ಮೇ 20ಕ್ಕೆ ಟ್ವೆಂಟಿ ಒನ್ ಅವರ್ ತೆರೆಗೆ

ಧನಂಜಯ್ ನಟನೆಯ ಕನ್ನಡ-ಮಲಯಾಳಂ ದ್ವಿಭಾಷಾ ಚಿತ್ರ ಟ್ವೆಂಟಿ ಒನ್ ಅವರ್ ಚಿತ್ರಮಂದಿರಗಳಲ್ಲಿ ಮೇ 20 ರಂದು ರಿಲೀಸ್ ಆಗಲಿದೆ.

ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಸಸ್ಪೆನ್ಸ್, ಥ್ರಿಲ್ಲರ್ ಎಲಿಮೆಂಟ್ ಆಗಿರುವ ಸಿನಿಮಾದ ಕಥೆ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಈ ಥ್ರಿಲ್ಲರ್ ಸಿನಿಮಾವನ್ನು ಜೈಶಂಕರ್ ನಿರ್ದೇಶಿಸಿದ್ದಾರೆ. ಅಹಂ ಕಾನ್ಸೆಪ್ಟ್ ಪ್ರೈವೇಟ್ ಲಿಮಿಟೆಡ್ ಬ್ಯಾನರ್ ನಲ್ಲಿ ಚಿತ್ರವನ್ನು ಎನ್ ಎಸ್ ಬಾಲಕೃಷ್ಣ, ಅಭಿಷೇಕ್ ತುಮಕೂರ್ ರುದ್ರಮೂರ್ತಿ, ಸುನಿಲ್ ಗೌಡ, ಪ್ರವೀಣ್ ಮಹಾದೇವ ಅವರು ನಿರ್ಮಿಸಿದ್ದಾರೆ.

ಮಲಯಾಳಿ ಮಹಿಳೆ ನಾಪತ್ತೆ ಪ್ರಕರಣ ಕುರಿತ ಕಥೆ ಇದಾಗಿದೆ. ಧನಂಜಯ್ ಈ ಪ್ರಕರಣದ ತನಿಖೆ ನಡೆಸುವ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದಾರೆ. ಚಿತ್ರದಲ್ಲಿ ದುರ್ಗಾ ಕೃಷ್ಣ, ಸುದೇವ್ ನಾಯರ್, ರಾಹುಲ್ ಮಾಧವ್, ಅಪೂರ್ವ ಭಾರದ್ವಾಜ್, ಪೂರ್ಣ ಚಂದ್ರ, ದಿನೇಶ್ ಬಾಬು ಇತರರು ನಟಿಸಿದ್ದಾರೆ.

ಸದ್ಯ ಧನಂಜಯ್ ಹೆಡ್ ಬುಷ್ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ. ಅದು ಈಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಆದರೆ ಚಿತ್ರದ ಬಗ್ಗೆ ಎಂಪಿ ಜಯರಾಜ್ ಮಗ ಅಜಿತ್ ತಕರಾರು ಎತ್ತಿದ್ದು, ತಮ್ಮ ತಂದೆಯ ಜೀವನ ಕಥೆ ಇರುವ ಕಾರಣ ಚಿತ್ರ ಬಿಡುಗಡೆಗೆ ಅವಕಾಶ ನೀಡುವುದಿಲ್ಲ ಎಂದು ಹೇಳುವ ಮೂಲಕ ಈ ಚಿತ್ರ ವಿವಾದಕ್ಕೆ ಈಡಾಗಿದೆ.

ಇದಲ್ಲದೇ ಧನಂಜಯ ನಟನೆಯ ಮಾನ್ಸೂನ್ ರಾಗ, ಬೈರಾಗಿ, ತೋತಾಪುರಿ, ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ ಚಿತ್ರಗಳು ತೆರೆಗೆ ಬರಬೇಕಿದೆ. ಧನಂಜಯ್ ತಮ್ಮ ನಟನೆಯ 25 ನೇ ಚಿತ್ರ ಹೊಯ್ಸಳ ಚಿತ್ರೀಕರಣ ಪ್ರಾರಂಭಿಸಲು ಸಿದ್ಧತೆ ನಡೆಸಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!