‘ಉತ್ತರಕಾಂಡ’ ಸೇರಿಕೊಂಡ ಶಿವಣ್ಣ

‘ಉತ್ತರಕಾಂಡ’ ಸಿನಿಮಾದ ಚಿತ್ರೀಕರಣ ಆರಂಭವಾಗಿದ್ದು,  ಶಿವರಾಜ್‌ಕುಮಾರ್‌  ಚಿತ್ರತಂಡ ಸೇರಿಕೊಂಡಿದ್ದಾರೆ.

ರೋಹಿತ್‌ ಪದಕಿ ಆಯಕ್ಷನ್‌ ಕಟ್‌ ಹೇಳುತ್ತಿರುವ ‘ಉತ್ತರಕಾಂಡ’ ಸಿನಿಮಾದ ಮೊದಲ ಹಂತದಲ್ಲಿ 15 ದಿನಗಳ ಚಿತ್ರೀಕರಣ ವಿಜಯಪುರದಲ್ಲಿ ಮುಕ್ತಾಯಗೊಂಡಿದೆ. ಬೆಳಗಾವಿಯಲ್ಲಿ ಮುಂದಿನ ಹಂತದ ಚಿತ್ರೀಕರಣ ನಡೆಯಲಿದೆ ಎಂದು ಚಿತ್ರತಂಡ ತಿಳಿಸಿದೆ.

‘ಉತ್ತರಕಾಂಡ’ ಆಕ್ಷನ್ ಡ್ರಾಮಾ ಚಿತ್ರವಾಗಿದ್ದು, ಚಿತ್ರದಲ್ಲಿ ಶಿವರಾಜ್‌ಕುಮಾರ್ ಮತ್ತು ಧನಂಜಯ ಮುಖ್ಯ ಭೂಮಿಕೆಯಲ್ಲಿದ್ದಾರೆ. ಧನಂಜಯ ‘ಗಬ್ರು ಸತ್ಯ’ನಾಗಿ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದು, ಅವರ ಲುಕ್‌ ಹೇಗಿರಲಿದೆ ಎನ್ನುವುದನ್ನು ಟೀಸರ್‌ ಮೂಲಕ ಚಿತ್ರತಂಡ ಹೇಳಿದೆ. ಆದರೆ ಶಿವರಾಜ್‌ಕುಮಾರ್‌ ಅವರ ಪಾತ್ರದ ಬಗ್ಗೆ ಚಿತ್ರತಂಡ ಗುಟ್ಟು ಬಿಟ್ಟುಕೊಟ್ಟಿಲ್ಲ.

ಚಿತ್ರದಲ್ಲಿ ಧನಂಜಯ ಜೋಡಿಯಾಗಿ ‘ದುರ್ಗಿ’ ಎಂಬ ಪಾತ್ರದಲ್ಲಿ ಐಶ್ವರ್ಯ ರಾಜೇಶ್‌, ‘ಲಚ್ಚಿ’ಯಾಗಿ ಚೈತ್ರಾ ಜೆ.ಆಚಾರ್‌, ‘ಮಿರ್ಚಿ ಮಲ್ಲಿಗೆ’  ಪಾತ್ರದಲ್ಲಿ ದಿಗಂತ್‌,  ‘ಬಂಡೆ ಕಾಕ’ನಾಗಿ ರಂಗಾಯಣ ರಘು, ‘ಧರ್ಮ’ನಾಗಿ ಗೋಪಾಲಕೃಷ್ಣ ದೇಶಪಾಂಡೆ, ‘ಪಂಡ್ರಿ ಬಾಯ್‌’ಯಾಗಿ ಉಮಾಶ್ರೀ, ‘ಪಾಟೀಲ’  ಪಾತ್ರದಲ್ಲಿ ಯೋಗರಾಜ್‌ ಭಟ್‌ ಕಾಣಿಸಿಕೊಳ್ಳಲಿದ್ದಾರೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!