ವೀರಾಜ್

ಸಿಂಪಲ್ ಸುನಿ ಚಿತ್ರದ ನಾಯಕ ವೀರಾಜ್

ವೀರಾಜ್

ಸಿಂಪಲ್ ಸುನಿ ‘ದೇವರು ರುಜು ಮಾಡಿದನು’ ಹೊಸ ಚಿತ್ರಕ್ಕೆ ಕೈ ಹಾಕಿದ್ದು, ಯುವ ಪ್ರತಿಭೆ ವೀರಾಜ್ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಲು ಮುಂದಾಗಿದ್ದಾರೆ.

ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದೆ. ರಕ್ತ ಸಿಕ್ತ ಆದ ನಾಯಕ ಗಿಟಾರ್ ಹಿಡಿದುಕೊಂಡಿರುವುದು ಗಮನ ಸೆಳೆದಿದೆ. ಬ್ಲಡ್ ಶೆಡ್ ಇಲ್ಲದೆ ಚಿತ್ರ ಮಾಡುತ್ತಿದ್ದ ಸಿಂಪಲ್ ಸುನಿ ಈ ಬಾರಿ ರಕ್ತ ಸಿಕ್ತ ಫಸ್ಟ್ ಲುಕ್ ರಿಲೀಸ್ ಮಾಡಿ ಆಶ್ಚರ್ಯ ಮೂಡಿಸಿದ್ದಾರೆ.

ಚಿತ್ರದ ನಿರ್ದೇಶಕ ಸಿಂಪಲ್ ಸುನಿ, ಇದೊಂದು ನವಿರಾದ ಪ್ರೇಮಕಥೆ. ಅಕ್ಟೋಬರ್ 20ರಂದು ಚಿತ್ರ ಸೆಟ್ಟೇರಲಿದೆ. ಅಂದು ಟೀಸರ್ ಜೊತೆಗೆ ಚಿತ್ರೀಕರಣ ಆರಂಭವಾಗಲಿದೆ ಎಂದಿದ್ದಾರೆ.

ಇದು ರೌಡಿಸಂ ಕತೆಯನ್ನು ಒಳಗೊಂಡಿದೆ. ಪ್ರೀತಿಯಲ್ಲಿ ಬಿದ್ದ ನಾಯಕ ರೌಡಿಸಂ ನಿಂದ ಹೇಗೆ ಹೊರಗೆ ಬರುತ್ತಾನೆ ಎನ್ನುವುದು ಚಿತ್ರದ ಕಥೆಯಾಗಿದೆ. ಚಿತ್ರಕ್ಕೆ ಮ್ಯೂಸಿಕಲ್ ಜರ್ನಿಯೂ ಇದೆ ಎಂದಿದ್ದಾರೆ.

ವೀರಾಜ್ ಅವರು ರಂಗಭೂಮಿಯ ಭೂಮಿಯಲ್ಲಿ ಸಕ್ರಿಯ ರಾಗಿದ್ದಾರೆ. ಅವರಿಗೆ ಕಥೆ ಹೇಳಿ ಮಾಡಿಸಿದಂತಿದೆ. ಅಗತ್ಯ ಸಿದ್ಧತೆ ಮಾಡಿಕೊಂಡು ಚಿತ್ರೀಕರಣಕ್ಕೆ ಅವರು ಸಿದ್ಧರಾಗಿದ್ದಾರೆ ಎಂದು ಸಿಂಪಲ್ ಸುನಿ ಹೇಳಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!