ರಾಮ್ ಚರಣ್ ಗೆ ಅವಮಾನ ಮಾಡಿದ ಶಾರುಖ್

ಬಾಲಿವುಡ್ ನಟ ಶಾರುಖ್ ಖಾನ್ ಟಾಲಿವುಡ್ ಸ್ಟಾರ್ ರಾಮ್ ಚರಣ್ ತೇಜಗೆ ಅನಂತ್ ಅಂಬಾನಿ ಪ್ರಿ ವೆಡ್ಡಿಂಗ್ ಕಾರ್ಯಕ್ರಮದ ವೇದಿಕೆಯಲ್ಲಿ ಇಡ್ಲಿ ವಡಾ ಎಂದು ಕರೆದಿದ್ದು ವಿವಾದಕ್ಕೆ ಕಾರಣವಾಗಿದೆ.

ಜಾಮ್ ನಗರದಲ್ಲಿ ನಡೆದ ಅನಂತ್ ಅಂಬಾನಿ ಪ್ರಿ ವೆಡ್ಡಿಂಗ್ ಕಾರ್ಯಕ್ರಮದಲ್ಲಿ ಶಾರುಖ್ ಖಾನ್, ಸಲ್ಮಾನ್ ಖಾನ್ ಮತ್ತು ಅಮೀರ್ ಖಾನ್ ವೇದಿಕೆಯಲ್ಲಿ ನಾಟು ನಾಟು ಹಾಡಿಗೆ ನೃತ್ಯ ಮಾಡುತ್ತಿದ್ದರು. ನೀತು ಅಂಬಾನಿ ಈ ಸಿನಿಮಾದ ಒರಿಜಿನಲ್ ನಾಯಕ ರಾಮ್ ಚರಣ್ ರನ್ನು ವೇದಿಕೆಗೆ ಕರೆಯಲು ಸೂಚಿಸಿದರು.  ಶಾರುಖ್ ಖಾನ್ ಮೈಕ್ ಹಿಡಿದು ರಾಮ್ ಚರಣ್ ರನ್ನು ಕರೆದರು. ಮೊದಲು ತಮಿಳಿನಲ್ಲಿ ಏನೋ ಹೇಳುವಂತೆ ಮಾಡಿ ಬಳಿಕ ಇಡ್ಲಿ ವಡಾ ರಾಮ್ ಚರಣ್ ಎಂದರು. ಇದು ರಾಮ್ ಚರಣ್ ಗೆ ಮಾಡಿದ ಅವಮಾನ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಮ್ ಚರಣ್ ಪತ್ನಿ ಉಪಾಸನಾ ಮೇಕಪ್ ಆರ್ಟಿಸ್ಟ್ ಜೆಬಾ ಹುಸೇನ್ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ”ಇದರ ನಂತರ ನಾನು ಅಲ್ಲಿರಲು ಬಯಸಲಿಲ್ಲ. ಇದು ರಾಮ್ ಚರಣ್ ಗೆ ಮಾಡಿದ ಅವಮಾನ. ಆಸ್ಕರ್ ಗೆದ್ದ ನಟನನ್ನು, ಸಾಕಷ್ಟು ಜನ ಅಭಿಮಾನಿಗಳನ್ನು ಹೊಂದಿರುವ ಸೌತ್ ನಟನಿಗೆ ಈ ರೀತಿ ಅವಮಾನ ಮಾಡಿದ್ದು ಸರಿಯಲ್ಲ” ಎಂದು ಆಕ್ರೋಶ ಹೊರಹಾಕಿದ್ದಾರೆ.

ಜಾಮ್ ನಗರದಲ್ಲಿ ನಡೆದಿದ್ದ ಅನಂತ್ ಅಂಬಾನಿ ಪ್ರಿ ವೆಡ್ಡಿಂಗ್ ಕಾರ್ಯಕ್ರಮದಲ್ಲಿ ಬಾಲಿವುಡ್, ಕ್ರೀಡಾ ಲೋಕ, ಉದ್ಯಮ ಸೇರಿದಂತೆ ವಿವಿಧ ಕ್ಷೇತ್ರದ ದಿಗ್ಗಜರು ಭಾಗಿಯಾಗಿದ್ದರು. ಸೌತ್ ನಟರ ಪೈಕಿ ಆಹ್ವಾನಿತರಾಗಿದ್ದು ರಾಮ್ ಚರಣ್ ತೇಜ ಮಾತ್ರ. ಅವರು ಕಾರ್ಯಕ್ರಮದಲ್ಲಿ ಪತ್ನಿ ಉಪಾಸನಾ ಸಮೇತ ಭಾಗಿಯಾಗಿದ್ದರು.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!