ಯೋಗರಾಜ್ ಭಟ್ ಅವರ ಮುಂದಿನ ನಿರ್ದೇಶನದ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಮತ್ತು ಪ್ರಭುದೇವ ಒಟ್ಟಿಗೆ ನಾಯಕರಾಗಿ ಕಾಣಿಸಿಕೊಳ್ಳಲಿದ್ದಾರೆ.
ಈ ಸಿನಿಮಾವನ್ನು ರಾಕ್ ಲೈನ್ ವೆಂಕಟೇಶ್ ನಿರ್ಮಾಣ ಮಾಡಲಿದ್ದಾರೆ. ಇಬ್ಬರು ಸ್ಟಾರ್ ಗಳು ಚಿತ್ರದಲ್ಲಿ ಒಟ್ಟಿಗೆ ನಟಿಸುತ್ತಿರುವುದು ಸಾಕಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿದೆ.
ಸದ್ಯ ಯೋಗರಾಜ್ ಭಟ್ ಗಾಳಿಪಟ 2 ಮತ್ತು ಗರಡಿ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದ ಬಳಿಕ ಅವರು ಹೊಸ ಚಿತ್ರದಲ್ಲಿ ತೊಡಗಿಸಿಕೊಳ್ಳುವ ನಿರೀಕ್ಷೆ ಹೊಂದಲಾಗಿದೆ.
ಶಿವರಾಜ್ ಕುಮಾರ್-ಪ್ರಭುದೇವ ಚಿತ್ರಕ್ಕೆ ತಾತ್ಕಾಲಿಕವಾಗಿ ಕುಲದಲ್ಲಿ ಕೀಳ್ಯಾವುದೋ ಎಂದು ಹೆಸರಿಸಲಾಗಿದೆ. ಇದು 1960 ಮತ್ತು 1970 ರ ಅವಧಿಯ ನಾಟಕ ಆಧಾರಿತ ಚಿತ್ರವಾಗಿದೆ. ಇದು ರಾಕ್ಲೈನ್ ಎಂಟರ್ಟೈನ್ಮೆಂಟ್ನ ದೊಡ್ಡ-ಬಜೆಟ್ ಚಲನಚಿತ್ರ ಎಂದು ಹೇಳಲಾಗಿದೆ.
ಗೋಲ್ಡನ್ ಸ್ಟಾರ್’ ಗಣೇಶ್-ಯೋಗರಾಜ್ ಭಟ್ ಕಾಂಬಿನೇಷನ್ನ ‘ಗಾಳಿಪಟ 2’ ಚಿತ್ರದ ಎಕ್ಸಾಮ್ ಸಾಂಗ್ ಟೀಸರ್ ರಿಲೀಸ್ ಆಗಿದ್ದು ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಚಿತ್ರ ರಿಲೀಸ್ ಗೆ ಎಲ್ಲ ರೀತಿಯ ಸಿದ್ಧತೆ ನಡೆಸಲಾಗಿದೆ.
ಚಿತ್ರದಲ್ಲಿ ಗಣೇಶ್ ಅವರೊಂದಿಗೆ ದಿಗಂತ್, ಪವನ್ ಕುಮಾರ್ ಜೊತೆಯಾಗಿದ್ದಾರೆ. ಹಿರಿಯ ನಟ ಅನಂತ್ ನಾಗ್ ಅವರು ಕನ್ನಡ ಮೇಷ್ಟ್ರ ಪಾತ್ರದಲ್ಲಿ ನಟಿಸಿದ್ದಾರೆ.
____





Be the first to comment