ಹರೀಶ್ ಎಂ ಡಿ ಹಳ್ಳಿ ನಿರ್ದೇಶಿಸಿರುವ ತನುಜಾ ಚಿತ್ರದ ಟ್ರೈಲರ್ ಬಿಡುಗಡೆಗೊಂಡಿದೆ.
ಶಿವಮೊಗ್ಗದ ಕುಗ್ರಾಮದಿಂದ ಬೆಂಗಳೂರಿಗೆ ಬಂದು ಕಷ್ಟದಲ್ಲಿ ನೀಟ್ ಪರೀಕ್ಷೆ ಬರೆದ ಸಾಧಕಿ ಕುರಿತಾದ ‘ತನುಜಾ’ ಚಿತ್ರದ ಟ್ರೇಲರ್ ಅನ್ನು ಆರೋಗ್ಯ ಸಚಿವ ಕೆ. ಸುಧಾಕರ್ ಬಿಡುಗಡೆ ಮಾಡಿದರು.
ಈ ವೇಳೆ ಮಾತನಾಡಿದ ಸಚಿವ ಸುಧಾಕರ್, ‘ತನುಜಾ ಪರೀಕ್ಷೆ ಬರೆಯಲು ಸಹಾಯ ಮಾಡುವಂತೆ ದೆಹಲಿಯ ನೀಟ್ ಅಧಿಕಾರಿಗಳ ಜೊತೆ ಮಾತನಾಡಿದ್ದೆ. ಈ ವಿಷಯದಲ್ಲಿ ಆಗಿನ ಮುಖ್ಯಮಂತ್ರಿಗಳಾಗಿದ್ದ ಯಡಿಯೂರಪ್ಪ, ಪತ್ರಕರ್ತ ವಿಶ್ವೇಶ್ವರ ಭಟ್ ಸಹಕಾರ ಅಪಾರ. ಇದರಲ್ಲಿ ನಾನು ಸಚಿವನಾಗಿಯೇ ಅಭಿನಯಿಸಿದ್ದೇನೆ. ನಿರ್ದೇಶಕ ಹರೀಶ್ ಡಾಕ್ಟರ್ ಆಗಿದ್ದ ನನ್ನನ್ನು ನಟ ಮಾಡಿದರು. ನೀಟ್ ಪರೀಕ್ಷೆ ಬರೆದ ತನುಜಾ ವೈದ್ಯೆ ಆಗುವ ಹಾದಿಯಲ್ಲಿದ್ದಾಳೆ’ ಎಂದರು.
ನಿರ್ಮಾಪಕರಾದ ಚಂದ್ರಶೇಖರ್ ಗೌಡ, ಮನೋಜ್ ಬಿ.ಜಿ ಉಪಸ್ಥಿತರಿದ್ದರು. ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ವೈದ್ಯಕೀಯ ಶಿಕ್ಷಣ ಸಚಿವ ಕೆ ಸುಧಾಕರ್, ಪತ್ರಕರ್ತ ವಿಶ್ವೇಶ್ವರ ಭಟ್, ಸಪ್ತಾ ಕಾವೂರು ಮುಖ್ಯ ಪಾತ್ರದಲ್ಲಿ ನಟಿಸಿರುವ ‘ತನುಜಾ’ ಚಿತ್ರದ ಮೋಶನ್ ಪೋಸ್ಟರ್ ಕೆಲವು ದಿನಗಳ ಹಿಂದೆ ಬಿಡುಗಡೆ ಮಾಡಲಾಗಿತ್ತು.
ಪ್ರದ್ಯೋತನ ಸಂಗೀತ, ಉಮೇಶ್ ಆರ್.ಬಿ ಸಂಕಲನ, ರವೀಂದ್ರನಾಥ್. ಟಿ ಛಾಯಾಗ್ರಹಣ ಚಿತ್ರಕ್ಕಿದೆ.
___

Be the first to comment