ಶೀಘ್ರವೇ ‘ ಮತ್ತೆ ಮನ್ವಂತರ ‘ ಧಾರಾವಾಹಿ ಪ್ರಸಾರ

ಕಿರುತೆರೆಯ ಜನಪ್ರಿಯ ನಿರ್ದೇಶಕ ಟಿ ಎನ್ ಸೀತಾರಾಂ ಅವರು ನಿರ್ದೇಶಿಸಲಿರುವ ಧಾರಾವಾಹಿ ‘ಮತ್ತೆ ಮನ್ವಂತರ’ ಕಲರ್ಸ್ ಚಾನೆಲ್ ನಲ್ಲಿ ಶೀಘ್ರವೇ ಪ್ರಸಾರವಾಗಲಿದ್ದು ಧಾರಾವಾಹಿಯ ಮುಹೂರ್ತ ಇಂದು ನಡೆಯಲಿದೆ.

ಟಿ ಎನ್ ಸೀತಾರಾಂ ಅವರು ನಿರ್ದೇಶಿಸಲಿರುವ ಭೂಮಿಕಾದ ಈ ಧಾರಾವಾಹಿ ವರ್ಷಗಳ ಹಿಂದೆ ಪ್ರಸಾರವಾದ ಮನ್ವಂತರ ಧಾರವಾಹಿಯ ಮುಂದಿನ ಭಾಗದಂತೆ ಇರಲಿದೆ.

ಈ ಧಾರಾವಾಹಿಯ ಮುಖ್ಯ ಪಾತ್ರದಲ್ಲಿ ಮಾಳವಿಕ ಅವಿನಾಶ್, ನಿರಂಜನ್ ದೇಶಪಾಂಡೆ, ಅಜಿತ್ ಹಂದೆ, ಮೇಧ ವಿದ್ಯಾಭೂಷಣ್ (ಹೊಸ ಪರಿಚಯ), ಮೇಘ ನಾಡಿಗೇರ್, ಸುಂದರ್, ಚಂದನ್ ಶಂಕರ್, ಪ್ರಶಾಂತ್ ಶೆಟ್ಟಿ (ಹೊಸ ಪರಿಚಯ) ಮುಂತಾದವರು ಇದ್ದಾರೆ. ಧಾರಾವಾಹಿಯ ಶೀರ್ಷಿಕೆ ಗೀತೆಯನ್ನು ಕವಿ ಎಚ್ ಎಸ್ ವೆಂಕಟೇಶ್ ಮೂರ್ತಿ ಅವರು ರಚಿಸಿದ್ದಾರೆ. ರಾಗ ಸಂಯೋಜನೆಯನ್ನು ಪ್ರವೀಣ್ ಡಿ ರಾವ್ ಅವರು ಮಾಡಲಿದ್ದಾರೆ. ಶೀರ್ಷಿಕೆ ಗೀತೆಯ ಗಾಯನವನ್ನು ಗಾಯಕ ವಿಜಯಪ್ರಕಾಶ್ ಅವರು ಹಾಡಲಿದ್ದಾರೆ. ಧಾರವಾಹಿಯ ಮುಖ್ಯ ಕಥೆಯನ್ನು ಕಲರ್ಸ್ ಚಾನೆಲ್ ಮುಖ್ಯಸ್ಥರಾದ ಪರಮೇಶ್ವರ್ ಗುಂಡ್ಕಲ್, ಟಿ ಎನ್ ಸೀತಾರಾಂ ಅವರು ರಚಿಸಿದ್ದಾರೆ. ಸಂಭಾಷಣೆಯನ್ನು ಟಿ ಎನ್ ಸೀತಾರಾಂ, ಅಶ್ವಿನಿ ಅನೀಶ್ , ಸೌಮ್ಯ ಸಾಲೀಮಠ್ ಅವರು ಬರೆಯಲಿದ್ದಾರೆ ಎಂದು ನಿರ್ದೇಶಕ ಟಿ ಎನ್ ಸೀತಾರಾಂ ತಿಳಿಸಿದ್ದಾರೆ.
ತಮ್ಮದೇ ಆದ ಪ್ರೇಕ್ಷಕ ಬಳಗವನ್ನು ಹೊಂದಿರುವ ಟಿ ಎನ್ ಸೀತಾರಾಂ ಅವರ ಧಾರಾವಾಹಿ ಕಿರುತೆರೆ ವೀಕ್ಷಕರಿಗೆ ರಸದೌತಣ ನೀಡುವ ನಿರೀಕ್ಷೆ ಹೊಂದಲಾಗಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!