ಮಂಜು ನಿರ್ಮಾಣದ ಚಿತ್ರಕ್ಕೆ ಸ್ಮೈಲ್ ಶ್ರೀನು ಡೈರೆಕ್ಟರ್

ನಿರ್ಮಾಪಕ ಕೆ ಮಂಜು ಅವರು ತಮ್ಮ 44 ನೇ ಚಿತ್ರವನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಮಂಜು ಹೊಸ ಸಿನಿಮಾಗಾಗಿ ಯುವ ನಿರ್ದೇಶಕ ನಿರ್ದೇಶಕ ಸ್ಮೈಲ್ ಶ್ರೀನು ಜೊತೆ ಕೈಜೋಡಿಸಿದ್ದಾರೆ.

‘ಸ್ಮೈಲ್ ಶ್ರೀನು, ನಾನು ಸೇರಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳುವಂಥ ಒಂದು ಸಿನಿಮಾ ಮಾಡಬೇಕೆಂದು ಬಹಳ ದಿನಗಳಿಂದ ಅಂದುಕೊಂಡಿದ್ದೆವು. ಈ ಬಗ್ಗೆ ಸಾಕಷ್ಟು ಚರ್ಚಿಸಿದ್ದೆವು. ಅದಕ್ಕೀಗ ಕಾಲ ಕೂಡಿ ಬಂದಿದೆ. ಇದೊಂದು ನ್ಯಾಷನಲ್ ಸಬ್ಜೆಕ್ಟ್ ಆಗಿದ್ದು, ಸಾಮಾಜಿಕ ಕಳಕಳಿ ಇರುವ  ದೊಡ್ಡ ವ್ಯಕ್ತಿಯೊಬ್ಬರ ಬದುಕಿನ ನೈಜಘಟನೆ ಆಧಾರಿತ ಚಿತ್ರ. ಸದ್ಯ ಚಿತ್ರದ ಸ್ಕ್ರಿಪ್ಟ್ ವರ್ಕ್ ನಡೆಯುತ್ತಿದೆ. ಇದು ಯಾರ ಕುರಿತಾದ ಚಿತ್ರ ಮತ್ತು ಕಲಾವಿದರುಗಳು ಯಾರೆಂದು ಶೀಘ್ರದಲ್ಲಿ ತಿಳಿಸುತ್ತೇವೆ’  ಎಂದಿದ್ದಾರೆ  ‘ರಾಜಾಹುಲಿ’, ‘ರಾಮ ಶಾಮ ಭಾಮ’ ಸೇರಿದಂತೆ ಸಾಕಷ್ಟು ಸಿನಿಮಾಗಳನ್ನು ನಿರ್ಮಿಸಿರುವ ನಿರ್ಮಾಪಕ ಕೆ.ಮಂಜು.

“ಸ್ಮೈಲ್ ಶ್ರೀನು ಜೊತೆ ಕೆಲಸ ಮಾಡುವುದು ಒಂದು ರೋಚಕ ಅವಕಾಶ. ನನ್ನ ವಿತರಣಾ ಅನುಭವದೊಂದಿಗೆ ಅವರ ಸೃಜನಶೀಲ ದೃಷ್ಟಿಕೋನವು ರಾಷ್ಟ್ರೀಯ ಮನ್ನಣೆಯನ್ನು ಸಾಧಿಸಲು ನಮಗೆ ಸಹಾಯ ಮಾಡುತ್ತದೆ” ಎಂದು ತಿಳಿಸಿದ್ದಾರೆ.

‘ನಾನು ಈವರೆಗೆ ಗುಣಮಟ್ಟದ ಸಿನಿಮಾಗಳನ್ನೇ ನಿರ್ದೇಶನ ಹಾಗೂ ನಿರ್ಮಾಣ ಮಾಡುತ್ತಾ ಬಂದಿರುವೆ. ನನ್ನ ಚಿತ್ರಕ್ಕೆ ಅನುಭವಿ ನಿರ್ಮಾಪಕರು ಹಾಗೂ ಖ್ಯಾತ ವಿತರಕ  ಆದ ಕೆ. ಮಂಜು ಅವರು ಜೊತೆಯಾಗಿದ್ದಾರೆ. ಉಳಿದ ಮಾಹಿತಿಗಳನ್ನು ಶೀಘ್ರದಲ್ಲಿ ಹಂಚಿಕೊಳ್ಳುತ್ತೇವೆ’ ಎಂದು ಸೀನು ತಿಳಿಸಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!