ಸುದೀಪ್ ಮುಂದಿನ ಚಿತ್ರ ಘೋಷಣೆ

ಕಿಚ್ಚ ಸುದೀಪ್‌ ಅವರ ಮುಂದಿನ ಚಿತ್ರ ಘೋಷಣೆ ಆಗಿದ್ದು, ಚಿತ್ರವನ್ನು ತಮಿಳು ನಿರ್ದೇಶಕ ವೆಂಕಟ್‌ ಪ್ರಭು ನಿರ್ದೇಶನ ಮಾಡಲಿದ್ದಾರೆ.

ನಟ ಸುದೀಪ್‌ ಅವರಿಗೆ ಸಿನಿಮಾದ ಕಥೆ ಓಕೆ ಆಗಿದೆ. ಮುಂದಿನ ಚಿತ್ರದ ಬಗ್ಗೆ ಸಂದರ್ಶನ ಒಂದರಲ್ಲಿ ಅಧಿಕೃತವಾಗಿ ಕಿಚ್ಚ ಸುದೀಪ್‌ ಅವರೇ ವಿಷಯ ಪ್ರಕಟ ಮಾಡಿದ್ದಾರೆ.

ನಿರ್ದೇಶಕ ವೆಂಕಟ್‌ ಪ್ರಭು ಅವರು ಕೆಲ ತಿಂಗಳ ಹಿಂದೆ ಸುದೀಪ್‌ ಮನೆಗೆ ಭೇಟಿ ನೀಡಿದ್ದರು. ಆಗ ಸುದೀಪ್‌ ಮತ್ತು ವೆಂಕಟ್‌ ಅವರ ನಡುವೆ ಸಿನಿಮಾದ ಮಾತುಕತೆ ನಡೆದಿತ್ತು. ಈಗ ಸಿನಿಮಾ ಮಾಡುವ ವಿಚಾರ ಬಹಿರಂಗ ಆಗಿದೆ.

ವೆಂಕಟ್‌ ಪ್ರಭು ಅವರು ತಮಿಳಿನಲ್ಲಿ ಹಲವು ಸಿನಿಮಾಗಳನ್ನು ಮಾಡಿದ್ದಾರೆ. ಅವರು 2007 ರಿಂದ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೆ. ‘ಮಂಗಾತ’, ‘ಮಾನಾಡು’ ಅವರ ಹಿಟ್ ಚಿತ್ರ ಆಗಿವೆ.2001ರಲ್ಲಿ ತೆರೆಕಂಡ, ‘ಲೈವ್‌ ಟೆಲಿಕಾಸ್ಟ್’ ವೆಬ್‌ ಸರಣಿಯನ್ನು ವೆಂಕಟ್‌ ಪ್ರಭು ಬರೆದು, ನಿರ್ದೇಶನ ಮಾಡಿದ್ದರು. ಈ ವೆಬ್‌ ಸರಣಿಯಲ್ಲಿ ನಟಿ ಕಾಜಲ್ ಅಗರ್‌ವಾಲ್ ಪ್ರಮುಖ ಪಾತ್ರ ಮಾಡಿದ್ದರು.

ವೆಂಕಟೇಶ್ ಅವರ ನಿರ್ದೇಶನದ ಸಿನಿಮಾ ‘ಮಾನಾಡು’ ಕೊನೆಯದಾಗಿ ತೆರೆಕಂಡ ಚಿತ್ರ ಆಗಿದೆ. ವೆಂಕಟ್‌ ಪ್ರಭು ಬರವಣಿಗೆ ಮತ್ತು ನಿರ್ದೇಶನದ ಮೂಲಕ ಸಾಕಷ್ಟು ಭರವಸೆ ಮೂಡಿಸಿದ್ದಾರೆ.

ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಚಿತ್ರದ ರಿಲೀಸ್ ದಿನಾಂಕ ಬಹಿರಂಗ ಆಗಿದ್ದು, ಫೆಬ್ರವರಿ 24ಕ್ಕೆ ಚಿತ್ರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಸುದೀಪ್‌ ಈ ಚಿತ್ರದಲ್ಲಿ ವಿಭಿನ್ನ ಪಾತ್ರ ಮತ್ತು ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಈ ಚಿತ್ರದಲ್ಲಿ ನಟಿಸಿದ್ದಾರೆ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!