ವೆಬ್ ಸರಣಿ ನಿರ್ಮಾಣಕ್ಕೆ ಇಳಿದ ಮಣಿರತ್ನಂ

ತಮಿಳಿನ ಖ್ಯಾತ ನಿರ್ದೇಶಕ ಮಣಿರತ್ನಂ ಮೊದಲ ಬಾರಿಗೆ ವೆಬ್​ ಸಿರೀಸ್​ ನಿರ್ಮಾಣಕ್ಕೆ ಕೈ ಹಾಕಿದ್ದಾರೆ.

‘ನವರಸ’ ಶೀರ್ಷಿಕೆಯ ವೆಬ್​ ಸರಣಿಯಲ್ಲಿ ತಮಿಳು ಚಿತ್ರರಂಗದ ಅನೇಕ ಸ್ಟಾರ್​ ನಟರು ಅಭಿನಯಿಸಿದ್ದು ಇದರ ಟ್ರೇಲರ್​ ಕುತೂಹಲ ಮೂಡಿಸಿದೆ.

ಜು.27ರಂದು ಟ್ರೇಲರ್​ ಬಿಡುಗಡೆ ಆಗಿದ್ದು ಇದಕ್ಕೆ ಜನರಿಂದ ಮೆಚ್ಚುಗೆ ವ್ಯಕ್ತವಾಗಿದೆ. ನೆಟ್​ಫ್ಲಿಕ್ಸ್​ ಮೂಲಕ ಆಗಸ್ಟ್​ 6ರಂದು ‘ನವರಸ’ ಪ್ರಸಾರ ಆಗಲಿದೆ.

ವಿಜಯ್ ಸೇತುಪತಿ, ಸೂರ್ಯ, ಪ್ರಕಾಶ್​ ರೈ, ರೇವತಿ, ಸಿದ್ಧಾರ್ಥ್​, ಅಶೋಕ್​ ಸೆಲ್ವನ್​, ನಾಗ ಶೌರ್ಯ, ಅಂಜಲಿ, ಪಾರ್ವತಿ ತಿರುವತ್ತು, ಯೋಗಿ ಬಾಬು, ಅರವಿಂದ್​ ಸ್ವಾಮಿ ಸೇರಿದಂತೆ ಅನೇಕ ಕಲಾವಿದರು ವೆಬ್ ಸರಣಿಗಾಗಿ ಬಣ್ಣ ಹಚ್ಚಿದ್ದಾರೆ. ತಮಿಳು, ತೆಲುಗು, ಹಿಂದಿ ಮತ್ತು ಇಂಗ್ಲಿಷ್​ನಲ್ಲಿ ಇದು ಪ್ರಸಾರ ಆಗಲಿದೆ.
‘ನವರಸ’ ವೆಬ್​ ಸಿರೀಸ್​ನಲ್ಲಿ 9 ಕಥೆಗಳ ಸಂಗಮ ಆಗಿದೆ. ಇಲ್ಲಿ 9 ಕಥೆಗಳ ಮೂಲಕ ನವರಸಗಳನ್ನು ವಿವರಿಸುವ ಪ್ರಯತ್ನ ಮಾಡಲಾಗಿದೆ.

ಪ್ರತಿ ಕಥೆಗೂ ಪ್ರತ್ಯೇಕ ನಿರ್ದೇಶಕರು ತಮ್ಮ ಕೈ ಚಳಕ ತೋರಿರುವುದು ವಿಶೇಷ ಆಗಿದೆ. ತಮಿಳಿನ ಖ್ಯಾತ ನಿರ್ದೇಶಕರಾದ ಪ್ರಿಯದರ್ಶನ್​, ಕಾರ್ತಿಕ್​ ನರೇನ್​, ವಸಂತ್​ ಎಸ್​. ಸಾಯಿ, ಗೌತಮ್​ ವಾಸುದೇವ್​ ಮೆನನ್​, ಬಿಜೋಯ್​ ನಂಬಿಯಾರ್​, ಕಾರ್ತಿಕ್​ ಸುಬ್ಬರಾಜು, ಅರವಿಂದ್ ಸ್ವಾಮಿ, ಸರ್ಜುನ್​ ಕೆ.ಎಮ್​, ರತೀಂದ್ರನ್​ ಆರ್​. ಪ್ರಸಾದ್​ ನಿರ್ದೇಶನ ಮಾಡಿದ್ದು ಚಿತ್ರ ಪ್ರೇಮಿಗಳಲ್ಲಿ ಕುತೂಹಲ ಮೂಡಿಸಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!