ವಿಕ್ರಮ್ ವೇದಾ ಚಿತ್ರಕ್ಕೆ ಬಹಿಷ್ಕಾರದ ಭೀತಿ

ಹೃತಿಕ್ ರೋಷನ್ ನಾಯಕರಾಗಿರುವ ವಿಕ್ರಮ್ ವೇದಾ ಚಿತ್ರಕ್ಕೆ ಬಹಿಷ್ಕಾರದ ಭೀತಿ ಎದುರಾಗಿದೆ.

ಹೃತಿಕ್ ಇತ್ತೀಚೆಗೆ ಅಮೀರ್ ಖಾನ್ ನಟನೆಯ ಲಾಲ್ ಸಿಂಗ್ ಛಡ್ಡಾ ಸಿನಿಮಾವನ್ನು ಹೊಗಳಿದ್ದರು. ಈ ಕಾರಣಕ್ಕೆ ಈಗ ಹೃತಿಕ್ ಸಿನಿಮಾವನ್ನು ಬಹಿಷ್ಕರಿಸಲು ನೆಟ್ಟಿಗರು ಕರೆ ಕೊಟ್ಟಿದ್ದಾರೆ.

ಹಿಂದೂ ದೇವರಿಗೆ ಅವಮಾನ ಮಾಡಿದ್ದಕ್ಕೆ ಅಮೀರ್ ಖಾನ್ ಅಭಿನಯದ ಲಾಲ್ ಸಿಂಗ್ ಛಡ್ಡಾ, ಅಕ್ಷಯ್ ಕುಮಾರ್ ಅವರ ರಕ್ಷಾ ಬಂಧನ್ ಸಿನಿಮಾ ವಿರುದ್ಧ ಬಹಿಷ್ಕಾರದ ಅಭಿಯಾನ ಮಾಡಲಾಗಿತ್ತು. ಲಾಲ್ ಸಿಂಗ್ ಛಡ್ಡಾ, ರಕ್ಷಾ ಬಂಧನ್ ಸಿನಿಮಾಗಳು ಬಹಿಷ್ಕಾರದ ಅಭಿಯಾನದ ಬಿಸಿಯಿಂದಾಗಿ ಬಾಕ್ಸ್ ಆಫೀಸ್ ನಲ್ಲಿ ಸೋತು ಹೋಗಿವೆ.

ರಕ್ಷಾ ಬಂಧನ್ ಮೂಲಕ ಅಕ್ಷಯ್​ ಕುಮಾರ್​ ಅವರಿಗೆ ಹ್ಯಾಟ್ರಿಕ್ ಸೋಲು ಉಂಟಾಗಿದೆ. ಈ ವರ್ಷ ಮಾರ್ಚ್​ 18ರಂದು ಬಿಡುಗಡೆಯಾದ ಬಚ್ಚನ್​ ಪಾಂಡೆ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಮೋಡಿ ಮಾಡಲಿಲ್ಲ. ಈ ಚಿತ್ರದಿಂದ ಅಕ್ಷಯ್​ ಕುಮಾರ್​ಗೆ ಗೆಲುವು ಸಿಗಲಿಲ್ಲ. ಆ ನಂತರ ಅವರ ಅಭಿಮಾನಿಗಳು ‘ಸಾಮ್ರಾಟ್​ ಪೃಥ್ವಿರಾಜ್​’ ಸಿನಿಮಾ ಮೇಲೆ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದರು. ಕೇಂದ್ರ ಗೃಹ ಸಚಿವ ಅಮಿತ್​ ಶಾ ಈ ಚಿತ್ರವನ್ನು ನೋಡಿ ಮೆಚ್ಚಿಕೊಂಡಿದ್ದರು. ಆದರೆ ಆ ಸಿನಿಮಾ ಸೋತಿತು.

ಆಗಸ್ಟ್​ 11ರಂದು ಬಿಡುಗಡೆಯಾದ ‘ರಕ್ಷಾ ಬಂಧನ್​’ ಸಿನಿಮಾದಲ್ಲಿ ಫ್ಯಾಮಿಲಿ ಕಥಾಹಂದರ ಇದೆ. ರಕ್ಷಾ ಬಂಧನ ಹಬ್ಬ ಹಾಗೂ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಈ ಚಿತ್ರಕ್ಕೆ ಒಳ್ಳೆಯ ಕಲೆಕ್ಷನ್​ ಆಗಬಹುದು ಎಂದು ನಂಬಲಾಗಿತ್ತು. ಆದರೆ ನಾಲ್ಕು ದಿನಕ್ಕೆ ಈ ಚಿತ್ರ ಗಳಿಸಿದ್ದು 28 ಕೋಟಿ ರೂಪಾಯಿ ಮಾತ್ರ. ಸತತ ಸೋಲಿನ ಸುಳಿಗೆ ಸಿಲುಕಿದ ಅಕ್ಷಯ್​ ಕುಮಾರ್​ ಮತ್ತೆ ಕೆನಡಾ ಕಡೆಗೆ ಮುಖ ಮಾಡುತ್ತಾರಾ ಎಂದು ಟ್ರೋಲ್​ ಮಂದಿ ಲೇವಡಿ ಮಾಡುತ್ತಿದ್ದಾರೆ.

ವೃತ್ತಿಜೀವನದಲ್ಲಿ ಅಕ್ಷಯ್​ ಕುಮಾರ್​ ಅವರು ಸತತ ಸೋಲು ಕಂಡಿದ್ದರು. 14-15 ಸಿನಿಮಾಗಳು ಬ್ಯಾಕ್​ ಟು ಬ್ಯಾಕ್​ ಸೋತಾಗ ಅವರು ಭಾರತ ಬಿಟ್ಟು ಕೆನಡಾಗೆ ತೆರಳಲು ನಿರ್ಧರಿಸಿ ಅಲ್ಲಿನ ಪೌರತ್ವ ಪಡೆಯುಲ್ಲಿಯೂ ಯಶಸ್ವಿ ಆಗಿದ್ದರು. ಕಷ್ಟದ ಸಂದರ್ಭದಲ್ಲಿ ಭಾರತ ತೊರೆಯುವ ನಿರ್ಧಾರ ಮಾಡಿದ್ದಕ್ಕೆ ಅವರನ್ನು ಇಂದಿಗೂ ಜನರು ಟ್ರೋಲ್​ ಮಾಡುತ್ತಲೇ ಇದ್ದಾರೆ.

ಬಹಿಷ್ಕಾರದ ಅಭಿಯಾನದ ಬಿಸಿಯಿಂದಾಗಿ ಹೃತಿಕ್ ರೋಷನ್ ನಾಯಕರಾಗಿರುವ ವಿಕ್ರಮ್ ವೇದಾ ಚಿತ್ರದ ಮೇಲೆ ಪರಿಣಾಮ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
___

Be the first to comment

Leave a Reply

Your email address will not be published. Required fields are marked *

Translate »
error: Content is protected !!