Release: ನಾಳೆ ನಾಲ್ಕು ಕನ್ನಡ ಚಿತ್ರಗಳು ತೆರೆಗೆ

ಕನ್ನಡದಲ್ಲಿ ನಾಳೆ ನಾಲ್ಕು ಚಿತ್ರಗಳು ರಿಲೀಸ್‌ ಆಗಲಿವೆ. ಕಾಮಿಡಿ ಇಷ್ಟಪಡುವವರಿಗೆ ‘ಉಂಡೆನಾಮ’, ಸ್ಪಸೆನ್ಸ್​ ಪ್ರಿಯರಿಗಾಗಿ ‘ಶಿವಾಜಿ ಸುರತ್ಕಲ್​ 2’ ಥಿಯೇಟರ್‌ ಗೆ ಬರಲಿವೆ.

ರಮೇಶ್ ಅರವಿಂದ್ ಮುಖ್ಯ ಪಾತ್ರದಲ್ಲಿರುವ ‘ಶಿವಾಜಿ ಸುರತ್ಕಲ್ 2’ ಸಿನಿಮಾದಲ್ಲಿ ರಾಧಿಕಾ ನಾರಾಯಣ್, ಮೇಘನಾ ಗಾಂವ್ಕರ್, ಸಂಗೀತ ಶೃಂಗೇರಿ, ರಮೇಶ್ ಭಟ್, ವೀಣಾ ಸುಂದರ್, ವಿನಾಯಕ್ ಜೋಶಿ, ಶೋಭರಾಜ್ ಮುಂತಾದದವರು ನಟಿಸಿದ್ದಾರೆ.

ರೇಖಾ ಕೆ.ಎನ್. ಮತ್ತು ಅನೂಪ್ ಗೌಡ ಅವರು ಸಿನಿಮಾವನ್ನು ನಿರ್ಮಿಸಿದ್ದು, ಆಕಾಶ್ ಶ್ರೀವತ್ಸ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.
ಗುರುಪ್ರಸಾದ್ ಮತ್ತು ಮಧು ಅಂಬಟ್ ಅವರ ಛಾಯಾಗ್ರಹಣ ಹಾಗೂ ಜೂಡಾ ಸ್ಯಾಂಡಿ ಸಂಗೀತ ಚಿತ್ರಕ್ಕಿದೆ. ನಿರ್ದೇಶಕ ಆಕಾಶ್ ಶ್ರೀವತ್ಸ ಅವರೇ ಸಂಕಲನ ಮಾಡಿರುವುದು ವಿಶೇಷ ಆಗಿದೆ.

ಕೋಮಲ್ ಕುಮಾರ್ ಹೀರೋ ಆಗಿ ನಟಿಸಿರುವ ‘ಉಂಡೆನಾಮ’ ಚಿತ್ರ ಏ.14ರಂದು ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ. ಟಿ.ಆರ್. ಚಂದ್ರಶೇಖರ್ ಅರ್ಪಿಸುವ ಈ ಚಿತ್ರವನ್ನು ಎನ್.ಕೆ. ಸ್ಟುಡಿಯೋಸ್ ಮೂಲಕ ನಂದಕಿಶೋರ್ ಸಿ. ನಿರ್ಮಿಸಿದ್ದಾರೆ.

ಚಿತ್ರವನ್ನು ಕೆ.ಎಲ್. ರಾಜಶೇಖರ್ ನಿರ್ದೇಶನ ಮಾಡಿದ್ದಾರೆ. ಇಲ್ಲಿ ಧನ್ಯಾ ಬಾಲಕೃಷ್ಣ, ಹರೀಶ್ ರಾಜ್, ತಬಲ ನಾಣಿ, ಕೆಜಿಎಫ್ ಸಂಪತ್, ತನಿಷಾ, ವೈಷ್ಣವಿ, ಅಪೂರ್ವಾ ಮುಂತಾದವರು ನಟಿಸಿದ್ದಾರೆ.

ನಾಳೆ ‘ಮಾರಿಗುಡ್ಡದ ಗಡ್ಡದಾರಿಗಳು’ ಸಿನಿಮಾ ಕೂಡ ರಿಲೀಸ್​ ಆಗುತ್ತಿದೆ. ಈ ಚಿತ್ರದಲ್ಲಿ ದಿನೇಶ್​ ಕುಮಾರ್​, ಪ್ರವೀಣ್​ ರಾಜ್​, ನಮೃತಾ ಮುಂತಾದವರು ನಟಿಸಿದ್ದಾರೆ. ರಾಜೀವ್ ಚಂದ್ರಕಾಂತ್ ಈ ಸಿನಿಮಾದೊಂದಿಗೆ ನಿರ್ದೇಶಕರಾಗಿದ್ದಾರೆ ಬಡ್ತಿ ಪಡೆಯುತ್ತಿದ್ದಾರೆ. ಅವರು ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನು ಬರೆದಿದ್ದಾರೆ.

ಇದು ದರೋಡೆಗೆ ಸಂಬಂಧಿಸಿದ ಕಾಲ್ಪನಿಕ ವಿಷಯವಾಗಿದೆ. ಇದಕ್ಕೆ ಸಮಾನಾಂತರವಾದ ಪ್ರೇಮಕಥೆಯೂ ಇದೆ’ ಎಂದು ರಾಜೀವ್ ಚಂದ್ರಕಾಂತ್ ಹೇಳಿದ್ದಾರೆ.

ಅಂತೆಯೇ ವಿಶಾಲ್​ ಅಜಯ್​ ನಿರ್ದೇಶನದ ‘ಸುರಾರಿ’ ಸಿನಿಮಾ ಏಪ್ರಿಲ್​ 14ರಂದು ತೆರೆಗೆ ಬರುತ್ತಿದೆ.


Be the first to comment

Leave a Reply

Your email address will not be published. Required fields are marked *

Translate »
error: Content is protected !!