ಸುದೀಪ್‌ ಬಿಗ್‌ ಬಾಸ್‌

ಸುದೀಪ್‌ ಬಿಗ್‌ ಬಾಸ್‌ ತೊರೆಯುತ್ತಿರುವುದಕ್ಕೆ ಕಾರಣ?

ಕಿಚ್ಚ ಸುದೀಪ್‌ ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋ ಎನಿಸಿರುವ ಬಿಗ್‌ ಬಾಸ್‌ ತೊರೆಯುತ್ತಿರುವುದಕ್ಕೆ ಕಾರಣವೇನು ಎನ್ನುವ ಚರ್ಚೆ ಆರಂಭ ಆಗಿದೆ.

ಬಿಗ್‌ ಬಾಸ್‌ 11ನೇ ಸೀಸನ್‌ ಶುರುವಾಗಿ ಎರಡು ವಾರಗಳಷ್ಟೇ ಕಳೆದಿದೆ. ಬಿಗ್‌ ಬಾಸ್‌  ಶೋ ತೊರೆಯುತ್ತಿರುವುದಕ್ಕೆ ಕಾರಣವೇನು ಎಂಬುದನ್ನು ಸುದೀಪ್‌ ಹೇಳಿಲ್ಲ. ಆದರೆ ಸುದೀಪ್‌ ಅವರಿಗೆ ಬಿಗ್‌ಬಾಸ್‌ ಶೋನಲ್ಲಿ ಅವಮಾನ ಆಗಿದೆ ಎಂಬ ಮಾತು ಕೇಳಿ ಬಂದಿದೆ.

”ಬಿಗ್‌ಬಾಸ್‌ ಕನ್ನಡ 11ಕ್ಕೆ ನೀವು ತೋರಿದ ಪ್ರೀತಿಗೆ ಧನ್ಯವಾದ. ಈ ಶೋಗೆ ಬಂದ ಟಿಆರ್‌ಪಿ ನೋಡಿದ ಮೇಲೆ ಗೊತ್ತಾಗುತ್ತದೆ, ಈ ಶೋ ಮೇಲೆ ಮತ್ತು ನನ್ನ ಮೇಲೆ ನೀವೆಷ್ಟು ಪ್ರೀತಿ ಇಟ್ಟುಕೊಂಡಿದ್ದೀರೆಂದು. ಕಳೆದ 10 ಪ್ಲಸ್‌ 1 ವರ್ಷದಿಂದ ಬಿಗ್‌ಬಾಸ್‌ ಜತೆಗೆ ನಾನೂ ಪ್ರಯಾಣಿಸುತ್ತ ಬಂದಿದ್ದೇನೆ. ಆದರೆ, ಈಗ ನಾನು ಇದರಿಂದ ಹೊರಬರಬೇಕಿದೆ. ಇದೇ ನನ್ನ ಕೊನೆಯ ಬಿಗ್‌ಬಾಸ್‌. ಈ ನನ್ನ ನಿರ್ಧಾರವನ್ನು ನನ್ನ ಕಲರ್ಸ್‌ ತಂಡ ಮತ್ತು ಇಷ್ಟು ವರ್ಷಗಳಿಂದ ಬಿಗ್‌ಬಾಸ್‌ ನೋಡುವ ಬಂದ ನೀವೆಲ್ಲರೂ ಗೌರವಿಸುತ್ತೀರಿ ಎಂದುಕೊಂಡಿದ್ದೇನೆ. ಈ ಸೀಸನ್ ಅನ್ನು ಅತ್ಯುತ್ತಮವಾಗಿ ಮಾಡೋಣ. ನಾನು ಕೂಡ ನಿಮ್ಮೆಲ್ಲರನ್ನು ರಂಜಿಸುತ್ತೇನೆ” ಎಂದು ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದಾರೆ.

ಸುದೀಪ್‌ ಟ್ವೀಟ್ ಹೊರಬೀಳುತ್ತಿದ್ದಂತೆ, ಬಿಗ್‌ ಬಾಸ್‌ ಫಾಲೋ ಮಾಡುವ ಸಾಕಷ್ಟು ಮಂದಿ ಬೇಸರಗೊಂಡಿದ್ದಾರೆ.  ಬಿಗ್‌ ಬಾಸ್‌ ಕನ್ನಡ ಸೀಸನ್‌ 9ರ ಸ್ಪರ್ಧಿ ರೂಪೇಶ್‌ ರಾಜಣ್ಣ ಇದೀಗ, ‌ಕಿಚ್ಚ ಸುದೀಪ್‌ ಬಿಗ್‌ ಬಾಸ್‌ ನಿರೂಪಣೆಯಿಂದ ಹೊರನಡೆಯಲು ತೀರ್ಮಾನಿಸಿದ್ದರ ಹಿಂದೆ ಬೇರೆಯದ್ದೇ ವಿಷಯ ಇದೆ ಎಂದಿದ್ದಾರೆ.

“ಬಿಗ್ ಬಾಸ್ ಎಂಬ ಕಾರ್ಯಕ್ರಮ ನಡೆಸುವ ಕೆಲವು ಕನ್ನಡ ದ್ರೋಹಿಗಳ ಕಿತ್ತೋದ್ ಆಟಕ್ಕೆ ಕಿಚ್ಚ ಸುದೀಪ್, ಬಿಗ್‌ ಬಾಸ್ ನಿರೂಪಣೆಯನ್ನು ನಿಲ್ಲಿಸಬೇಕಾಗಿದೆ. ಅವರಿಗೆ ಮಾಡಿದ ಅವಮಾನ ಸಹಿಸೋಲ್ಲ. ಎ ಮುಂಬೈ ಮರಾಠಿ ಹಾಗೂ ತಮಿಳ್ ನಿರ್ದೇಶಕ ಮೊದಲು ಬಿಗ್ ಬಾಸ್ ಬಿಡಿ ಇಲ್ಲ ಬಿಗ್ ಬಾಸ್ ನಿಲ್ಲಬೇಕು. ಅಸಲಿ ವಿಷಯ ನಾಳೆ ಮಾತಾಡ್ತೀನಿ.” ಎಂದು ರೂಪೇಶ್‌ ರಾಜಣ್ಣ ಪೋಸ್ಟ್‌ ಹಂಚಿಕೊಂಡಿದ್ದಾರೆ.

ಬಿಗ್ ಬಾಸ್​ 10 ಸೀಸನ್​ಗಳನ್ನು ಯಶಸ್ವಿಯಾಗಿ ನಿರೂಪಣೆ ಮಾಡಿದ್ದ ಕಿಚ್ಚ ಸುದೀಪ್  11ನೇ ಸೀಸನ್ ನಿರೂಪಣೆಯಿಂದ  ಹೊರ ಬರುತ್ತಾರೆ ಎಂದು ಹೇಳಲಾಗಿತ್ತು. ಆದರೆ ವಾಹಿನಿಯವರು ಮನ ವೊಲಿಸಿ ಮತ್ತೆ ನಿರೂಪಣೆ ಮಾಡುವಂತೆ ಮಾಡಿದ್ದರು.  ಇದೀಗ ಸುದೀಪ್ ನಿರೂಪಣೆಯಿಂದ ಹೊರ ಬರಲು ನಿರ್ಧಾರ ಮಾಡಿದ್ದಾರೆ. ಸುದೀಪ್ ಈ ಘೋಷಣೆ ಮಾಡುವುದರ ಹಿಂದೆ ಯಾವುದೋ ಒಂದು ಬಲವಾದ ಕಾರಣ ಇದೆ ಎಂದು ಹೇಳಲಾಗುತ್ತಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!