ಎಸ್‌ಪಿಬಿ ಅಂತಿಮ ಸಂಸ್ಕಾರ ಚೆನ್ನೈನ ತೋಟದಲ್ಲೇ

ಗಾನ ಗಾರುಡಿಗ ಎಸ್‌ ಪಿ ಬಾಲಸುಬ್ರಮಣ್ಯಂ ಇಂದು ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಕೊರೋನಾ ಸೋಂಕಿನಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ಬಾಲಸುಬ್ರಹ್ಮಣ್ಯಂ ಅವರಿಗೆ ಇತ್ತೀಚೆಗಷ್ಟೆ ಕೊರೋನಾ ಪರೀಕ್ಷೆ ನಡೆಸಿದಾಗ ನೆಗೆಟಿವ್​ ಬಂದಿತ್ತು. ನಂತರ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡಿತ್ತಾದರೂ, ನಿನ್ನೆ ಸಂಜೆಯಿಂದ ಅವರ ಆರೋಗ್ಯದ ಸ್ಥಿತಿ ಗಂಭೀರವಾಗಿತ್ತು. ಆಕಸ್ಮಿಕವಾಗಿ ಗಾಯಕನಾದ ಈ ದಿಗ್ಗಜನ ಅಗಲಿಕೆ ನಿಜಕ್ಕೂ ಅಭಿಮಾನಿಗಳನ್ನು ಕಂಗಾಲು ಮಾಡಿದೆ. ಈಗಷ್ಟೆ ಎಂಜಿಎಂ ಆಸ್ಪತ್ರೆಯಿಂದ ಗಾಯಕನ ಪಾರ್ಥಿವ ಶರೀರವನ್ನು ಮನೆಗೆ ತೆಗೆದುಕೊಂಡು ಹೋಗಲಾಗುತ್ತಿದೆ. ಎಸ್​ಪಿಬಿ ಅವರ ಅಂತ್ಯಕ್ರಿಯೆಯನ್ನು ಚೆನ್ನೈನಲ್ಲಿರುವ ಅವರ ತೋಟದಲ್ಲೇ ಮಾಡಲು ನಿರ್ಧರಿಸಲಾಗಿದೆಯಂತೆ. ಇನ್ನು ಅಭಿಮಾನಿಗಳಿಗೆ ಅಂತಿಮ ದರ್ಶನದ ವ್ಯವಸ್ಥೆ ಕುರಿತಾಗಿ ಇನ್ನೂ ಯಾವುದೇ ಅಧಿಕೃತ ಮಾಹಿತಿ ತಿಳಿದು ಬಂದಿಲ್ಲ.

ಎಸ್​ಪಿಬಿ ಅವರ ಪಾರ್ಥಿವ ಶರೀರವನ್ನು ಈಗ ಮನೆಗೆ ತಂದು ಅವರ ಸಂಪ್ರದಾಯದ ಪ್ರಕಾರ ವಿಧಿ ವಿಧಾನಗಳನ್ನು ನಡೆಸಲಿದ್ದಾರೆ. ಅತ್ಯಂತ ಆಪ್ತ ಬಳಗಕ್ಕೆ ಅಂತಿಮ ದರ್ಶನ ಮಾಡುವ ವ್ಯವಸ್ಥೆಗಾಗಿ ಅನುಮತಿ ಪಡೆಯಲು ಗಾಯಕನ ಕುಟುಂಬ ಮುಂದಾಗಿದೆ ಎಂದು ಹೇಳಲಾಗುತ್ತಿದೆ. ಸಂಜೆ 6 ಗಂಟೆಯೊಳಗೆ ಅಂತಿಮ ದರ್ಶನಕ್ಕೆ ಅನುಮತಿ ಸಿಗುತ್ತದೆಯೋ ಇಲ್ಲವೋ ಎಂದು ತಿಳಿಯಲಿದೆಯಂತೆ.

ಒಂದು ವೇಳೆ ಆಪ್ತ ವಲಯಕ್ಕೆ ಅಂತಿಮ ದರ್ಶನಕ್ಕೆ ಅನುಮತಿ ಸಿಕ್ಕರೆ, ಅಂತ್ಯಕ್ರಿಯೆ ನಾಳೆ ಅವರ ರೆಡ್​ ಹಿಲ್ಸ್​ ತೋಟದಲ್ಲಿ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಅಭಿಮಾನಿಗಳಿಗೂ ಅಂತಿಮ ದರ್ಶನದ ಅನುಮತಿ ಸಿಕ್ಕಲ್ಲಿ, ಮನೆಯ ಬಳಿ ಇರುವ ಸತ್ಯಂ ಥಿಯೇಟರ್​ನಲ್ಲಿ ವ್ಯವಸ್ಥೆ ಮಾಡಲು ಕುಟುಂಬಸ್ಥರು ನಿರ್ಧರಿಸಿದ್ದಾರಂತೆ. ಆದರೆ ಇದೆಲ್ಲ ಸರ್ಕಾರ ನೀಡುವ ಅನುಮತಿಯ ಮೇಲೆ ನಿರ್ಧಾರವಾಗಲಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!