ಸಿದ್ದು ಎಸ್ ನಿರ್ಮಿಸಿ, ನಿರ್ದೇಶಿಸಿರುವ ‘ಸಂತೋಷ ಸಂಗೀತ’ ಚಿತ್ರ ನವೆಂಬರ್ 8 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಪ್ರೀತಿ, ಬದ್ಧತೆ, ಮತ್ತು ಜೀವನದ ಆವಶ್ಯಕ ನೈತಿಕತೆಗಳ ಹೃದಯಸ್ಪರ್ಶಿ ಕಥೆಯ “ಸಂತೋಷ ಸಂಗೀತ” ಚಿತ್ರವು ಪ್ರೀತಿಯ ಶ್ರೇಷ್ಠತೆ, ಬದ್ಧತೆ ಹಾಗೂ ಸಂಬಂಧಗಳ ಮೌಲ್ಯವನ್ನು ಶ್ರದ್ಧೆಯಿಂದ ತೋರಿಸುತ್ತದೆ.
ಈ ಚಿತ್ರದ ನಾಯಕ – ನಾಯಕಿಯಾಗಿ ಅರ್ನವ್ ವಿನ್ಯಾಸ್ ಹಾಗೂ ರಾಣಿ ವರದ್ ನಟಿಸಿದ್ದಾರೆ. ನಕ್ಷತ್ರ, ದೊಡ್ಡಣ್ಣ, ಅವಿನಾಶ್, ಲಯಕೋಕಿಲ, ಮಡೆನೂರ್ ಮನು, ಮಿಮಿಕ್ರಿ ಗೋಪಿ, ವಾಣಿ, ಸೀತಾ ಕೋಟೆ, ಸೂರ್ಯ ಕಿರಣ್, ಅಮಿತ್ ಮುಂತಾದವರು ತಾರಾಬಳಗದಲ್ಲಿದ್ದಾರೆ.
ಈ ಚಿತ್ರವು ಪ್ರೀತಿಯು ತಾತ್ಕಾಲಿಕ ನಿರ್ಧಾರಗಳ ಸುಳಿಯಲ್ಲಿ ಸಿಕ್ಕಿದಾಗ ಅದನ್ನು ಎದುರಿಸುವ ಬಗೆ ಮತ್ತು ಬದ್ಧತೆಯ ಪ್ರಾಮುಖ್ಯತೆಯ ಬಗ್ಗೆ ಒಂದು ದೀಪ್ತಿಕಾರ ಸಂದೇಶವನ್ನು ಹೊಂದಿದೆ. ಪ್ರೀತಿ ಮತ್ತು ಸಂಬಂಧದ ನಡುವಣ ಎಚ್ಚರಿಕೆಯ ಅಂಶಗಳು ಪ್ರೀತಿಯ ನಿಜವಾದ ಮೌಲ್ಯವನ್ನು ತೋರಿಸುತ್ತವೆ. ಸತ್ಕಥೆ, ಗಟ್ಟಿಯಾದ ಸಂಭಾಷಣೆ ಮತ್ತು ಜೀವನಕ್ಕೆ ಪಾಠ ನೀಡುವ ಕಥಾಹಂದರ-ಎಲ್ಲವನ್ನೂ ಇದು ಒಳಗೊಂಡಿದೆ ಎಂದು ನಿರ್ದೇಶಕ ಸಿದ್ದು ಮಾಹಿತಿ ನೀಡಿದ್ದಾರೆ.
ಸಿದ್ದು ‘ಸಂತೋಷ ಸಂಗೀತ’ ಚಿತ್ರಕ್ಕೆ ಕಥೆ ಬರೆಯುವುದರೊಂದಿಗೆ ಸಂಗೀತ ಸಂಯೋಜನೆಯನ್ನು ಮಾಡಿದ್ದಾರೆ. ಪ್ರಮೋದ್ ಭಾರತೀಯ ಛಾಯಾಗ್ರಹಣ, ವಿನಯ್ ಯದುನಂದನ್ ಸಂಕಲನ ಚಿತ್ರಕ್ಕಿದೆ.





Be the first to comment