ವಿಜಯ ರಾಘವೇಂದ್ರ ಅವರು ನಾಯಕ ನಟನಾಗಿ ನಟಿಸಿರುವ ಸ್ವಪ್ನ ಮಂಟಪ ಚಿತ್ರ ಜುಲೈ 25ರಂದು ಬಿಡುಗಡೆಯಾಗಲಿದೆ.
ಖ್ಯಾತ ಬರಹಗಾರ ಬರಗೂರು ರಾಮಚಂದ್ರಪ್ಪ ಅವರು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಮಲೆ ಮಹದೇಶ್ವರ ಎಂಟರ್ಪ್ರೈಸಸ್ ಅಡಿಯಲ್ಲಿ ಎ ಎಂ ಬಾಬು ಚಿತ್ರವನ್ನು ನಿರ್ಮಿಸಿದ್ದಾರೆ. ಮಾರ್ಸ್ ಸುರೇಶ್ ವಿತರಣೆ ಮಾಡಿದ್ದಾರೆ.
ವಿಜಯ ರಾಘವೇಂದ್ರ ಹಾಗೂ ರಂಜನಿ ರಾಘವನ್ ಅವರು ಚಿತ್ರದಲ್ಲಿ ದ್ವಿಪಾತ್ರಗಳಲ್ಲಿ ನಟಿಸಿದ್ದಾರೆ. ಸಪ್ನ ಮಂಟಪ ಚಿತ್ರವು ಸಾಂಪ್ರದಾಯಿಕ ರಚನೆಗಳ ಸಂರಕ್ಷಣೆಯ ಬಗ್ಗೆ ಗಮನಹರಿಸುತ್ತದೆ. ರಾಜರು ತಮ್ಮ ಎರಡನೇ ಪತ್ನಿಯರಿಗಾಗಿ ಸ್ವಪ್ನ ಮಂಟಪಗಳನ್ನು ನಿರ್ಮಿಸಿದರು. ಹಳ್ಳಿಯೊಂದರಲ್ಲಿ ನಿರ್ಮಿಸಲಾದ ಈ ರಚನೆಯನ್ನು ಉಳಿಸಲು ಹೇಗೆ ಜಾಗೃತಿ ಮೂಡಿಸಲಾಯಿತು ಎನ್ನುವುದನ್ನು ಈ ಚಿತ್ರ ವಿವರಿಸುತ್ತದೆ.
ವಿಜಯ ರಾಘವೇಂದ್ರ ಅವರು ಈ ಚಿತ್ರದಲ್ಲಿ ನಾಯಕನಾಗಿ ನಟಿಸುವ ಜೊತೆಗೆ ಒಂದು ಹಾಡನ್ನು ಹಾಡಿದ್ದಾರೆ. ಚಿತ್ರಕ್ಕೆ ಶಮಿತಾ ಮಲ್ನಾಡ್ ಅವರ ಸಂಗೀತ, ನಾಗರಾಜ್ ಅಡವಾನಿ ಅವರ ಛಾಯಾಗ್ರಹಣ, ಸುರೇಶ್ ಯು ಅವರ ಸಂಕಲನ ಇದೆ.
ಬರಗೂರು ರಾಮಚಂದ್ರಪ್ಪ ಅವರು ಪ್ರಾಯೋಗಿಕ ಸಿನಿಮಾಗಳನ್ನು ಬೆಂಬಲಿಸಬೇಕಿದೆ. ಟಿಕೆಟ್ ದರವನ್ನು 100 ರೂಪಾಯಿಗೆ ಸೀಮಿತಗೊಳಿಸಬೇಕು. ಕರ್ನಾಟಕದ ಪ್ರತಿ ಜಿಲ್ಲೆಯಲ್ಲಿ 150 ಆಸನಗಳ ಚಿತ್ರಮಂದಿರಗಳನ್ನು ಸ್ಥಾಪಿಸಬೇಕು ಎಂದು ಸರಕಾರವನ್ನು ಒತ್ತಾಯಿಸಿದ್ದಾರೆ.





Be the first to comment