ಬದಲಾಗಲಿದೆ ಗೋದ್ರಾ ಚಿತ್ರದ ಟೈಟಲ್

ಸತೀಶ್ ನಿನಾಸಂ ಅವರ ಹೊಸ ಚಿತ್ರ ಗೋದ್ರಾದ ಟೈಟಲ್ ಬದಲಾಗಲಿದ್ದು, ಶೀಘ್ರವೇ ಚಿತ್ರ ಬಿಡುಗಡೆ ಆಗಲಿದೆ.

ಈ ಬಗ್ಗೆ ಸತೀಶ್ ಮಾಹಿತಿ ನೀಡಿದ್ದಾರೆ. “ನಾವು ಯಾರ ಮನಸ್ಸನ್ನು ನೋಯಿಸುವ ಇಚ್ಛೆಯನ್ನು ಹೊಂದಿಲ್ಲ, ಹಾಗಾಗಿ ಸಿಬಿಎಫ್‍ಸಿ ನಿರ್ದೇಶನದಂತೆ ಚಿತ್ರದ ಟೈಟಲ್ ಬದಲಾಯಿಸಲು ಒಪ್ಪಿಕೊಂಡಿದ್ದೇವೆ” ಎಂದಿದ್ದಾರೆ.
ಸೆನ್ಸಾರ್​​ ಮಂಡಳಿ ಈ ಹಿಂದೆ 2020ರಲ್ಲೇ ಚಿತ್ರದ ಟೈಟಲ್ ಕೈಬಿಡುವಂತೆ ಸೂಚಿಸಿತ್ತು. ಅದನ್ನು ಚಿತ್ರತಂಡವು ಒಪ್ಪಿಕೊಂಡಿದ್ದು ಈಗ ಟೈಟಲ್ ನ್ನು ಅಂತಿಮಗೊಳಿಸಿದ್ದು ಕೆಲ ದಿನಗಳಲ್ಲೇ ಹೆಸರು ಬದಲಾವಣೆಯಾಗಲಿದೆ.

2002 ರಲ್ಲಿ ದೇಶದೆಲ್ಲೆಡೆ ಸದ್ದು ಮಾಡಿದ್ದ ಗೋಧ್ರಾ ಹತ್ಯಾಕಾಂಡದ ಕಾರಣ ಈ ಟೈಟಲ್ ಬದಲಿಸಲು ಸೆನ್ಸಾರ್ ಮಂಡಳಿ ಸೂಚಿಸಿದೆ. ಚಿತ್ರತಂಡ ಈ ಬಗ್ಗೆ ಹೆಚ್ಚಿನ ವಿವಾದ ಸೃಷ್ಟಿ ಆಗದಂತೆ ತಮ್ಮ ಚಿತ್ರಕ್ಕೂ, 2002 ರಲ್ಲಿ ಗುಜರಾತ್ ನಲ್ಲಿ ನಡೆದಿದ್ದ ಗೋಧ್ರಾ ಕಾಂಡಕ್ಕೂ ಯಾವುದೇ ರೀತಿಯ ಸಂಬಂಧ ಇಲ್ಲ ಎಂಬುದನ್ನು ಸ್ಪಷ್ಟ ಪಡಿಸಿದೆ. ಈಗ ಟೈಟಲ್ ಬದಲಿಸಲು ಮುಂದಾಗಿದೆ.

ಚಿತ್ರದ ಮೊದಲ ಲುಕ್ ಹಾಗೂ ಟೀಸರ್ ಗಳು ಈಗಾಗಲೇ ಬಿಡುಗಡೆಗೊಂಡಿದ್ದು ಚಿತ್ರಾಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಹುಟ್ಟಿಸಿದೆ.

ಕೆ.ಎಸ್ ನಂದೀಶ್ ಅವರ ನಿರ್ದೇಶನವಿರುವ ಈ ಚಿತ್ರ ತೆರೆಗೆ ಬರಲು ಸಿದ್ಧತೆ ನಡೆಸಲಾಗಿದೆ. ಚಿತ್ರದಲ್ಲಿ ಮುಖ್ಯ ನಾಯಕನ ಪಾತ್ರದಲ್ಲಿ ಸತೀಶ್, ನಾಯಕಿಯ ಪಾತ್ರದಲ್ಲಿ ಶ್ರದ್ಧಾ ಶ್ರೀನಾಥ್ ನಟಿಸಿದ್ದಾರೆ.
ಲೂಸಿಯಾ ಚಿತ್ರದ ಮೂಲಕ ಸತೀಶ್ ಅವರು ನಾಯಕ ನಟರಾಗಿ ಕನ್ನಡ ಚಿತ್ರದಲ್ಲಿ ಗುರುತಿಸಿಕೊಂಡರು. ಬಳಿಕ ಅವರು ಅನೇಕ ಚಿತ್ರದಲ್ಲಿ ಉತ್ತಮವಾಗಿ ನಟಿಸಿದ್ದು ಭಿನ್ನ ಪಾತ್ರದ ಮೂಲಕ ಗುರುತಿಸಿಕೊಂಡಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!