ಉಲ್ಟಾ ಹೋಡಿತಾ ‘ಉಪ್ಪಿಸಂ’?

ಉಪ್ಪಿ ಹಿಂದೊಮ್ಮೆ ‘ಮಾರಿ ಕಣ್ಣು ಹೋರಿ ಮ್ಯಾಗೇ..’ ಎಂಬ ಹಾಡಿನಿಂದ ಸ್ಯಾಂಡಲ್‍ವುಡ್‍ನಲ್ಲಿ ಸಂಚಲನ ಮೂಡಿಸಿದ್ದರು. ಈಗ ಇದೇ ಸಂಚಲನ ಉಪ್ಪಿಗೇ ಉಲ್ಟಾಹೊಡೆದು.. ‘ಪ್ರಿಯಾಂಕನ ಕಣ್ಣು ರಚಿತಾನ ಮೇಲೆ..’ ಎಂಬಂತಾಗಿದೆ. ಕನ್‍ಫ್ಯೂಸ್ ಆಯ್ತಾ ಮುಂದೆ ಓದಿ ಅರ್ಥ ಆಗುತ್ತೆ.

ಆರ್. ಚಂದ್ರು ನಿರ್ದೇಶನದ ಉಪೇಂದ್ರ ಅಭಿನಯದ ಐ ಲವ್ ಸಿನಿಮಾದ ‘ಮಾತನಾಡಿ ಮಾಯವಾದೆ’ ಹಾಡು ರಿಲೀಸ್ ಆಗಿದೆ, ಹಾಡಿನಲ್ಲಿ ಉಪೇಂದ್ರ ಮತ್ತು ರಚಿತಾ ರಾಮ್ ರೋಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದಾರೆ, ಅನ್ನೊದಕ್ಕಿಂತ ಸಕತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ ಅನ್ನೋದು ಹೆಚ್ಚು ಸೂಕ್ತ.
ಹಾಡಿನ ಬಗ್ಗೆ ಉಪೇಂದ್ರ ಪತ್ನಿ ಹಾಗೂ ನಟಿ ಪ್ರಿಯಾಂಕಾ ಗರಂ ಆಗಿದ್ದಾರೆ ‘ಹಾಡಿನಲ್ಲಿರುವ ಹಸಿಬಿಸಿ

ದೃಶ್ಯಗಳಿಂದಾಗಿ ಕೆಟ್ಟ ಭಾವನೆ ಬರುತ್ತಿದೆ, ಜೊತೆಗೆ ರಚಿತಾ ರಾಮ್ ಅನಗತ್ಯವಾಗಿ ಉಪೇಂದ್ರ ಅವರ ಹೆಸರನ್ನು ಎಳೆದು ತರುತ್ತಿದ್ದಾರೆ, ಪ್ರತಿ ಸಂದರ್ಶನಲ್ಲೂ ಅವರು ಉಪೇಂದ್ರ ಹೆಸರನ್ನು ಮಧ್ಯಕ್ಕೆ ತರುತ್ತಿದ್ದಾರೆ’’ ಎಂದು ಕಿಡಿ ಕಾರಿದ್ದಾರೆ. ಪಾಪ ಪ್ರಿಯಾಂಕಳಿಗೆ ರವಿಮಾಮನೊಂದಿಗೆ ಲಜ್ಜೆಬಿಟ್ಟು ಹೆಜ್ಜೆ ಹಾಕಿದ್ದು ಮರೆತೇ ಹೋಯ್ತೇನೋ. ಪ್ರಿಯಾಂಕ ಮುಂದುವರೆಸುತ್ತಾ..’ಸಿನಿಮಾದಲ್ಲಿ ತಾವು ಯಾವ ರೀತಿಯ ಅಭಿನಯ ಮಾಡಿದ್ದಾರೆ ಎಂಬ ಬಗ್ಗೆ ರಚಿತಾ ಹೇಳಿಕೊಳ್ಳಲಿ, ಅದನ್ನು ಬಿಟ್ಟು ಎಲ್ಲದಕ್ಕೂ ಉಪೇಂದ್ರ ಅವರ ಹೆಸರನ್ನು ಏಕೆ ಹೇಳಬೇಕು, ಆಕೆಯೇನು ಸಿನಿಮಾ ಇಂಡಸ್ಟ್ರಿಗೆ ಹೊಸಬರಲ್ಲ, ನಿನ್ನೆ ಮೊನ್ನೆ ಸಿನಿಮಾ ಇಂಡಸ್ಚ್ರಿಗೆ ಬಂದವರಲ್ಲ’’ ಎಂದು ತಮ್ಮ ಮೈಯನ್ನು ತಾವೇ ಪರಚಿಕೊಂಡು ನಿರ್ದೇಶಕ ಚಂದ್ರುವಿಗೆ ಮನಸ್ಸಿನಲ್ಲಿಯೇ ಹಿಡಿಶಾಪ ಹಾಕುತ್ತಿದ್ದಾರೆ. ‘ಕಥೆ ಬಗ್ಗೆ ನಾನು ಕೇಳಿದ್ದೆ, ಇದೊಂದು ಕೌಟುಂಬಿಕ ಕಥಾವಸ್ತು ಎಂದು ಹೇಳಿದ್ದರು, ಆದರೆ ಸಿನಿಮಾದಲ್ಲಿ ಈ ಹಾಡು ಇರುವ ಬಗ್ಗೆ ನನಗೆ ಐಡಿಯಾ ಇರಲಿಲ್ಲ, ಟ್ರೇಲರ್ ನಲ್ಲಿ ಹಾಡನ್ನು ನೋಡುವವರೆಗೂ ನನಗೆ ಈ ಸಾಂಗ್ ಬಗ್ಗೆ ತಿಳಿದೇ ಇರಲಿಲ್ಲ, ಈ ಮೊದಲಿನ ಸಂದರ್ಶನಗಳಲ್ಲಿ ರಚಿತಾ ಈ ಹಾಡಿನ ಬಗ್ಗೆ ಸಂತಸದಿಂದ ಮಾತನಾಡಿದ್ದರು. ಉಪೇಂದ್ರ ಜೊತೆ ನಾನು ಕೂಡ ಈ ಹಾಡಿನ ಬಗ್ಗೆ ವಿಚಾರಿಸಿದ್ದೆ, ಅದು ಸಿನಿಮಾದ ಒಂದು ಭಾಗ ಎಂದು ಹೇಳಿದ್ದರು, ಆದರೆ ರಚಿತಾ ಪದೇ ಪದೇ ಆ ಹಾಡನ್ನು ಉಪೇಂದ್ರ ನಿರ್ದೇಶಿಸಿದ್ದಾರೆ ಎಂದು ಹೇಳುತ್ತಿದ್ದಾರೆ, ನಿರ್ದೇಶಕ ಚಂದ್ರು ಮತ್ತು ಕೊರಿಯೋಗ್ರಾಫರ್ ಚಿನ್ನಿ ಪ್ರಕಾಶ್ ಅವರ ಹೆಸರು ಹೇಳುತ್ತಿಲ್ಲ ಏಕೆ’’ ಎಂದು ಪುಂಖಾನುಪುಂಖವಾಗಿ ರಚಿತಾಮೇಲೆ ತಮ್ಮ ಅಸಂಬದ್ಧ ಕನ್ನಡದಲ್ಲಿ ಅಕ್ಷರಸಃ ಉಗಿದಿದ್ದಾರೆ. ಆದರೂ ಮನಸ್ಸಿಗೆ ಸಮದಾನವಾಗದೇ ಪ್ರಿಯಾಂಕ ‘ಉಪೇಂದ್ರ ಪ್ರಸಿದ್ದ ನಟ ಹಾಗೂ ನಿರ್ದೇಶಕ,. ಅವರ ಬಗ್ಗೆ ಮಾತನಾಡುವಾಗ ಆಕೆ ಜಾಗ್ರತೆಯಿಂದ ಇರಬೇಕು, ತಮ್ಮ ಸಂದರ್ಶನದಲ್ಲಿ ಕೇವಲ ಹಾಡಿನ ಚಿತ್ರೀಕರಣ ಹೇಗೆ ನಡೆಯಿತು ಎಂಬ ಬಗ್ಗೆ ಹೇಳಿದ್ದಾರೆ. ಸಿನಿಮಾ ಬಗ್ಗೆ ಹೇಳಲು ಬೇಕಾದಷ್ಟು ವಿಷಯಗಳಿವೆ, ಆದರೆ ರಚಿತಾ ಕೇವಲ ಹಾಡೊಂದರ ಬಗ್ಗೆ ಮಾತ್ರ ಗಮನ ಹರಿಸಿದ್ದಾರೆ. ಹಾಡಿನ ಬಗ್ಗೆ ಆಕೆಯೆ ಅಸಹನೆಯಿದ್ದಿದ್ದರೇ, ಸಾಂಗ್ ಮಾಡಲು ಒಪ್ಪಬಾರದಿತ್ತು, ಹಾಡಿನ ಚಿತ್ರೀಕರಣಕ್ಕೆ ಒಪ್ಪಿಕೊಂಡು ಈಗ ಉಪೇಂದ್ರ ಅವರ ಹೆಸರನ್ನು ಎಳೆದು ತರುತ್ತಿರುವುದು ಉಪೇಂದ್ರ ಅವರ ಬಗ್ಗೆ ಕೆಟ್ಟದಾಗಿ ಚಿತ್ರಿಸಿದಂತಾಗಿದೆ’’ ಎಂದು ತಮ್ಮ ಸೂಪರ್‍ಸ್ಟಾರ್ ಅನ್ನು ಸಮರ್ಥಿಸಿಕೊಂಡಿದ್ದಾರೆ.
ಆದರೆ, ಟ್ರೈಲರ್‍ನಲ್ಲಿ ಹರಿಯಬಿಟ್ಟ ಹಸಿಬಿಸಿ ದೃಶ್ಯಗಳುಇ ಇದೆಯಾ ಸಿನ್ಮಾ ರಿಲೀಸ್ ಆದಮೇಲೆ ಗೊತ್ತಾಗಬೇಕಿದೆ. ಐ ಲವ್ ಯೂ ಸಿನಿಮಾಗಾಗಿ ಕಾಸ್ಟ್ಯೂಮ್ ಡಿಸೈನ್ ಮಾಡಿರುವ ಪ್ರಿಯಾಂಕರನ್ನು ಚಂದ್ರು ಅಪ್ಪಿತಪ್ಪಿಯೂ ಯಾವುದೇ ಪ್ರೆಸ್‍ಮೀಟ್‍ಗೆ ಕರೆಯಲಿಲ್ಲ. ಇದರ ಅರ್ಥ ಇಷ್ಟೇ ಈ ‘ಹಸಿಬಿಸಿ-ಕಸಿವಿಸಿ’ ಹಾಡಿನ ಬಗ್ಗೆ ಹೊತ್ತಿಕೊಂಡ ಬೆಂಕಿ ಈಗಿನದ್ದಲ್ಲ, ಚಿತ್ರೀಕರಣಸಮಯದಲ್ಲೇ ಪ್ರಿಯಾಂಕ&ಉಪ್ಪಿ ನಡುವೆ ಇದೇ ವಿಚಾರಕ್ಕೆ ವಾದ-ವಿವಾದ ಆಗಿರುವ ಸಾಧ್ಯತೆಯಿದೆ. ಚಿತ್ರಕ್ಕೆ ‘ಐಲವ್‍ಯೂ’ ಅಂತ ಟೈಟಲ್ ಇಟ್ಟು ಮಾಡಬಾರದ್ದನ್ನು ಮಾಡಿದರೆ ಹೆಂಡತಿಯಾದವಳು ಸಹಿಸಿಕೊಂಡಾಳೇ? ಅಥವಾ ಸಹಿಸಿಕೊಳ್ಳದೇ ಬಾಯಿ ಹರಿಯಬಿಡುವುದು ಪ್ರೊಫೆಶನಲಿಸಮ್‍ಗೆ ವಿರುದ್ಧವೇ?. ‘ಬುದ್ಧಿವಂತ’ ಉಪ್ಪೀಯೇ ಆನ್ಸರಿಸಬೇಕು.

This Article Has 3 Comments
  1. Pingback: CI CD

  2. Pingback: what is devsecops

  3. Pingback: DevSecOps Solutions

Leave a Reply

Your email address will not be published. Required fields are marked *

Translate »
error: Content is protected !!