ಬಹುಬೇಡಿಕೆಯ ನಟಿಯಾಗಿರುವ ತ್ರಿಷಾ ಕೃಷ್ಣನ್ ಸದ್ದಿಲ್ಲದೇ ಉಂಗುರ ಬದಲಿಸಿಕೊಂಡ್ರಾ ಎಂಬ ಚರ್ಚೆ ಅಭಿಮಾನಿಗಳ ತಲೆಯಲ್ಲಿ ಹುಟ್ಟುಹಾಕಿದೆ.
ತ್ರಿಷಾ ಕೃಷ್ಣನ್ ‘ಪ್ರೀತಿ ಗೆಲ್ಲುತ್ತದೆ’ ಎಂಬ ಕ್ಯಾಪ್ಟನ್ ಕೊಟ್ಟು ಸಾಂಪ್ರದಾಯಿಕ ಹಸಿರು ಸೀರೆಯನ್ನು ಉಟ್ಟು, ಆಕರ್ಷಕ ಉಂಗುರ ಮತ್ತು ಸೊಗಸಾದ ಪೆಂಡೆಂಟ್ ಧರಿಸಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ. ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ತ್ರಿಷಾ ಎಂಗೇಜ್ ಮೆಂಟ್ ವಿಷಯವೀಗ ಟಾಕ್ ದಿ ಟೌನ್ ಆಗಿದೆ. ತ್ರಿಷಾ ವರಿಸುವ ಹುಡುಗ ಯಾರು? ಇತರ ಪ್ರಶ್ನೆಗಳು ಅಭಿಮಾನಿಗಳ ತಲೆಯಲ್ಲಿ ಹುಟ್ಟಿದೆ.
ಕೆಲ ವರ್ಷಗಳ ಹಿಂದೆ ತ್ರಿಷಾ ಉದ್ಯಮಿ ಹಾಗೂ ನಿರ್ಮಾಪಕ ವರುಣ್ ಮಣಿಯನ್ ಜೊತೆ ಉಂಗುರ ಬದಲಿಸಿಕೊಂಡಿದ್ದರು. ಆ ಬಳಿಕ ಈ ನಿಶ್ಚಿತಾರ್ಥ ಮುರಿದು ಬಿತ್ತು. ನಂತರ ತ್ರಿಷಾ ಜೊತೆ ಹಲವು ನಟರ ಹೆಸರು ತಳುಕು ಹಾಕಿಕೊಂಡಿತ್ತು. ದಳಪತಿ ವಿಜಯ್ -ತ್ರಿಷಾ ಮದುವೆ ಆಗಿಬಿಡುತ್ತಾರೆ ಎಂಬ ಪುಕಾರು ಹಬ್ಬಿತ್ತು. ಸದ್ಯ ವಿಜಯ್ ರಾಜಕೀಯದಲ್ಲಿ ಬ್ಯುಸಿಯಾಗಿದ್ದಾರೆ. ಪವರ್ ಸಿನಿಮಾ ಮೂಲಕ ಕನ್ನಡ ಚಿತ್ರರಸಿಕರಿಗೂ ತ್ರಿಷಾ ಕೃಷ್ಣನ್ ಚಿರಪರಿತರಾಗಿದ್ದಾರೆ.

Be the first to comment