ರಾಮು ಬ್ಯಾನರ್ ನಲ್ಲಿ ಶಿವಣ್ಣ ಫಿಲ್ಮ್

ಕೋಟಿ ರಾಮು ಅವರ ಬ್ಯಾನರ್ ನಲ್ಲಿ ನಡೆಸುವುದಾಗಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹೇಳಿದ್ದಾರೆ.

ನಿರ್ಮಾಪಕ ರಾಮು ನಿರ್ಮಿಸಿದ್ದ ಕೊನೆಯ ಸಿನಿಮಾ ‘ಅರ್ಜುನ್ ಗೌಡ’ ಚಿತ್ರದ ಪ್ರಿ ರಿಲೀಸ್ ಇವೆಂಟ್‌ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶಿವಣ್ಣ, ” “ರಾಮು ಅವರ ಪ್ರೊಡಕ್ಷನ್‌ನಲ್ಲಿ ನಾನು 6 ಸಿನಿಮಾ ಮಾಡಿದ್ದೇನೆ. ನಿಮ್ಮ ಪ್ರೊಡಕ್ಷನ್ ನ್ನು ನಿಲ್ಲಸಬೇಡಿ. ಇದೇ ಕೊನೆಯ ಸಿನಿಮಾ ಅಂತ ಹೇಳಬೇಡಿ. ನಾವೆಲ್ಲರೂ ನಿಮ್ಮ ಜೊತೆಯಲ್ಲಿ ಇದ್ದೀವಿ. ಸಿಂಹ ನಿಮ್ಮ ಬ್ಯಾನರ್‌ನಲ್ಲಿಯೇ ಮಾಡೋಣ. ನಾನು ಖಂಡಿತಾ ಮಾಡುತ್ತೇನೆ. ಇದು ನಾನು ಮಾಡುತ್ತಿರುವ ಪ್ರಾಮಿಸ್.” ಎಂದು ಮಾಲಾಶ್ರೀ ಅವರಿಗೆ  ಮಾತು ನೀಡಿದ್ದಾರೆ.

“ರಾಮು ನಿರ್ಮಿಸಿದ ಎಕೆ 47 ನನ್ನ 50ನೇ ಸಿನಿಮಾ. ಆ ಸಿನಿಮಾ ಪ್ರಿವಿವ್ಯೂ ಊರ್ವಶಿ ಥಿಯೇಟರ್‌ನಲ್ಲಿತ್ತು. ಆಗ ಅಪ್ಪಾಜಿ ಬಂದಿದ್ರು. ಅದು ಕನ್ನಡದಲ್ಲಿ ಮೊದಲ ಡಿಟಿಎಸ್ ಸಿನಿಮಾ” ಎಂದು ಶಿವಣ್ಣ ಹೇಳಿದ್ದಾರೆ.

“ರಾಮು ಅವರು ನಿಧನ ಆದಾಗ ನನಗೆ ತುಂಬಾ ದುಃಖ ಆಯ್ತು. ಮಾಲಾಶ್ರೀ ಜೊತೆ ಮೊನ್ನೆ ಮಾತಾಡಿದ್ದು. ಅದೂವರೆಗೂ ಮಾತಾಡೇ ಇರಲಿಲ್ಲ. ಏನು ಮಾತಾಡಬೇಕು ಅಂತಾನೇ ಗೊತ್ತಾಗಲಿಲ್ಲ. ಮಾತಾಡಿಬಿಟ್ಟರೆ ಎಲ್ಲಿ ನಾನು ಅತ್ತು ಬಿಡುತ್ತೇನೋ ಅಂತ ಭಯ ಆಗಿತ್ತು. ಅಪ್ಪು ಅಗಲಿದ ಬಳಿಕ ಮಾಲಾಶ್ರೀ ಮನೆಗೆ ಬಂದಾಗಲೇ ನಾನು ಅವರನ್ನು ನೋಡಿದ್ದು.” ಎಂದು ಶಿವಣ್ಣ ನೆನಪಿಸಿಕೊಂಡರು.

“ಡಿ.31ರಂದು ಬಿಡುಗಡೆ ಆಗುತ್ತಿರುವ ‘ ಅರ್ಜುನ್ ಗೌಡ’ ಸಿನಿಮಾ ಯಶಸ್ಸು ಕಾಣಲಿ” ಎಂದು ಶಿವಣ್ಣ ಶುಭ ಹಾರೈಸಿದರು.

ಕ್ರೇಜಿಸ್ಟಾರ್ ರವಿಚಂದ್ರನ್, ರಿಯಲ್‌ಸ್ಟಾರ್ ಉಪೇಂದ್ರ, ಗೋಲ್ಡನ್ ಸ್ಟಾರ್ ಗಣೇಶ್, ಪ್ರಜ್ವಲ್ ದೇವರಾಜ್, ದೇವರಾಜ್, ಸಾಧುಕೋಕಿಲಾ ಸೇರಿದಂತೆ ಕನ್ನಡ ಚಿತ್ರರಂಗದ ಪ್ರಮುಖ ಕಲಾವಿದರು ವೇದಿಕೆ ಮೇಲೆ ಉಪಸ್ಥಿತರಿದ್ದರು.

ಕೋಟಿ ರಾಮು ನಿರ್ಮಾಣದ ಕೊನೆಯ ಚಿತ್ರ ಅರ್ಜುನ್ ಗೌಡ ಆಗಿದೆ.  ಪ್ರಜ್ವಲ್ ದೇವರಾಜ್ ನಟಿಸಿರುವ ಈ ಚಿತ್ರದ ಟ್ರೈಲರ್ ಈಗಾಗಲೇ ಬಿಡುಗಡೆಯಾಗಿದ್ದು ಸಾಕಷ್ಟು ಗಮನ ಸೆಳೆದಿದೆ. ಚಿತ್ರದ ಹಾಡುಗಳು ಚಿತ್ರ ಪ್ರೇಮಿಗಳನ್ನು ತನ್ನೆಡೆಗೆ ಸೆಳೆಯುವಲ್ಲಿ ಯಶಸ್ವಿಯಾಗಿದೆ.
___

Be the first to comment

Leave a Reply

Your email address will not be published. Required fields are marked *

Translate »
error: Content is protected !!