ಸೆ.17ಕ್ಕೆ ‘ಜಿಗ್ರಿದೋಸ್ತ್’

ಬಿ.ಎನ್.ಗಂಗಾಧರ್ ನಿರ್ಮಿಸಿರುವ ‘ಜಿಗ್ರಿದೋಸ್ತ್’ ಸಿನಿಮಾ ಸೆಪ್ಟೆಂಬರ್ 17ರಂದು ತೆರೆ ಕಾಣಲಿದೆ.

ನಟ, ನಿರ್ದೇಶಕ ಎಸ್.ಮೋಹನ್ ಈ ಚಿತ್ರ ನಿರ್ದೇಶಿಸಿದ್ದು ಇದು ಬಿ.ಎನ್.ಗಂಗಾಧರ್ ನಿರ್ಮಿಸಿರುವ  27ನೇ ಚಿತ್ರ ಆಗಿದೆ. ಈ ಹಿಂದೆ ಅವರು ‘ಅಂಜದ ಗಂಡು’, ‘ಯಾರಿಗೆ ಸಾಲತ್ತೆ ಸಂಬಳ’ ಸಿನಿಮಾ ನಿರ್ಮಾಣ ಮಾಡಿದ್ದರು.

“ನಾವು ಇಷ್ಟ ಪಟ್ಟು ಪಡೆಯುವ ಸಂಬಂಧ ಸ್ನೇಹ ಆಗಿದೆ. ಎಲ್ಲಕ್ಕಿಂತ ಮೀರಿದ್ದು ಸ್ನೇಹ. ಇದನ್ನೇ ನಮ್ಮ ಚಿತ್ರದಲ್ಲಿ ಹೇಳಿದ್ದೇವೆ” ಎಂದು ನಿರ್ದೇಶಕ ಮೋಹನ್ ಹೇಳಿದ್ದಾರೆ.

“ಗಂಗಾಧರ್ ಅವರು ಸುಮಾರು 22 ವರ್ಷಗಳ ಪರಿಚಯ.”ಯಾರಿಗೆ ಸಾಲತ್ತೆ ಸಂಬಳ” ಚಿತ್ರದಲ್ಲಿ ನಟಿಸಲು ನನಗೆ ಅವಕಾಶ ನೀಡಿದ್ದರು. ಈಗ ಅವರದೇ ನಿರ್ಮಾಣದ ಚಿತ್ರ ನಿರ್ದೇಶನ ಮಾಡಿದ್ದೇನೆ” ಎಂದು ಮೋಹನ್ ಖುಷಿಯಿಂದ ಹೇಳಿದ್ದಾರೆ.

“ಕಳೆದ ವರ್ಷ ಈ ಚಿತ್ರ ಬಿಡುಗಡೆ ಅಗಬೇಕಿತ್ತು. ಆದರೆ ಕರೋನಾ ಕಾರಣದಿಂದ ತಡವಾಗಿ ಈಗ ಚಿತ್ರ ಬಿಡುಗಡೆ ಮಾಡುತ್ತಿದ್ದೇವೆ. ಚಿತ್ರವನ್ನು ಪ್ರೇಕ್ಷಕರು ನೋಡಿ ಹರಸಬೇಕು” ಎಂದು ನಿರ್ಮಾಪಕ ಬಿ.ಎನ್.ಗಂಗಾಧರ್ ಕೋರಿದ್ದಾರೆ.

ಚಿತ್ರದಲ್ಲಿ ಸ್ಕಂದ ಅಶೋಕ್, ಚೇತನ್ ಸ್ನೇಹಿತರಾಗಿ ಕಾಣಿಸಿಕೊಂಡಿದ್ದಾರೆ. ಅಕ್ಷತಾ, ಸುಷ್ಮ ನಾಯಕಿಯಾಗಿ ನಟಿಸಿದ್ದಾರೆ. ಪಂಚಭಾಷಾ ನಟ ವಿನೋದ್ ಆಳ್ವ, ಮಾಜಿ ಸಚಿವ ಟಿ.ಬಿ.ಜಯಚಂದ್ರ, ಚಿತ್ಕಲಾ ಬಿರಾದಾರ್, ಇಫ್ರಾನ್, ಮಂಜುನಾಥ್, ರಮೇಶ್ ಪಂಡಿತ್, ಟಿನ್ನಿಸ್ ಕೃಷ್ಣ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಪ್ರಸಾದ್ ಬಾಬು ಛಾಯಾಗ್ರಹಣ, ಶಿವಪ್ರಸಾದ್ ಯಾದವ್ ಸಂಕಲನ, ಕೌರವ ವೆಂಕಟೇಶ್ ಸಾಹಸ ನಿರ್ದೇಶನ, ಮದನ್ – ಹರಿಣಿ ಅವರ ನೃತ್ಯ ನಿರ್ದೇಶನ, ಈ‌ ಚಿತ್ರಕ್ಕಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!