೆ ಮಾಡಲಿದ್ದೇವೆ”ಎಂದರು.

ಪ್ರತಿ ಸೀಸನ್‌ನ ಹಾಗೇ ಈ ಸೀಸನ್‌ನಲ್ಲೂ ವಿಭಿನ್ನ ಕ್ಷೇತ್ರಗಳಲ್ಲಿ ಸಾಧನೆಮಾಡಿರುವ, ನಮ್ಮ ನಾಡಿನ ಜನ ಹೆಮ್ಮೆಪಡುವಂತೆ ಮಾಡಿರುವ ಸಾಧಕರು ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಬರಲಿದ್ದಾರೆ. ಅವರ ಲೈಫ್ ಜರ್ನಿಯನ್ನು ಅವರಿಗೆ ತೋರಿಸಿ ಮತ್ತೆ ಅವರನ್ನು ಹಿಂದಿನ ದಿನಗಳಿಗೆ ಕರೆದುಕೊಂಡು ಹೋಗಲು ಇದೇ ತಿಂಗಳು ಅಂದ್ರೆ ಏಪ್ರಿಲ್ 20ರಿಂದ ಪ್ರತಿ ಶನಿವಾರ ಹಾಗೂ ಭಾನುವಾರ ರಾತ್ರಿ9 30ಕ್ಕೆ ನಿಮ್ಮ ನೆಚ್ಚಿನ ಜೀ಼ಕನ್ನಡ ವಾಹಿನಿಯಲ್ಲಿ ವೀಕೆಂಡ್ ವಿಥ್ ರಮೇಶ್ ಸೀಸನ್ -4 ಕಾರ್ಯಕ್ರಮ ಪ್ರಸಾರವಾಗಲಿದೆ

This Article Has 1 Comment
  1. Pingback: Tow Truck Waterbury CT

Leave a Reply

Your email address will not be published. Required fields are marked *

Translate »
error: Content is protected !!